Home / ಕವನ / ಕವಿತೆ / ಬಜಾರ

ಬಜಾರ

ಅಗೊ ಹೋಗುತ್ತಿವೆ ನೋಡಿ ನೋಟುಗಳ ಸಾರೋಟುಗಳು
ಹಣದ ಹೆಣಗಳ ಮೆರವಣಿಗೆಗಳು
ರಣಹದ್ದುಗಳ ಕಾಲುಗುರು ಕೊಕ್ಕುಗಳು
ಗಂಟೆ ಜಾಗಟೆಗಳ ಶಂಖವಾದ್ಯಗಳು
ಜುಟ್ಟು ಜನಿವಾರ ಸಿವುಡುಗಂಟುಗಳು
ನಾಮ ಪೇಟಗಳ ಪೇಟೆ ಮಾಮೂಲು ಮಾಲುಗಳು

ಬರೀ ಮೈಯಲ್ಲಿ ಹುಟ್ಟುಬಟ್ಟೆಯಲ್ಲೇ
ಬರುವ ಪ್ರಾಣಲಿಂಗಿಗಳಿಗಿಲ್ಲಿ ಕೋಲುಪೂಜೆ
ಕಾಲಕೆಳಗೆ ಪ್ರಾಣವೊತ್ತೆ ಇಡಬೇಕಿಲ್ಲಿ ಹುಷಾರ್,
ಕಾಮಣ್ಣ ಕಣ್ಣ ಬಾಣ ಬಿಡುತ್ತಾನೆ ಕುಣಿಕೆಯಲ್ಲಿ ಜಾರೀಯೆ,
ನೀ ಮಾಡಿದ್ದು ಮನೆಯಲ್ಲೇ ಉಂಡು ಬಾ
ಹೊರಗೆ ತಂದರೆ ನಗೆ ಪಾಟಲು

ಬಸ್ಸು ಲಾರಿಯ ಗಾಲಿಗೆ ಸಿಕ್ಕು ಹೋದೀಯೆ
ಬರಿಗಡಿಗೆ ಮನೆಯಲ್ಲಿ ಹಾಡುತ್ತಿದ್ದರೇನು ವೇದಾಂತ
ಶೂನ್ಯ ಸಿದ್ಧಾಂತ,
ತಾಂಬೂಲ ಸೇವಿಸಿ ಬಾಯಿ ಕೆಂಪಾಗಿಸಿಕೊಂಡು ಬಾ
ನಗು ಹಾದರದ ನಗು
ಗಂಟಿಗೆ ಗಂಟು ಹಾಕಿ ಬಿಗಿ ಮೋರೆಯ ಯಾರೂ ಬಿಚ್ಚಲಾರದಂತೆ
ಹಾಯ್ದು ಹೋದವನಿಗೆ ಹಲ್ಲು ಬೀರಿ ಹಲ್ಲೋ ಎನ್ನು ಸಾಕು

ಯಾವುದೇ ಕೂಸು ಕುನ್ನಿ ಕುಂಟು ಕುರಡ
ಯುವುದೋ ಕುರುಡುಗಾಲಿಗೆ ಬಲಿಯಾದರೆ
ಕೈಹಿಡಿದೆತ್ತಲು ಹೋದಿಯಾ ಯಾಕೆಂದರೆ
ಎತ್ತಿದವನಿಗೆ ಬೀಳುತ್ತದೆ ಕುರುಡು ಕಾನೂನಿನ ಲತ್ತೆ

ಅಗೋ ಏನೋ ಗುಂಪು ಘೋಷಣೆ
ಯಾವನೋ ಕೂಗಿ ಕಣ್ಮರೆಯಲ್ಲಿದ್ದರೂ
ಈಗ ಗುಂಪಾಗಿ ಗಾಳಿ ಕೂಗುತ್ತಿದೆ
ಕುರಿಯಾಗಿ ಕೂಗಿಬಿಡು, ಯಾಕೆಂದರೆ
ಯಾವುದೇ ಗುಂಪಿಗೆ ಘೋಷಣೆಗೆ ಒಳಗಾಗದಿದ್ದರೆ
ಪಿತೂರಿಗಾರನಿವನೆಂದು ಸಂಶಯದ ಕಣ್ಣು ಬೆನ್ನಟ್ಟುವುದು
ಎಲ್ಲಿಯಾದರೂ ತಲೆಯ ಮೇಲೆ ನಿಂತೀಯಾ
ಮೇಲೆ ಹರಿದು ಹೋದಾವು ನೂರಾರು ಕಾಲು, ಹೊಟ್ಟೆ, ಕೋಲು
ಎಚ್ಚರ ಇದು ಬೀದಿ ಬಜಾರ
ಇಲ್ಲಿ ತಾಳಿದವನು ಬಾಳಿಯಾನು ಅಲ್ಲ
ಓಡುವವನು ಮುಂದೆ ಹೋದಾನು
ತಾಳಿದವನು ಕೊಳೆತು ಹೋದಾನು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...