Home / ಲೇಖನ / ಇತರೆ / ಮೂಲಧಾತು ಒಂದೇ

ಮೂಲಧಾತು ಒಂದೇ

ಪ್ರಿಯ ಸಖಿ,

ಇವನೊಬ್ಬ ಬೊಂಬೆ ಮಾರುವವನು. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ವಿವಿಧ ರೀತಿಯ ಬೊಂಬೆಗಳನ್ನು ಬಿದಿರಿನ ದೊಡ್ಡ ಬುಟ್ಟಿಯಲ್ಲಿ ಹೊತ್ತುಕೊಂಡು ಅವನು ಬೀದಿ ಬೀದಿಗಳಲ್ಲಿ ತಿರುಗಿ ವ್ಯಾಪಾರ ಮಾಡುತ್ತಾನೆ. ಒಂದೊಂದು ಬೊಂಬೆಗೂ ಬೇರೆ ಬೇರೆ ಬೆಲೆ. ಹಾಗೇ ಬೊಂಬೆಗಳೂ ವಿಭಿನ್ನ ಆಕಾರ, ರೂಪ ಪಡೆದಿವೆ.

ಇವನ ಬುಟ್ಟಿಯಲ್ಲಿ ಎಲ್ಲ ಬೊಂಬೆಯೂ ಉಂಟು. ಗಣಪತಿ, ಕೃಷ್ಣ-ರಾಧೆ, ಶಿವ-ಪಾರ್ವತಿ, ವಿವೇಕಾನಂದ, ಗಾಂಧೀಜಿ, ಏಸುಕ್ರಿಸ್ತ, ನವಿಲು, ಡುಮ್ಮ-ಡುಮ್ಮಿ, ಗಿಣಿಗಳು, ಅಳುವ ಮಗು, ಬಸವಣ್ಣ, ಗಾಂಧೀಜಿಯವರ ತತ್ವ ಸಾರುವ ಮೂರು ಕೋತಿಗಳು…. ಒಂದೆ, ಎರಡೇ ಇವನ ಬುಟ್ಟಿ ಎಂದರೆ ಒಂದು ಮಿನಿ ಭಾರತವಿದ್ದಂತೆ! ಅದರೊಳಗೆ ಎಷ್ಟೊಂದು ಬಣ್ಣದ ವಿಭಿನ್ನ ರೀತಿಯ ಬೊಂಬೆಗಳು! ಒಂದೊಂದು ಬೊಂಬೆಗೂ ಅದರದ್ದೇ ಆದ ಮಹತ್ವ, ತತ್ವ, ಅದರದ್ದೇ ವಿಭಿನ್ನ ರೂಪು, ಚಾಪು. ಬೊಂಬೆಗೆ ಬಳಿದ ಬಣ್ಣಗಳೂ ಬೇರೆ ಬೇರೆ. ಆದರೆ ಎಲ್ಲಾ ಬೊಂಬೆಗಳನ್ನು ತಯಾರಿಸಲು ಉಪಯೋಗಿಸಿದ ಮೂಲವಸ್ತು ಮಾತ್ರ ಒಂದೇ!

ಸಖಿ, ಒಮ್ಮೆ ಆ ಬೊಂಬೆಗಳಿಗೆ ಮಾನವರನ್ನು ಹೋಲಿಸಿ ನೋಡಿಕೊಂಡರೆ, ಹೇಗೆ? ಆ ಬೊಂಬೆಗಳಂತೆಯೇ ನಮ್ಮೆಲ್ಲರ ಹುಟ್ಟಿನ ಮೂಲಧಾತು ಒಂದೇ. ಅದೇ ರಕ್ತ ಮಾಂಸ ಜೀವ… ಇತ್ಯಾದಿಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಹುಟ್ಟಿಗೆ ಮೊದಲೇ ಮಗುವಿನ ಜಾತಿಯನ್ನು ಗುರುತಿಸುವ ಯಾವ ಸಂಕೇತವನ್ನೂ ಮಗುವಿನಲ್ಲಿ ನಾವು ಕಾಣುವುದಿಲ್ಲ. ಆದರೆ ಮಗು ಹುಟ್ಟಿದೊಡನೆ, ಹುಟ್ಟಿದ ಮನೆಯ ಜಾತಿ, ಭಾಷೆ, ಸಂಸ್ಕಾರ, ಆಚಾರ ವಿಚಾರಗಳಿಗೆ ತಕ್ಕಂತೆ ಮಗುವಿನ ಪರಿಸರವೂ ನಿರ್ಮಾಣವಾಗುತ್ತದೆ. ಮುಸಲ್ಮಾನರ ಮನೆಯಲ್ಲಿ ಹುಟ್ಟಿದ ಜೀವ ಮುಸ್ಲೀಮನಾಗುತ್ತದೆ. ಹಿಂದುವಿನ ಮನೆಯಲ್ಲಿ ಹುಟ್ಟಿದ ಜೀವ ಹಿಂದುವಾಗುತ್ತದೆ. ಹಾಗೇ ಇನ್ನಿತರ ಜಾತಿಗಳಲ್ಲಿ ಹುಟ್ಟಿದ ಜೀವವೂ ಕೂಡ.  ಆದರೆ ವಿಶಾಲಾರ್ಥದಲ್ಲಿ ವಿವೇಚಿಸಿದರೆ ನಾವಲ್ಲರೂ ಒಂದೇ!

ಈ ಸರಳ ತತ್ವವನ್ನೇ ಸಂಕುಚಿತಗೊಳಿಸಿರುವ ನಾವು ಮೇಲು-ಕೀಳು, ಶ್ರೇಷ್ಠ-ನೀಚ ಎಂದೆಲ್ಲಾ ಕಿತ್ತಾಡಿ ಹೊಡೆದಾಡುತ್ತೇವೆ. ನಮ್ಮ ಬಣ್ಣ, ರೂಪ, ಆಚಾರ, ವಿಚಾರ, ವೇಷಭೂಷಣ, ಬುದ್ಧಿ, ವಿವೇಕ ಎಲ್ಲವೂ ವಿಭಿನ್ನವಾಗಿಯೇ ಇರಬಹುದು- ಆದರೆ ಬೊಂಬೆಗೆ ಮೂಲವಸ್ತು ಒಂದೇ ಇದ್ದಂತೆ, ನಮ್ಮೆಲ್ಲರ ಹುಟ್ಟಿಗೆ ಕಾರಣವಾಗಿರುವ ಮೂಲಧಾತು ಒಂದೇ! ಇವನ್ನೆಂದೂ ನಾವು ಮರೆಯಬಾರದು. ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...