Home / ಕವನ / ಕವಿತೆ / ದೇಶಾವರಿ

ದೇಶಾವರಿ

ಬರ್ರಿ ಹೀಗೇ ದೇಶಾವರಿ, ಮಾತಾಡಾಣ,
ನಿಮ್ಮ ಕಡೆ ಮಳೆ ಬೆಳಿ ಹೆಂಗೆ? ಅಷ್ಟೇ! ಎಲ್ಲಾ ಕಡಿಗೂ
ದೇಶಾದಾಗೆಷ್ಟು ಪಾರ್ಟಿಗಳನಾ ಇರಲಿ
ನಮ್ಮೂರಗೆಳ್ಡೆ ಪಾರ್ಟಿ ನೋಡ್ರಿ ಎಂದೆಂದಿಗೂ,
ನಿಮ್ಮೂರಾನ ಪಾರ್ಟಿಗಳು ಎಷ್ಟು ಮನಿ ಮುರದುವು?
ಎಷ್ಟು ಬಣವಿ ಸುಟ್ಟು ಎಷ್ಟು ಪಂಪಸೆಟ್ ಕಳವು ಮಾಡಿಸಿದುವು?
ಎಷ್ಟು ಕಳವು ಮಾಡಿಸಿದುವು, ಎಷ್ಟು ತಾಳಿ ಕಿತ್ತವು?
ಎಷ್ಟು ಮನಿ ದೀಪಾ ತಗದುವು?

ನಿಮ್ಮೂರ ದೇವ್ರುಗಳು ಎಷ್ಟು ಸಾಲಾ ಮಾಡಿಸಿದುವು?
ಹಳೆ ಬಾವಿಗಳಾಗೆಷ್ಟು ಹಳಸು ಗ್ವಾತ ಹಾಕಿದುವು?
ಜಾತಿ ಭೇದದ ಬೇರಿಗೆಷ್ಟು ನೀರು ಹಾಕಿದುವು?
ನಿಮ್ಮೂರ ರಾಕ್ಷಸರು ಎಷ್ಟು ಬಾಳ್ವೆ ಕೆಡಿಸಿದರು?
ಎಷ್ಟು ರಂಡೇರ ಎಷ್ಟು ಗರ್ಭಪಾತ ಮಾಡಿಸಿದುವು?
ಹೊಸಗಾಳಿಗಳಾಗೆ ಎಷ್ಟು ತೂರಿಕೊಂಡು ಗೂಳ್ಯಾಗಿ ಮೆರದರು?
ಹುಚ್ಚು ಮುಂಡೇ ಮದುವ್ಯಾಗೆಷ್ಟು ಜಾಣರುಂಡರು?

ಎಷ್ಟು ಹರೇವುಗಳು ಹದ್ದುಮೀರಿ ಓಡಿದುವು?
ಎಷ್ಟು ಹಾದರಾ ಬಾವ್ಯಾಗೆ ತೇಲಿದುವು? ತಿಪ್ಯಾಗೆ ಹೂಳಿದುವು?
ಎಷ್ಟು ಮಣಕಾ ಹಳೇ ಎತ್ತುಗಳ ಕಾಲಾಗೆ ಬಿದ್ವು?

ಇನ್ನು ದೇಶದ ದೇಶಾವರೀನಾ!
ಊರುಡಾಳರ ಆಡಳಿತಾ, ಕಳ್ಳ ಕದೀಮರ ಮೆರೆತಾ
ಹಸಗೆಟ್ಟ ದೇಶದ ದೇಹಸ್ಥಿತಿಗೆ ಹೊಸ ಕಂತ್ರಿ ಔಷಧ,
ದಿನದಿನಕೆ ರೋಗ ಉಲ್ಬಣ, ದೇಹ ಬರೀ ಮೂಳೆ ತೊಗಲು
ಕೆಲವು ಕಡಿಗೆ ಹಣದುಬ್ಬರದ ಕೀವು ಬಾವು

ಪೊಳ್ಳು ಆಶ್ವಾಸನಗಳ ಗುಳ್ಳೆ ತೇಲ್ತಾವೆ,
ಐದು ವರ್ಷದಾಗೆಷ್ಟು ಬೇಕೋ ಅಷ್ಟು ಕಾರಭಾರ
ಅವರ ಮನೆತನ ಕಳಬಳ್ಳೆಲ್ಲ ನಾಕೈದು ತಲೆಮಾರ ಹಾರಭಾರಾ
ಇವತ್ತು ಕೈಕೈ ಮಿಲಾಪು ನಾಳೆ ಕುತ್ತಿಗೆ ಕುತ್ತಿಗೆ ರೋಪು
ಹೀಂಗೇ ನಾಟಕಾ ನಡದಾದ ಸ್ವಾಮೀ!
ದೇಶದಾಗ ದೇಶ ಉಳಿದಿಲ್ಲ ಬರೀ ದೇಶಾವರೀನೇ ನಡದಾದ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...