Home / ಲೇಖನ / ಇತರೆ / ಮಾನವನಾಗುವೆಯೋ ? ಇಲ್ಲ…..

ಮಾನವನಾಗುವೆಯೋ ? ಇಲ್ಲ…..

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ ,
ಆಗಲೇ ರಾತ್ರಿ ಹತ್ತು ಗಂಟೆಯಾಗಿ ಹೋಗಿದೆ ಬಾಡಿಗೆಗೆ ಊರಾಚೆ ಹೋಗಿದ್ದ ಟ್ಯಾಕ್ಸಿಯವನು ತನ್ನ ಮನೆಯವರ ನೆನಪಿನಲ್ಲಿ, ಬೇಗ ಮನೆ ಸೇರಬೇಕೆಂಬ ಆತುರದಲಿ ರಭಸವಾಗಿ ಕಾರು ಓಡಿಸುತ್ತಿದ್ದಾನೆ. ಜೊತೆಗೆ ಅಬ್ಬರದ ಸಂಗೀತ ಹಿಂದಿ ಚಿತ್ರಗೀತೆಯೊಂದು ಇವನನ್ನು ಮತ್ತೂ ಉದ್ವಿಗ್ನಗೊಳಿಸುತ್ತಿದೆ. ಗುನುಗುತ್ತಾ ಮೈಮರೆತು ಕಾರು ಓಡಿಸುತ್ತಿದ್ದಾನೆ. ಆಗಲೇ….. ಎದುರಿನಿಂದ ರಭಸವಾಗಿ ಹರಿದು ಬರುತ್ತಿರುವ ಲಾರಿಯನ್ನು ಇವನು ನೋಡಿದ್ದು ತಕ್ಷಣ ಕಾರನ್ನು ಪಕ್ಕಕ್ಕೆ ತಿರುಗಿಸಿಕೊಳ್ಳುತ್ತಾನೆ. ಆಗ ರಸ್ತೆಯಂಚಿನಲ್ಲಿ ನಿಧಾನಕ್ಕೆ ಸಾಗಿದ್ದ ಸೈಕಲ್ ಸವಾರನ ಮೇಲೆ ಇವನ ಕಾರು ಹರಿದು ಮುಂದೆ ಹೋಗುತ್ತದೆ. ಆ ಚೀರಿದವನ ಆರ್ತನಾದ ಕರುಳು ಬಿರಿಯುವಂತೆ ಕೇಳಿಬರುತ್ತದೆ.

