Home / ಲೇಖನ / ಇತರೆ / ಧನಾತ್ಮಕ ನಿಲುವು

ಧನಾತ್ಮಕ ನಿಲುವು

ಪ್ರಿಯ ಸಖಿ,

ಬ್ರಿಟೀಷರೊಡನೆ ಭಾರತದ ಪರವಾಗಿ ವಾದ ಮಾಡಿ ಸ್ವಾತಂತ್ರ್ಯ ಪಡೆಯಲೆಂದು ದುಂಡು ಮೇಜಿನ ಗೋಷ್ಠಿಗಾಗಿ ಗಾಂಧೀಜಿ, ಹಡಗಿನಲ್ಲಿ ಅವರ ನಾಡಿಗೆ ಹೊರಟಾಗ, ಅವರ ಜೊತೆಗೆ ಹಡಗಿನಲ್ಲಿದ್ದ ಕೆಲವು ಬ್ರಿಟೀಷ್ ಜನರು ಗಾಂಧೀಜಿಯೊಡನೆ ಬೆಳಗು ರಾತ್ರಿ ಚರ್ಚಿಸುತ್ತಿದ್ದರು. ನಾವು ಭಾರತವನ್ನು ಬಿಟ್ಟು ಹೋದರೆ ಭಾರತಕ್ಕೆ ದುರ್ಗತಿ ತಪ್ಪಿದ್ದಲ್ಲ. ಆದ್ದರಿಂದ ನಾವು ನಿಮ್ಮನ್ನು ಆಳುವುದೇ ಕ್ಷೇಮ ಇತ್ಯಾದಿ ಮಾತನಾಡುತ್ತಿದ್ದರು. ಗಾಂಧೀಜಿಯವರೂ ನಮ್ಮ ದೇಶದ ಪರವಾಗಿ ನಿರಂತರವಾಗಿ ವಾದ ಮಾಡುತ್ತಿದ್ದರು.

ಕೊನೆಗೊಮ್ಮೆ ತಮ್ಮ ಪರವಾದವನ್ನೆಲ್ಲಾ ೪-೫ ಪುಟಗಳಷ್ಟು ನೋಟ್ಸ್‌ ಬರೆದು ಅದಕ್ಕೊಂದು ಗುಂಡುಸೂಜಿ ಚುಚ್ಚಿ ಆ ಆಂಗ್ಲ ಜನರು ಗಾಂಧೀಜಿಗೆ ನೀಡಿ ನಮ್ಮ
ವಾದವನ್ನೆಲ್ಲಾ ಇದರಲ್ಲಿ ಮಂಡಿಸಿದ್ದೇವೆ. ನಿಮಗೆ ಇದರಿಂದ ನಮ್ಮ ನಿಲುವು ಸ್ಪಷ್ಟವಾಗಬಹುದು. ಹಾಗೇ ಅದರಿಂದ ನಿಮ್ಮ ಮನಪರಿವರ್ತನೆಯಾಗಲು ಉಪಯೋಗ
ವಾಗಬಹುದು ಎಂದರು.

ಗಾಂಧೀಜಿ ಆ ನೋಟ್ಸನ್ನು ತೆಗೆದುಕೊಂಡರು. ಮಾರನೆಯ ದಿನ ಅವರಿದ್ದಲ್ಲಿಗೆ ಆಗಮಿಸಿದ ಆಂಗ್ಲರು ನಮ್ಮ ನೋಟ್ಸ್‌ ಓದಿದಿರಾ? ಎಂದರು. ಗಾಂಧೀಜಿ ಓದಿದೆ ಎಂದರು. ಅದಕ್ಕವರು ಹಾಗಿದ್ದರೆ ಅದರಲ್ಲಿ ನಿಮಗೆ ಏನಾದರೂ ಬೆಲೆಯುಳ್ಳದ್ದು ಇದೆ ಎನಿಸಿತೇ? ಎಂದು ಕೇಳಿದರು. ನಾನಾಗಲೇ ಬೆಲೆಯುಳ್ಳದ್ದನ್ನು  ತೆಗೆದಿರಿಸಿಕೊಂಡಿದ್ದೇನೆ ಎಂದು ಆ ನೋಟ್ಸಿಗೆ ಚುಚ್ಚಿದ್ದ ಹೊಸ ಗುಂಡು ಸೂಜಿಯನ್ನು ತೋರಿಸಿ ನಕ್ಕರು ಗಾಂಧೀಜಿ.

ಈ ಒಂದು ಪ್ರಸಂಗದಿಂದ ಗಾಂಧೀಜಿಯವರು ಎಷ್ಟೊಂದು ನಿಷ್ಟುರವಾದಿಗಳೂ, ದೇಶಪ್ರೇಮಿಗಳೂ ಆಗಿದ್ದರು ಎಂದು ತಿಳಿಯುವ ಹಾಗೆ ತಮಗೆ ಇಷ್ಟವಿಲ್ಲವೆನಿಸಿದ
ಸಂಗತಿಗಳಿಂದಲೂ ತಮಗೆ ಉಪಯೋಗಿಯಾಗುವಂತಹುದನ್ನು ತೆಗೆದುಕೊಳ್ಳುವ ಧನಾತ್ಮಕ ನಿಲುವು (Positive thinking) ಹೊಂದಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಸಖಿ, ನಮ್ಮ ಬದುಕಿನಲ್ಲೂ ನಮಗೆ ಬೇಡವಾದ ಎಷ್ಟೊಂದು ಸಂಗತಿಗಳು ನಡೆಯುತ್ತಿರುತ್ತವೆ. ಬೇಡದ ವ್ಯಕ್ತಿಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಆಗೆಲ್ಲಾ ಮನಸ್ಸು ಕಹಿಯಾಗುತ್ತದೆ.  ಅದರೆ ಅಂತಹ ಕೆಡುಕಿನಲ್ಲೂ ಒಳಿತನ್ನು, ಧನಾತ್ಮಕ ನಿಲುವನ್ನು ನಾವು ಬೆಳೆಸಿಕೊಂಡರೆ ನಿಜಕ್ಕೂ ಬದುಕು ಸುಂದರವಾಗುತ್ತದೆ. ಕೆಟ್ಟದ್ದರಲ್ಲಿಯೂ ನಮಗೆ ಉಪಯೋಗವಾಗಬಲ್ಲ ಒಳಿತನ್ನು ಆರಿಸಿಕೊಳ್ಳುವುದೇ ನಿಜವಾದ ಜಾಣತನವಲ್ಲವೆ ಸಖಿ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...