Home / ಕವನ / ಕವಿತೆ / ನಡುವಿನವರಿಗೆ

ನಡುವಿನವರಿಗೆ

ಗುಡಿಯು ಮಠವು ನಿನಗೆ ಯಾಕೆ ನಡುವಿನವರಿಗೆ
ಗಡಿಯ ಗೋಡೆ ನಿನಗೆ ಯಾಕೆ ನಡುವಿನವರಿಗೆ
ಮೂರ್ತಿ ಮೂರ್ತಿ ರೂಪ ನೂರು ನಿನಗೆ ಯಾತಕೆ
ಕೀರ್ತಿ ಹಾಡಿ ತಮ್ಮ ಮೆರೆವ ನಡುವಿನವರಿಗೆ ||ಪ||

ಧರ್ಮ ಶಾಸ್ರ ಗ್ರಂಥ ಸೂತ್ರ ನಿನಗೆ ಯಾತಕೆ
ಕರ್ಮಗೇಡಿ ಕೆಲಸಗೇಡಿ ನಡುವಿನವರಿಗೆ
ಪುಣ್ಯ ತೊಳೆಯ ಪುಣ್ಯ ಕ್ಷೇತ್ರ ನಿನಗೆ ಯಾತಕೆ
ಪಣ್ಯ ನಾರಿಯಂತೆ ಸುಲಿವ ನಡುವಿನವರಿಗೆ ||೧|

ತೊಳೆಯಲೆಂದು ನದಿಯ ನೀರು ನಿನಗೆ ಯಾತಕೆ
ಆಭರಣ ಅಲಂಕಾರ ನಿನಗೆ ಯಾತಕೆ
ಶೋಭೆಯಿಂದ ಸೋಗು ಮೆರೆವ ನಡುವಿನವರಿಗೆ ||೨||

ಪೂಜೆಯೋಜೆ ಯಜ್ಞಯಾಗ ನಿನಗೆ ಯಾತಕೆ
ಸಾಜವಾಗಿ ಕುಳಿತುಣ್ಣಲು ನಡುವಿನವರಿಗೆ
ಜಪವು ತಪವು ಕಿಙತ೯ನೆಗಳು ನಿನಗೆ ಯಾತಕೆ
ಕಪಟತನವ ಮಾಡುವಂಥ ನಡುವಿನವರಿಗೆ ||೩||

ಪುರಾಣ ಪುಣ್ಯ ಕಥೆಯು ನಿನಗೆ ಯಾತಕೆ
ಬರೀ ಕುರಿಗಳಾಗಲೆಂಬ ನಡುವಿನವರಿಗೆ
ಹಬ್ಬ ಪರಿಷೆ ಉತ್ಸವಗಳು ನಿನಗೆ ಯಾತಕೆ
ಕೊಬ್ಬು ಬಾಯಿ ತಿಂಡಿಗಾಗಿ ನಡುವಿನವರಿಗೆ ||೪|

ಹೂವು ಹಣ್ಣು ನೈವೇದ್ಯವು ನಿನಗೆ ಯಾತಕೆ
ನೋವಿಲ್ಲದೆ ಹೊಟ್ಟೆ ಹೊರೆವ ನಡುವಿನವರಿಗೆ
ಕಪ್ಪೆ ಮಂತ್ರ ಪಠಣ ಗಡಣ ನಿನಗೆ ಯಾತಕೆ
ಬೆಪ್ಪು ಮಾಡಲೆಲ್ಲರನ್ನು ನಡುವಿನವರಿಗೆ ||೫|

ಗಂಟೆ ಜಗಟೆ ತಾಳ ಬೇರಿ ನಿನಗೆ ಯಾತಕೆ
ಕಂಠ ಮಟ್ಟ ತಿಂಬ ವೇಳೆ ನಡುವಿನವರಿಗೆ
ಮಂಡೆ ಬೋಳು ಕಾವಿ ಬಟ್ಟೆ ನಿನಗೆ ಯಾತಕೆ
ಭಂಡ ಪಾಪ ಮುಚ್ಚಿ ಕೊಳಲು ನಡುವಿನವರಿಗೆ ||೬||

ಹೆಣ್ಣು ಸೇವೆ ದೇವದಾಸಿ ನಿನಗೆ ಯಾತಕೆ
ಹಣ್ಣು ಮಾಡಿ ಸವಿಯಲಿಕ್ಕೆ ನಡುವಿನವರಿಗೆ
ಅಡ್ಡ ಉದ್ದ ನಾಮಾವಳಿ ನಿನಗೆ ಯಾತಕೆ
ಗೊಡ್ಡಮ್ಮಯನೇರುವಂಥ ನಡುವಿನವರಿಗೆ ||೭||

ಗಂಧಾಕ್ಷತೆ ದೀಪ ಧೂಪ ನಿನಗೆ ಯಾತಕೆ
ಮಂದಮತಿಯ ಬೆಳೆಸಲಿಕ್ಕೆ ನಡುವಿನವರಿಗೆ
ಹುಂಡಿಯಲ್ಲಿ ಲಕ್ಷ ನೋಟು ನಿನಗೆ ಯಾತಕೆ
ದಂಡ ಕಪ್ಪ ಹಣವ ಪಡೆದ ನಡುವಿನವರಿಗೆ ||೮||

ಹೊಸಾ ಹೊಸಾ ಗುಡಿಗೋಪುರ ನಿನಗೆ ಯಾತಕೆ
ಹೊಸಾ ಸುಲಿಗೆಗಳಿಗೆ ಕಳಸ ನಡುವಿನವರಿಗೆ
ಅದ್ಭುತ ಪವಾಡ ಮೆರೆತ ನಿನಗೆ ಯಾತಕೆ
ಅಬ್ಬರದಲಿ ಮಟ್ಟು ಬೆಳೆಸೆ ನಡುವಿನವರಿಗೆ ||೯|

ಅವತಾರೋದ್ಧಾರ ಕಥನ ನಿನಗೆ ಯಾತಕೆ
ಸವಿಯಾಗಿಯೆ ಕುರಿಬೋಳಿಸೆ ನಡುವಿನವರಿಗೆ
ನಿನ್ನ ಹೆಸರಿನಲ್ಲಿ ಎಲ್ಲ ನಿನಗೆ ಯಾತಕೆ
ನಿನ್ನವರೆಗೆ ಅಲ್ಲ ಬರೀ ನಡುವಿನವರಿಗೆ ||೧೦||

ನನ್ನ ನಿನ್ನ ನಡುವೆ ನಡುವಿನವರು ಯಾತಕೆ
ನನಗೆ ನೀನು ನಿನಗೆ ನಾನು ಬೇರೆ ಯಾತಕೆ ||೧೧||

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...