Home / ಲೇಖನ / ಇತರೆ / ಧನಾತ್ಮಕ ನಿಲುವು

ಧನಾತ್ಮಕ ನಿಲುವು

ಪ್ರಿಯ ಸಖಿ,

ಬ್ರಿಟೀಷರೊಡನೆ ಭಾರತದ ಪರವಾಗಿ ವಾದ ಮಾಡಿ ಸ್ವಾತಂತ್ರ್ಯ ಪಡೆಯಲೆಂದು ದುಂಡು ಮೇಜಿನ ಗೋಷ್ಠಿಗಾಗಿ ಗಾಂಧೀಜಿ, ಹಡಗಿನಲ್ಲಿ ಅವರ ನಾಡಿಗೆ ಹೊರಟಾಗ, ಅವರ ಜೊತೆಗೆ ಹಡಗಿನಲ್ಲಿದ್ದ ಕೆಲವು ಬ್ರಿಟೀಷ್ ಜನರು ಗಾಂಧೀಜಿಯೊಡನೆ ಬೆಳಗು ರಾತ್ರಿ ಚರ್ಚಿಸುತ್ತಿದ್ದರು. ನಾವು ಭಾರತವನ್ನು ಬಿಟ್ಟು ಹೋದರೆ ಭಾರತಕ್ಕೆ ದುರ್ಗತಿ ತಪ್ಪಿದ್ದಲ್ಲ. ಆದ್ದರಿಂದ ನಾವು ನಿಮ್ಮನ್ನು ಆಳುವುದೇ ಕ್ಷೇಮ ಇತ್ಯಾದಿ ಮಾತನಾಡುತ್ತಿದ್ದರು. ಗಾಂಧೀಜಿಯವರೂ ನಮ್ಮ ದೇಶದ ಪರವಾಗಿ ನಿರಂತರವಾಗಿ ವಾದ ಮಾಡುತ್ತಿದ್ದರು.

ಕೊನೆಗೊಮ್ಮೆ ತಮ್ಮ ಪರವಾದವನ್ನೆಲ್ಲಾ ೪-೫ ಪುಟಗಳಷ್ಟು ನೋಟ್ಸ್‌ ಬರೆದು ಅದಕ್ಕೊಂದು ಗುಂಡುಸೂಜಿ ಚುಚ್ಚಿ ಆ ಆಂಗ್ಲ ಜನರು ಗಾಂಧೀಜಿಗೆ ನೀಡಿ ನಮ್ಮ
ವಾದವನ್ನೆಲ್ಲಾ ಇದರಲ್ಲಿ ಮಂಡಿಸಿದ್ದೇವೆ. ನಿಮಗೆ ಇದರಿಂದ ನಮ್ಮ ನಿಲುವು ಸ್ಪಷ್ಟವಾಗಬಹುದು. ಹಾಗೇ ಅದರಿಂದ ನಿಮ್ಮ ಮನಪರಿವರ್ತನೆಯಾಗಲು ಉಪಯೋಗ
ವಾಗಬಹುದು ಎಂದರು.

ಗಾಂಧೀಜಿ ಆ ನೋಟ್ಸನ್ನು ತೆಗೆದುಕೊಂಡರು. ಮಾರನೆಯ ದಿನ ಅವರಿದ್ದಲ್ಲಿಗೆ ಆಗಮಿಸಿದ ಆಂಗ್ಲರು ನಮ್ಮ ನೋಟ್ಸ್‌ ಓದಿದಿರಾ? ಎಂದರು. ಗಾಂಧೀಜಿ ಓದಿದೆ ಎಂದರು. ಅದಕ್ಕವರು ಹಾಗಿದ್ದರೆ ಅದರಲ್ಲಿ ನಿಮಗೆ ಏನಾದರೂ ಬೆಲೆಯುಳ್ಳದ್ದು ಇದೆ ಎನಿಸಿತೇ? ಎಂದು ಕೇಳಿದರು. ನಾನಾಗಲೇ ಬೆಲೆಯುಳ್ಳದ್ದನ್ನು  ತೆಗೆದಿರಿಸಿಕೊಂಡಿದ್ದೇನೆ ಎಂದು ಆ ನೋಟ್ಸಿಗೆ ಚುಚ್ಚಿದ್ದ ಹೊಸ ಗುಂಡು ಸೂಜಿಯನ್ನು ತೋರಿಸಿ ನಕ್ಕರು ಗಾಂಧೀಜಿ.

ಈ ಒಂದು ಪ್ರಸಂಗದಿಂದ ಗಾಂಧೀಜಿಯವರು ಎಷ್ಟೊಂದು ನಿಷ್ಟುರವಾದಿಗಳೂ, ದೇಶಪ್ರೇಮಿಗಳೂ ಆಗಿದ್ದರು ಎಂದು ತಿಳಿಯುವ ಹಾಗೆ ತಮಗೆ ಇಷ್ಟವಿಲ್ಲವೆನಿಸಿದ
ಸಂಗತಿಗಳಿಂದಲೂ ತಮಗೆ ಉಪಯೋಗಿಯಾಗುವಂತಹುದನ್ನು ತೆಗೆದುಕೊಳ್ಳುವ ಧನಾತ್ಮಕ ನಿಲುವು (Positive thinking) ಹೊಂದಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಸಖಿ, ನಮ್ಮ ಬದುಕಿನಲ್ಲೂ ನಮಗೆ ಬೇಡವಾದ ಎಷ್ಟೊಂದು ಸಂಗತಿಗಳು ನಡೆಯುತ್ತಿರುತ್ತವೆ. ಬೇಡದ ವ್ಯಕ್ತಿಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಆಗೆಲ್ಲಾ ಮನಸ್ಸು ಕಹಿಯಾಗುತ್ತದೆ.  ಅದರೆ ಅಂತಹ ಕೆಡುಕಿನಲ್ಲೂ ಒಳಿತನ್ನು, ಧನಾತ್ಮಕ ನಿಲುವನ್ನು ನಾವು ಬೆಳೆಸಿಕೊಂಡರೆ ನಿಜಕ್ಕೂ ಬದುಕು ಸುಂದರವಾಗುತ್ತದೆ. ಕೆಟ್ಟದ್ದರಲ್ಲಿಯೂ ನಮಗೆ ಉಪಯೋಗವಾಗಬಲ್ಲ ಒಳಿತನ್ನು ಆರಿಸಿಕೊಳ್ಳುವುದೇ ನಿಜವಾದ ಜಾಣತನವಲ್ಲವೆ ಸಖಿ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...