Home / ಕವನ / ಕವಿತೆ / ನಾನತ್ತ ನೀನಿತ್ತ

ನಾನತ್ತ ನೀನಿತ್ತ

ನಾನು ನೀನೂ ಒಂದೇ ಅಂದ್ರೂ | ಐತೆ ಸ್ಥಲ್ಪ ತೊಂದ್ರೆ ||
ನಾನು ಉತ್ರಾ ನೀನು ದಕ್ಷ್ಣಾ| ನಾನು ಪೂರ್ವ ನೀನು ಪಶ್ಚಿಮಾ
ನಾನು ಅತ್ತ ನೀನು ಇತ್ತ| ನಾನು ಆಚೆ ನೀನು ಈಚೆ

ನಾನು ಮೇಲೆ ನೀನು ಕೆಳಗೆ | ನೀನು ಮೊದಲು ನಾನು ಕೊನೆಗೆ
ಆದ್ರು ಕೂಡ ನಾನು ನೀನು | ಬೇರೆ ಬೇರೆ ಅಲ್ಲ ಕೊನೆಗೆ

ದಿಕ್ಕೂ ಬ್ಯಾರೆ ಬ್ಯಾರೆ ಆದ್ರು| ಆಕಾಶೆಲ್ಲಾ ಒಂದೇ
ಧ್ರುವಗಳೆಳ್ಡು ಬ್ಯಾರೆ ಆದ್ರು| ಭೂಮಿ ಮಾತ್ರ ಒಂದೇ

ತುದಿಗಳೆಲ್ಡು ಕೊನೆಗೆ ಇದ್ರು | ಕೋಲು ಮಾತ್ರ ಒಂದೇ
ದಂಡೆ ಎಳ್ಡು ಬ್ಯಾರಿರಭೌದು | ಮಧ್ಯದ ಹೊಳೇ ಒಂದೇ

ನನ್ನ ನೀನು ನಿನ್ನ ನಾನು | ನೋಡಿ ಅಳೆಯುವಂತೆ
ಇನ್ನೂ ಯಾರು ಮಾಡಲಾರ್ರು| ಕೂಡಿ ಬಾಳುವಂತೆ

ನಿಂದು ನಂಗೆ ನಂದು ನಿಂಗೆ | ಬಿಂಬಾ ಪ್ರತಿ ಬಿಂಬಾ
ಇದರಾಬದರಾ ಇರೋದ್ರಿಂದ | ತೋರ್ಕೆ ಭೇದ ತುಂಬಾ

ಅಲ್ಲಿಂದಿಲ್ಲೀ ಇಲ್ಲಿಂದಲ್ಲೀ | ಹಾರ್ತೀ ಬಿಟ್ಟೀ ಹಂಗೆ
ಇದ್ದಲ್ಲೇ ಇದ್ದು ತೋರ್ತೀನ್ನಾನು | ಬೆಟ್ಟದ್ಹಂಗೆ

ಎಲ್ಲಾ ಕಡೆಗೆ ಮ್ಯಾಲೆ ಮ್ಯಾಲೆ | ಥಳಕು ಬಳಕು ಮಾಡ್ತಿ
ಒಳಗೇನಿಲ್ಲ ಎನ್ನುವಂಥ | ಸಂಶೇದಾಗೆ ದೂಡ್ತಿ

ಸುತ್ತೂ ಬಳ್ಸೂ ಯಾಕೆ ಕೇಳು | ನನ್ನ ಮನದುದ್ದೇಶ
ನಂದೂ ಒಳಗೇ ನಿಂದೂ ಹೊರಗೆ | ಹರೀತಾವೆ ಪಾಶ

ಅತಿಯಾಗ್ಬಾರ್ದು ಯಾವ್ದೇ ಆದ್ರು | ಹೌದೋ ಅಲ್ಲೋ ಹೇಳು
ಎರಡೂ ಕೂಡಿ ಸಾಗಿದ್ರೇನೆ | ಬಂಗಾರಾಗ್ತಾದ ಬಾಳು

ಭಾಳ ಓಡ್ತಿ ನಿಲ್ಲು ಸ್ವಲ್ಪ | ಕುಂತು ನಿಂತು ಹೋಗು
ಭಾಳಾ ಆಡ್ತಿ ಪುರಸತ್ತಿಲ್ದೆ | ದಮ್ಮು ಎಳಕೊಂಡ್ ಸಾಗು

ಉದ್ದಾ ಅಗಲ ಓಡಾಡಬ್ಯಾಡ | ಆಳಕ್ ಸ್ವಲ್ಪ ಇಳೀ
ಅತ್ತಾ ಇತ್ತಾ ಹರದಾಡಬ್ಯಾಡ | ಕದಡು ನೀರ ತಿಳೀ

ಮ್ಯಾಲೆಮಾಲೆ ಕೈಯಾಡ್ಸಿದ್ರೆ | ನೊರೆ ಬುರುಗು ಅಂದ
ಒಳಾಗಿಳ್ದು ಜಾಲಾಡಿದ್ರೆ | ಮುತ್ತು ರತ್ನ ಚೆಂದ
***

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...