Home / ಲೇಖನ / ಇತರೆ / ಮೂಲಧಾತು ಒಂದೇ

ಮೂಲಧಾತು ಒಂದೇ

ಪ್ರಿಯ ಸಖಿ,

ಇವನೊಬ್ಬ ಬೊಂಬೆ ಮಾರುವವನು. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ವಿವಿಧ ರೀತಿಯ ಬೊಂಬೆಗಳನ್ನು ಬಿದಿರಿನ ದೊಡ್ಡ ಬುಟ್ಟಿಯಲ್ಲಿ ಹೊತ್ತುಕೊಂಡು ಅವನು ಬೀದಿ ಬೀದಿಗಳಲ್ಲಿ ತಿರುಗಿ ವ್ಯಾಪಾರ ಮಾಡುತ್ತಾನೆ. ಒಂದೊಂದು ಬೊಂಬೆಗೂ ಬೇರೆ ಬೇರೆ ಬೆಲೆ. ಹಾಗೇ ಬೊಂಬೆಗಳೂ ವಿಭಿನ್ನ ಆಕಾರ, ರೂಪ ಪಡೆದಿವೆ.

ಇವನ ಬುಟ್ಟಿಯಲ್ಲಿ ಎಲ್ಲ ಬೊಂಬೆಯೂ ಉಂಟು. ಗಣಪತಿ, ಕೃಷ್ಣ-ರಾಧೆ, ಶಿವ-ಪಾರ್ವತಿ, ವಿವೇಕಾನಂದ, ಗಾಂಧೀಜಿ, ಏಸುಕ್ರಿಸ್ತ, ನವಿಲು, ಡುಮ್ಮ-ಡುಮ್ಮಿ, ಗಿಣಿಗಳು, ಅಳುವ ಮಗು, ಬಸವಣ್ಣ, ಗಾಂಧೀಜಿಯವರ ತತ್ವ ಸಾರುವ ಮೂರು ಕೋತಿಗಳು…. ಒಂದೆ, ಎರಡೇ ಇವನ ಬುಟ್ಟಿ ಎಂದರೆ ಒಂದು ಮಿನಿ ಭಾರತವಿದ್ದಂತೆ! ಅದರೊಳಗೆ ಎಷ್ಟೊಂದು ಬಣ್ಣದ ವಿಭಿನ್ನ ರೀತಿಯ ಬೊಂಬೆಗಳು! ಒಂದೊಂದು ಬೊಂಬೆಗೂ ಅದರದ್ದೇ ಆದ ಮಹತ್ವ, ತತ್ವ, ಅದರದ್ದೇ ವಿಭಿನ್ನ ರೂಪು, ಚಾಪು. ಬೊಂಬೆಗೆ ಬಳಿದ ಬಣ್ಣಗಳೂ ಬೇರೆ ಬೇರೆ. ಆದರೆ ಎಲ್ಲಾ ಬೊಂಬೆಗಳನ್ನು ತಯಾರಿಸಲು ಉಪಯೋಗಿಸಿದ ಮೂಲವಸ್ತು ಮಾತ್ರ ಒಂದೇ!

ಸಖಿ, ಒಮ್ಮೆ ಆ ಬೊಂಬೆಗಳಿಗೆ ಮಾನವರನ್ನು ಹೋಲಿಸಿ ನೋಡಿಕೊಂಡರೆ, ಹೇಗೆ? ಆ ಬೊಂಬೆಗಳಂತೆಯೇ ನಮ್ಮೆಲ್ಲರ ಹುಟ್ಟಿನ ಮೂಲಧಾತು ಒಂದೇ. ಅದೇ ರಕ್ತ ಮಾಂಸ ಜೀವ… ಇತ್ಯಾದಿಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಹುಟ್ಟಿಗೆ ಮೊದಲೇ ಮಗುವಿನ ಜಾತಿಯನ್ನು ಗುರುತಿಸುವ ಯಾವ ಸಂಕೇತವನ್ನೂ ಮಗುವಿನಲ್ಲಿ ನಾವು ಕಾಣುವುದಿಲ್ಲ. ಆದರೆ ಮಗು ಹುಟ್ಟಿದೊಡನೆ, ಹುಟ್ಟಿದ ಮನೆಯ ಜಾತಿ, ಭಾಷೆ, ಸಂಸ್ಕಾರ, ಆಚಾರ ವಿಚಾರಗಳಿಗೆ ತಕ್ಕಂತೆ ಮಗುವಿನ ಪರಿಸರವೂ ನಿರ್ಮಾಣವಾಗುತ್ತದೆ. ಮುಸಲ್ಮಾನರ ಮನೆಯಲ್ಲಿ ಹುಟ್ಟಿದ ಜೀವ ಮುಸ್ಲೀಮನಾಗುತ್ತದೆ. ಹಿಂದುವಿನ ಮನೆಯಲ್ಲಿ ಹುಟ್ಟಿದ ಜೀವ ಹಿಂದುವಾಗುತ್ತದೆ. ಹಾಗೇ ಇನ್ನಿತರ ಜಾತಿಗಳಲ್ಲಿ ಹುಟ್ಟಿದ ಜೀವವೂ ಕೂಡ.  ಆದರೆ ವಿಶಾಲಾರ್ಥದಲ್ಲಿ ವಿವೇಚಿಸಿದರೆ ನಾವಲ್ಲರೂ ಒಂದೇ!

ಈ ಸರಳ ತತ್ವವನ್ನೇ ಸಂಕುಚಿತಗೊಳಿಸಿರುವ ನಾವು ಮೇಲು-ಕೀಳು, ಶ್ರೇಷ್ಠ-ನೀಚ ಎಂದೆಲ್ಲಾ ಕಿತ್ತಾಡಿ ಹೊಡೆದಾಡುತ್ತೇವೆ. ನಮ್ಮ ಬಣ್ಣ, ರೂಪ, ಆಚಾರ, ವಿಚಾರ, ವೇಷಭೂಷಣ, ಬುದ್ಧಿ, ವಿವೇಕ ಎಲ್ಲವೂ ವಿಭಿನ್ನವಾಗಿಯೇ ಇರಬಹುದು- ಆದರೆ ಬೊಂಬೆಗೆ ಮೂಲವಸ್ತು ಒಂದೇ ಇದ್ದಂತೆ, ನಮ್ಮೆಲ್ಲರ ಹುಟ್ಟಿಗೆ ಕಾರಣವಾಗಿರುವ ಮೂಲಧಾತು ಒಂದೇ! ಇವನ್ನೆಂದೂ ನಾವು ಮರೆಯಬಾರದು. ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್