ಕ್ಷಣಕಾಲ ಇವನಿಗೆ ದಿಗ್ಬ್ರಾಂತಿ ಛೇ. ಇದೇನಾಗಿಹೋಯ್ತು. ತಾನು ಡ್ರೈವಿಂಗ್ ಕಲಿತ ದಿನದಿಂದ ಒಂದೂ ಅಪಘಾತ ಮಾಡಿಲ್ಲ. ಈಗ…. ಈಗ ತಾನೇನು
ಮಾಡಲಿ? ಹಿಂತಿರುಗಿ ಹೋಗಿ ಏನಾಗಿದೆ ನೋಡಲೇ ? ಅವನು ಬದುಕಿದ್ದಾನೋ ಸತ್ತಿದ್ದಾನೋ? ಅವನು ಬದುಕಿದ್ದರೆ ಅವನನ್ನು ಈಗ ಉಳಿಸುವ ಹೊಣೆ ತನ್ನದಲ್ಲವೇ? ಅಥವಾ ಸತ್ತಿದ್ದರೆ ? ಅದಕ್ಕೂ ತಾನೆ ಜವಾಬ್ದಾರ ! ಒಂದು ಮನಸ್ಸು ಹೀಗೆ ಯೋಚಿಸಿದರೆ, ಇನ್ನೊಂದು ಮನಸ್ಸು ಈ ರಾತ್ರಿಯಲ್ಲಿ ನನ್ನ ಕಾರಿನಿಂದ ಈ ಅಪಘಾತವನ್ನು ಯಾರು ನೋಡಿರುತ್ತಾರೆ ? ಏನೂ ಆಗಿಯೇ ಇಲ್ಲವೆಂಬಂತೆ ಮನೆಗೆ ಹೋಗಿ ನಿದ್ರಿಸಿಬಿಟ್ಟರೆ ಯಾರಿಗೆ ಗೊತ್ತಾಗುತ್ತದೆ ? ಈ ರಾತ್ರಿಯಲ್ಲಿ ನಾನೇ ಅಪಘಾತ ಮಾಡಿದ್ದು ಎನ್ನುವುದಕ್ಕೆ ಸಾಕ್ಷಿ ಯಾರಿದ್ದಾರೆ ? ಎಂದು ಯೋಚಿಸುತ್ತದೆ. ಆದರೆ….ನಿಜ ನಾನು ಸೈಕಲ್ಲಿನವನಿಗೆ ಢಿಕ್ಕಿ ಹೊಡೆದುದನ್ನು ನೋಡಿದ ಸಾಕ್ಷಿಗಳ್ಯಾರೂ ಇಲ್ಲ. ಹಾಗೆಂದು ಅದು ಅಪರಾಧವೇ ಅಲ್ಲವೇ ? ಯಾವ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೂ ನನ್ನ ಮನಸ್ಸಾಕ್ಷಿ ಇದೆಯಲ್ಲವೇ ? ಆಗ ತಾನು ಬದಕಿದ್ದರೂ ಸತ್ತಂತೆ ತಾನೇ ? ಅದಕ್ಕೆ ಬದಲು ನಾನು ಮಾಡಿದ ಈ ತಪ್ಪನ್ನು ಒಪ್ಪಿಕೊಂಡು ಬಂದುದನ್ನು ಧೈರ್ಯದಿಂದ ಎದುರಿಸುವುದೇ ನಿಜವಾದ ಧರ್ಮವಲ್ಲವೇ? ಇಂತಹುದೇ ಮಾನವ-ದಾನವ ಚಿಂತನೆಗಳಂದ ಅವನ ಮನ ಕೆಲ ಹೊತ್ತು ಹೊಯ್ದಾಡುತ್ತದೆ.

ಕೊನೆಗೂ ಅವನ ಮನದಲ್ಲಿದ್ದ ಮಾನವ, ದಾನವನನ್ನು ಮೆಟ್ಟಿ ಗೆಲ್ಲುತ್ತಾನೆ. ಅವನು ಕಾರನ್ನು ಹಿಂತಿರುಗಿಸಿಕೊಳ್ಳುತ್ತಾನೆ. ಅವನಿಗೆ ಈಗ ಯಾವ ಭಯ, ಗೊಂದಲವೂ ಇಲ್ಲ.  ಸತ್ಯದ ಹಾದಿಯಲ್ಲಿದ್ದೇನೆ.  ಮಾಡಿದ ಪಾಪಕ್ಕೆ ತಾನೇ ಹೊಣೆ ಎಂದರಿತು ಪರಿಸ್ಥಿತಿ ಎದುರಿಸಲು ತಯಾರಾಗಿದ್ದಾನೆ. ಬಂದುದೆಲ್ಲವ ಎದುರಿಸುತ್ತೇನೆ ಎಂದುಕೊಳ್ಳುತ್ತಾನೆ. ಕಾರು ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿರುವ ಸೈಕಲ್ ಸವಾರನ ಎದುರು ನಿಲ್ಲುತ್ತದೆ. ಅದರಿಂದ ಇಳಿದ ಇವನು ಅವಸರದಿಂದ ಅವನೆಡೆಗೆ ಸಾಗಿ ಅವನನ್ನೆತ್ತಲು ಕೈ ಮುಂದೆ ಚಾಚುತ್ತಾನೆ. ಮತ್ತು…..

ಸಖಿ, ನಿನಗೂ ದಾನವನನ್ನು ಮೆಟ್ಟಿ ಮಾನವ ಗೆದ್ದ ಯಾವುದೋ ಘಟನೆ ನೆನಪಾದಂತಿದೆ ? ನನಗೂ ಹೇಳುತ್ತೀಯ ತಾನೇ ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...