Home / ಲೇಖನ / ಇತರೆ / ಮಾನವನಾಗುವೆಯೋ ? ಇಲ್ಲ…..

ಮಾನವನಾಗುವೆಯೋ ? ಇಲ್ಲ…..

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ ,
ಆಗಲೇ ರಾತ್ರಿ ಹತ್ತು ಗಂಟೆಯಾಗಿ ಹೋಗಿದೆ ಬಾಡಿಗೆಗೆ ಊರಾಚೆ ಹೋಗಿದ್ದ ಟ್ಯಾಕ್ಸಿಯವನು ತನ್ನ ಮನೆಯವರ ನೆನಪಿನಲ್ಲಿ, ಬೇಗ ಮನೆ ಸೇರಬೇಕೆಂಬ ಆತುರದಲಿ ರಭಸವಾಗಿ ಕಾರು ಓಡಿಸುತ್ತಿದ್ದಾನೆ. ಜೊತೆಗೆ ಅಬ್ಬರದ ಸಂಗೀತ ಹಿಂದಿ ಚಿತ್ರಗೀತೆಯೊಂದು ಇವನನ್ನು ಮತ್ತೂ ಉದ್ವಿಗ್ನಗೊಳಿಸುತ್ತಿದೆ. ಗುನುಗುತ್ತಾ ಮೈಮರೆತು ಕಾರು ಓಡಿಸುತ್ತಿದ್ದಾನೆ. ಆಗಲೇ….. ಎದುರಿನಿಂದ ರಭಸವಾಗಿ ಹರಿದು ಬರುತ್ತಿರುವ ಲಾರಿಯನ್ನು ಇವನು ನೋಡಿದ್ದು ತಕ್ಷಣ ಕಾರನ್ನು ಪಕ್ಕಕ್ಕೆ ತಿರುಗಿಸಿಕೊಳ್ಳುತ್ತಾನೆ. ಆಗ ರಸ್ತೆಯಂಚಿನಲ್ಲಿ ನಿಧಾನಕ್ಕೆ ಸಾಗಿದ್ದ ಸೈಕಲ್ ಸವಾರನ ಮೇಲೆ ಇವನ ಕಾರು ಹರಿದು ಮುಂದೆ ಹೋಗುತ್ತದೆ. ಆ ಚೀರಿದವನ ಆರ್ತನಾದ ಕರುಳು ಬಿರಿಯುವಂತೆ ಕೇಳಿಬರುತ್ತದೆ.

