Home / ಲೇಖನ / ವಿಜ್ಞಾನ / ಸ್ಮಾರ್ಟ್ ಫೋನ್‌ಗಳು

ಸ್ಮಾರ್ಟ್ ಫೋನ್‌ಗಳು

mobile-616012_640ಈ ಸ್ಮಾರ್ಟ್ ಫೋನುಗಳು ಪರ್ಸನಲ್ ಆರ್ಗನ್ಶೆಜರ್ ಮತ್ತು ಸೆಲ್ಯೂಲರ್ ಫೋನ್‌ಗಳ ಸಮ್ಮಿಶ್ರಣವಾಗಿದೆ. ನಿಸ್ತಂತು ಫೋನು ಮತ್ತು ಎಲೆಕ್ಟ್ರಿಕಲ್ ಆರ್ಗನೈಜರ್ ಎರಡನ್ನು ಹೊಂದಿರುವವರಿಗೆ ಇದು ಅತ್ಯಂತ ಸಹಕಾರಿಯಾಗಬಲ್ಲ ಉಪಕರಣವಾಗಿದೆ. ಕೀಬೋರ್ಡ್ ಮತ್ತು ಒಳಗಡೆಗೆ ಸ್ಕ್ರೀನ್ ಹೊಂದಿರುವ ಇದು ಸಂಪರ್ಕ ಮತ್ತು ಸಂಘಟನೆ ಎರಡನ್ನು ಒಳಗೊಂಡ ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾಗಿದೆ. ಅಮೇರಿಕಾ ಸೇರಿದಂತೆ ಯೂರೋಪಿನ ಹಲವಾರು ರಾಷ್ಟ್ರಗಳ ಗಮನ ಸೆಳೆಯಲು ವಿಫಲವಾದರೂ ಇದರ ಕಲ್ಪನೆ ಮಾತ್ರ ಅದ್ಭುತಪಾದದ್ದು ಈಗಾಗಲೇ ಸೆಲ್ಯೂಲರ್ ಫೋನ್ ವಿಶ್ವವಿಖ್ಯಾತಿಗಳಿಸಿರುವ ಮೋಟರೋಲಾ ಮತ್ತು ಕ್ವಾಲ್‌ಕಾಮ್ ಎರಡೂ ಕಂಪನಿಗಳು ಈ ದಿಸೆಯಲ್ಲಿ ಸ್ಪರ್ಧಾತ್ಮಕವಾಗಿ ತಯಾರಿಸುತ್ತ ಮಾರುಕಟ್ಟೆಗೆ ಬಿಡುಗಡೆಗೆ ಸೆಣಸುತ್ತಲಿದೆ.

ಈ ದಿನಗಳಲ್ಲಿ ಉಪಯೋಗಿಸುತ್ತಿರುವ ಸೆಲ್‌ಫೋನ್‌ಗಳಿಗಿಂತ ಎರಡುಪಟ್ಟು ಭಾರವಾದ ಈ ಸ್ಮಾರ್ಟ್ ಫೋನ್ ಬಹುಮುಖ ಸೇವೆಯನ್ನು ನೀಡುತ್ತದೆ. ಇದರಲ್ಲಿ L.C.Dಸ್ಕ್ರೀನ್ ಮತ್ತು ಜನಪ್ರಿಯ ಚಿತ್ರಗಳನ್ನು ಹೊಂದಿದೆ. ೩ ಕಾಮನ್‌ನ ಫಾಮ್ ಉಪಕರಣವನ್ನು ಉಪಯೋಗಿಸಿದವರಿಗೆ ಇದು ಸುಪರಿಚಿತ. ಅಂದರೆ ಪಿಡಿಕ್ಯು ಡಿಜಿಟಲ್ ದೃಶ್ಯಗಳನ್ನು ಒಳಗೊಂಡ ನಿಸ್ತಂತು (ವೈರ್‌ಲೆಸ್) ಫೋನ್ ಮತ್ತು ಫಾರ್ಮ್ ಆರ್ಗನೈಜರ್ ಹೊಂದಿದೆ.

ಸಿ.ಡಿ.ಎಂ.ಎ. ಪ್ರೊಟೊಕಾಲ್, ಡಿಜಿಟಲ್‌ಫೋನ್ ತರಹವೇ ಪಿಡಿಕ್ಯೂ ಸಹ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. ‘ವಾಯ್ಸ್ ಮೇಲ್’ ಕರೆಮಾಡುವವರ ಪರಿಚಯ, ಚಿಕ್ಕದಾದ ಸಂದೇಶ ಸೇವೆ. ಹೀಗೆ ದೂರವಾಣಿ ಸಂಬಂಧಿತ ಎಲ್ಲ ಸೇವೆಗಳು ಡಯಲ್ ಪ್ಯಾಡ್‌ಮೂಲಕ ನಡೆಯುತ್ತವೆ. ಮುಟ್ಟಿದ ತಕ್ಷಣ ತೆರೆದುಕೊಳ್ಳು ಕೀಪ್ಯಾಡ್ ಸ್ಕ್ರೀನನ್ನು ಕ್ರಿಯಾಶೀಲಗೊಳಿಸುತ್ತದೆ. ನಿಮಗೆ ಅಗತ್ಯವಾದ ಮಾಹಿತಿಗಳನ್ನು ಒದಗಿಸುತ್ತದೆ. ಈ ಫೋನ್ ಬಳಕೆಯಿಂದ ಗಮನಾರ್ಹ ಉಳಿತಾಯ ಮಾಡಬಹುದಲ್ಲದೇ ತಕ್ಷಣದಲ್ಲೇ ನಿಮ್ಮ ಅಂದಿನ ಕಾರ್ಯಕ್ರಮ ವಿವರ, ವಿಳಾಸಗಳು, ಪ್ರಮುಖ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳನ್ನು ಒದಗಿಸುವುದರ ಮೂಲಕ ಉಪಕಾರಿಯಾಗಿದೆ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...