Home / ಕವನ / ಕವಿತೆ / ಕೂಸು ಎಲ್ಲಿ ಹೋಯಿತೇ

ಕೂಸು ಎಲ್ಲಿ ಹೋಯಿತೇ

ಎಲ್ಲಿ ಹೋಯಿತೇ ಕೂಸು ಎಲ್ಲಿ ಹೋಯಿತೇ
ಅವ್ವ ಎಲ್ಲಿ ಹೋಯಿತೇ ಅಕ್ಕ ಎಲ್ಲಿ ಹೋಯಿತೇ

ಮೊನ್ನೆ ಮೊನ್ನೆ ಹುಟ್ಟಿ ಬಂತು ಸ್ವರ್ಗವನ್ನೇ ಮುಟ್ಟಿ ನಿಂತು
ಪೂರ್ಣ ಚಂದ್ರ ಹಾಲುಗೆನ್ನೆ ಬೆಳದಿಂಗಳ ಹಾಲು ನಗುವು
ಮಳೆಯ ಜೊಲ್ಲು ಸುರಿಸಿ ಅಂಗ ತೋಯಿಸಿದ್ದನು
ನನ್ನ ಎದೆಯ ನೆಲವ ಕೂಡ ಮೀಯಿಸಿದ್ದನು

ಬಸ್ಸು ಲಾರಿ ಸದ್ದು ಕೇಳಿ  ಭಯವ ತಾಳಿ
ಬಂದು ನನ್ನ ಮಡಿಲಿನಲ್ಲಿ ಅಡಗುತಿದ್ದನು
ನಿನ್ನೆ ಮೊನ್ನೆ ನಡೆಯುವುದನು ಕಲಿಯುತಿದ್ದನು

ಕೈಯ ಚಾಚಿ ಚಿಕ್ಕೆಗಳನು ಹೊಕ್ಕು ನೋಡಿ ಬರುವೆನೆಂಬ
ಉದಯ ಸೂರ್ಯನನ್ನು ತಿಂಬ ಹಣ್ಣೆ ಎಂಬನು
ಹೊಟ್ಟೆಗೆಷ್ಟು ಕೊಟ್ಟರೇನು ಮಣ್ಣ ತಿಂಬನು

ಅವನ ಕಣ್ಣು ಕೋಪದಲ್ಲಿ ಸೂರ್ಯಾಸ್ತದ ಕೆಂಪನುಗುಳಿ
ನನ್ನ ಕಣ್ಣ ಸರಸಿನಲ್ಲಿ ಬಿಂಬಿಸಿದ್ದಿತು
ಮುದ್ದು ಬಾರೊ ಎನಲು ಎನ್ನ ಚುಂಬಿಸಿದ್ದಿತು

ನಾನು ಹೊರಗೆ ಹೋಗುವಾಗ ಹೋಗಬೇಡವೆಂದು ತೊಡರಿ
ಜಗದ ಜೀವಿ ನಾನು ಹೋಗೆ ಅಳುತಲಿದ್ದಿತು
ಎತ್ತ ಹೋದರಿತ್ತ ಮನಸು ಸೆಳೆಯುತಿದ್ದಿತು

ತನ್ನ ಬಾಯಿ ಮಣ್ಣಿನಲ್ಲಿ ಸೃಷ್ಟಿಯನ್ನೆ ತುಂಬಿಸಿತ್ತು
ತನ್ನ ಹಣೆಯ ಮುಂಗುರಳಲಿ ನನ್ನ ಸುತ್ತಿತು
ನನ್ನ ಕರುಳ ಕುಡಿಯು ನಗಲು ಅಳುವೆ ಸತ್ತಿತು

ನನ್ನ ಮನದ ದಿವ್ಯಮೂರ್ತಿ ನನ್ನ ಜೀವ ಭಾವ ಕೀರ್ತಿ
ಎತ್ತ ಹೋಯಿತೇನೊ ಪಾಪ ತಿಳಿಯದಾಗಿದೆ
ಕರುಳುಕಿತ್ತು ಹೊರಗೆ ಬರುವ ದುಃಖವಾಗಿದೆ

ನೀನು ನೋಡಿದೇನೆ ಅಕ್ಕ ನಿನಗಾದರು ಗೊತ್ತೆ ತಂಗಿ
ಅಣ್ಣ-ತಮ್ಮ ನೀವಾದರು ಹೇಳಲಾರಿರಾ
ಮಗುವ ನಾನು ಕಾಂಬ ಪರಿಯ ತೋರಲಾರಿರಾ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...