ಕ್ಷಣಕಾಲ ಇವನಿಗೆ ದಿಗ್ಬ್ರಾಂತಿ ಛೇ. ಇದೇನಾಗಿಹೋಯ್ತು. ತಾನು ಡ್ರೈವಿಂಗ್ ಕಲಿತ ದಿನದಿಂದ ಒಂದೂ ಅಪಘಾತ ಮಾಡಿಲ್ಲ. ಈಗ…. ಈಗ ತಾನೇನು
ಮಾಡಲಿ? ಹಿಂತಿರುಗಿ ಹೋಗಿ ಏನಾಗಿದೆ ನೋಡಲೇ ? ಅವನು ಬದುಕಿದ್ದಾನೋ ಸತ್ತಿದ್ದಾನೋ? ಅವನು ಬದುಕಿದ್ದರೆ ಅವನನ್ನು ಈಗ ಉಳಿಸುವ ಹೊಣೆ ತನ್ನದಲ್ಲವೇ? ಅಥವಾ ಸತ್ತಿದ್ದರೆ ? ಅದಕ್ಕೂ ತಾನೆ ಜವಾಬ್ದಾರ ! ಒಂದು ಮನಸ್ಸು ಹೀಗೆ ಯೋಚಿಸಿದರೆ, ಇನ್ನೊಂದು ಮನಸ್ಸು ಈ ರಾತ್ರಿಯಲ್ಲಿ ನನ್ನ ಕಾರಿನಿಂದ ಈ ಅಪಘಾತವನ್ನು ಯಾರು ನೋಡಿರುತ್ತಾರೆ ? ಏನೂ ಆಗಿಯೇ ಇಲ್ಲವೆಂಬಂತೆ ಮನೆಗೆ ಹೋಗಿ ನಿದ್ರಿಸಿಬಿಟ್ಟರೆ ಯಾರಿಗೆ ಗೊತ್ತಾಗುತ್ತದೆ ? ಈ ರಾತ್ರಿಯಲ್ಲಿ ನಾನೇ ಅಪಘಾತ ಮಾಡಿದ್ದು ಎನ್ನುವುದಕ್ಕೆ ಸಾಕ್ಷಿ ಯಾರಿದ್ದಾರೆ ? ಎಂದು ಯೋಚಿಸುತ್ತದೆ. ಆದರೆ….ನಿಜ ನಾನು ಸೈಕಲ್ಲಿನವನಿಗೆ ಢಿಕ್ಕಿ ಹೊಡೆದುದನ್ನು ನೋಡಿದ ಸಾಕ್ಷಿಗಳ್ಯಾರೂ ಇಲ್ಲ. ಹಾಗೆಂದು ಅದು ಅಪರಾಧವೇ ಅಲ್ಲವೇ ? ಯಾವ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೂ ನನ್ನ ಮನಸ್ಸಾಕ್ಷಿ ಇದೆಯಲ್ಲವೇ ? ಆಗ ತಾನು ಬದಕಿದ್ದರೂ ಸತ್ತಂತೆ ತಾನೇ ? ಅದಕ್ಕೆ ಬದಲು ನಾನು ಮಾಡಿದ ಈ ತಪ್ಪನ್ನು ಒಪ್ಪಿಕೊಂಡು ಬಂದುದನ್ನು ಧೈರ್ಯದಿಂದ ಎದುರಿಸುವುದೇ ನಿಜವಾದ ಧರ್ಮವಲ್ಲವೇ? ಇಂತಹುದೇ ಮಾನವ-ದಾನವ ಚಿಂತನೆಗಳಂದ ಅವನ ಮನ ಕೆಲ ಹೊತ್ತು ಹೊಯ್ದಾಡುತ್ತದೆ.

ಕೊನೆಗೂ ಅವನ ಮನದಲ್ಲಿದ್ದ ಮಾನವ, ದಾನವನನ್ನು ಮೆಟ್ಟಿ ಗೆಲ್ಲುತ್ತಾನೆ. ಅವನು ಕಾರನ್ನು ಹಿಂತಿರುಗಿಸಿಕೊಳ್ಳುತ್ತಾನೆ. ಅವನಿಗೆ ಈಗ ಯಾವ ಭಯ, ಗೊಂದಲವೂ ಇಲ್ಲ.  ಸತ್ಯದ ಹಾದಿಯಲ್ಲಿದ್ದೇನೆ.  ಮಾಡಿದ ಪಾಪಕ್ಕೆ ತಾನೇ ಹೊಣೆ ಎಂದರಿತು ಪರಿಸ್ಥಿತಿ ಎದುರಿಸಲು ತಯಾರಾಗಿದ್ದಾನೆ. ಬಂದುದೆಲ್ಲವ ಎದುರಿಸುತ್ತೇನೆ ಎಂದುಕೊಳ್ಳುತ್ತಾನೆ. ಕಾರು ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿರುವ ಸೈಕಲ್ ಸವಾರನ ಎದುರು ನಿಲ್ಲುತ್ತದೆ. ಅದರಿಂದ ಇಳಿದ ಇವನು ಅವಸರದಿಂದ ಅವನೆಡೆಗೆ ಸಾಗಿ ಅವನನ್ನೆತ್ತಲು ಕೈ ಮುಂದೆ ಚಾಚುತ್ತಾನೆ. ಮತ್ತು…..

ಸಖಿ, ನಿನಗೂ ದಾನವನನ್ನು ಮೆಟ್ಟಿ ಮಾನವ ಗೆದ್ದ ಯಾವುದೋ ಘಟನೆ ನೆನಪಾದಂತಿದೆ ? ನನಗೂ ಹೇಳುತ್ತೀಯ ತಾನೇ ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...