Home / ಲೇಖನ / ಇತರೆ / ಮೂಲಧಾತು ಒಂದೇ

ಮೂಲಧಾತು ಒಂದೇ

ಪ್ರಿಯ ಸಖಿ,

ಇವನೊಬ್ಬ ಬೊಂಬೆ ಮಾರುವವನು. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ವಿವಿಧ ರೀತಿಯ ಬೊಂಬೆಗಳನ್ನು ಬಿದಿರಿನ ದೊಡ್ಡ ಬುಟ್ಟಿಯಲ್ಲಿ ಹೊತ್ತುಕೊಂಡು ಅವನು ಬೀದಿ ಬೀದಿಗಳಲ್ಲಿ ತಿರುಗಿ ವ್ಯಾಪಾರ ಮಾಡುತ್ತಾನೆ. ಒಂದೊಂದು ಬೊಂಬೆಗೂ ಬೇರೆ ಬೇರೆ ಬೆಲೆ. ಹಾಗೇ ಬೊಂಬೆಗಳೂ ವಿಭಿನ್ನ ಆಕಾರ, ರೂಪ ಪಡೆದಿವೆ.

ಇವನ ಬುಟ್ಟಿಯಲ್ಲಿ ಎಲ್ಲ ಬೊಂಬೆಯೂ ಉಂಟು. ಗಣಪತಿ, ಕೃಷ್ಣ-ರಾಧೆ, ಶಿವ-ಪಾರ್ವತಿ, ವಿವೇಕಾನಂದ, ಗಾಂಧೀಜಿ, ಏಸುಕ್ರಿಸ್ತ, ನವಿಲು, ಡುಮ್ಮ-ಡುಮ್ಮಿ, ಗಿಣಿಗಳು, ಅಳುವ ಮಗು, ಬಸವಣ್ಣ, ಗಾಂಧೀಜಿಯವರ ತತ್ವ ಸಾರುವ ಮೂರು ಕೋತಿಗಳು…. ಒಂದೆ, ಎರಡೇ ಇವನ ಬುಟ್ಟಿ ಎಂದರೆ ಒಂದು ಮಿನಿ ಭಾರತವಿದ್ದಂತೆ! ಅದರೊಳಗೆ ಎಷ್ಟೊಂದು ಬಣ್ಣದ ವಿಭಿನ್ನ ರೀತಿಯ ಬೊಂಬೆಗಳು! ಒಂದೊಂದು ಬೊಂಬೆಗೂ ಅದರದ್ದೇ ಆದ ಮಹತ್ವ, ತತ್ವ, ಅದರದ್ದೇ ವಿಭಿನ್ನ ರೂಪು, ಚಾಪು. ಬೊಂಬೆಗೆ ಬಳಿದ ಬಣ್ಣಗಳೂ ಬೇರೆ ಬೇರೆ. ಆದರೆ ಎಲ್ಲಾ ಬೊಂಬೆಗಳನ್ನು ತಯಾರಿಸಲು ಉಪಯೋಗಿಸಿದ ಮೂಲವಸ್ತು ಮಾತ್ರ ಒಂದೇ!

ಸಖಿ, ಒಮ್ಮೆ ಆ ಬೊಂಬೆಗಳಿಗೆ ಮಾನವರನ್ನು ಹೋಲಿಸಿ ನೋಡಿಕೊಂಡರೆ, ಹೇಗೆ? ಆ ಬೊಂಬೆಗಳಂತೆಯೇ ನಮ್ಮೆಲ್ಲರ ಹುಟ್ಟಿನ ಮೂಲಧಾತು ಒಂದೇ. ಅದೇ ರಕ್ತ ಮಾಂಸ ಜೀವ… ಇತ್ಯಾದಿಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಹುಟ್ಟಿಗೆ ಮೊದಲೇ ಮಗುವಿನ ಜಾತಿಯನ್ನು ಗುರುತಿಸುವ ಯಾವ ಸಂಕೇತವನ್ನೂ ಮಗುವಿನಲ್ಲಿ ನಾವು ಕಾಣುವುದಿಲ್ಲ. ಆದರೆ ಮಗು ಹುಟ್ಟಿದೊಡನೆ, ಹುಟ್ಟಿದ ಮನೆಯ ಜಾತಿ, ಭಾಷೆ, ಸಂಸ್ಕಾರ, ಆಚಾರ ವಿಚಾರಗಳಿಗೆ ತಕ್ಕಂತೆ ಮಗುವಿನ ಪರಿಸರವೂ ನಿರ್ಮಾಣವಾಗುತ್ತದೆ. ಮುಸಲ್ಮಾನರ ಮನೆಯಲ್ಲಿ ಹುಟ್ಟಿದ ಜೀವ ಮುಸ್ಲೀಮನಾಗುತ್ತದೆ. ಹಿಂದುವಿನ ಮನೆಯಲ್ಲಿ ಹುಟ್ಟಿದ ಜೀವ ಹಿಂದುವಾಗುತ್ತದೆ. ಹಾಗೇ ಇನ್ನಿತರ ಜಾತಿಗಳಲ್ಲಿ ಹುಟ್ಟಿದ ಜೀವವೂ ಕೂಡ.  ಆದರೆ ವಿಶಾಲಾರ್ಥದಲ್ಲಿ ವಿವೇಚಿಸಿದರೆ ನಾವಲ್ಲರೂ ಒಂದೇ!

ಈ ಸರಳ ತತ್ವವನ್ನೇ ಸಂಕುಚಿತಗೊಳಿಸಿರುವ ನಾವು ಮೇಲು-ಕೀಳು, ಶ್ರೇಷ್ಠ-ನೀಚ ಎಂದೆಲ್ಲಾ ಕಿತ್ತಾಡಿ ಹೊಡೆದಾಡುತ್ತೇವೆ. ನಮ್ಮ ಬಣ್ಣ, ರೂಪ, ಆಚಾರ, ವಿಚಾರ, ವೇಷಭೂಷಣ, ಬುದ್ಧಿ, ವಿವೇಕ ಎಲ್ಲವೂ ವಿಭಿನ್ನವಾಗಿಯೇ ಇರಬಹುದು- ಆದರೆ ಬೊಂಬೆಗೆ ಮೂಲವಸ್ತು ಒಂದೇ ಇದ್ದಂತೆ, ನಮ್ಮೆಲ್ಲರ ಹುಟ್ಟಿಗೆ ಕಾರಣವಾಗಿರುವ ಮೂಲಧಾತು ಒಂದೇ! ಇವನ್ನೆಂದೂ ನಾವು ಮರೆಯಬಾರದು. ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...