Home / ಕವನ / ಕವಿತೆ / ನಡುವಿನವರಿಗೆ

ನಡುವಿನವರಿಗೆ

ಗುಡಿಯು ಮಠವು ನಿನಗೆ ಯಾಕೆ ನಡುವಿನವರಿಗೆ
ಗಡಿಯ ಗೋಡೆ ನಿನಗೆ ಯಾಕೆ ನಡುವಿನವರಿಗೆ
ಮೂರ್ತಿ ಮೂರ್ತಿ ರೂಪ ನೂರು ನಿನಗೆ ಯಾತಕೆ
ಕೀರ್ತಿ ಹಾಡಿ ತಮ್ಮ ಮೆರೆವ ನಡುವಿನವರಿಗೆ ||ಪ||

ಧರ್ಮ ಶಾಸ್ರ ಗ್ರಂಥ ಸೂತ್ರ ನಿನಗೆ ಯಾತಕೆ
ಕರ್ಮಗೇಡಿ ಕೆಲಸಗೇಡಿ ನಡುವಿನವರಿಗೆ
ಪುಣ್ಯ ತೊಳೆಯ ಪುಣ್ಯ ಕ್ಷೇತ್ರ ನಿನಗೆ ಯಾತಕೆ
ಪಣ್ಯ ನಾರಿಯಂತೆ ಸುಲಿವ ನಡುವಿನವರಿಗೆ ||೧|

ತೊಳೆಯಲೆಂದು ನದಿಯ ನೀರು ನಿನಗೆ ಯಾತಕೆ
ಆಭರಣ ಅಲಂಕಾರ ನಿನಗೆ ಯಾತಕೆ
ಶೋಭೆಯಿಂದ ಸೋಗು ಮೆರೆವ ನಡುವಿನವರಿಗೆ ||೨||

ಪೂಜೆಯೋಜೆ ಯಜ್ಞಯಾಗ ನಿನಗೆ ಯಾತಕೆ
ಸಾಜವಾಗಿ ಕುಳಿತುಣ್ಣಲು ನಡುವಿನವರಿಗೆ
ಜಪವು ತಪವು ಕಿಙತ೯ನೆಗಳು ನಿನಗೆ ಯಾತಕೆ
ಕಪಟತನವ ಮಾಡುವಂಥ ನಡುವಿನವರಿಗೆ ||೩||

ಪುರಾಣ ಪುಣ್ಯ ಕಥೆಯು ನಿನಗೆ ಯಾತಕೆ
ಬರೀ ಕುರಿಗಳಾಗಲೆಂಬ ನಡುವಿನವರಿಗೆ
ಹಬ್ಬ ಪರಿಷೆ ಉತ್ಸವಗಳು ನಿನಗೆ ಯಾತಕೆ
ಕೊಬ್ಬು ಬಾಯಿ ತಿಂಡಿಗಾಗಿ ನಡುವಿನವರಿಗೆ ||೪|

ಹೂವು ಹಣ್ಣು ನೈವೇದ್ಯವು ನಿನಗೆ ಯಾತಕೆ
ನೋವಿಲ್ಲದೆ ಹೊಟ್ಟೆ ಹೊರೆವ ನಡುವಿನವರಿಗೆ
ಕಪ್ಪೆ ಮಂತ್ರ ಪಠಣ ಗಡಣ ನಿನಗೆ ಯಾತಕೆ
ಬೆಪ್ಪು ಮಾಡಲೆಲ್ಲರನ್ನು ನಡುವಿನವರಿಗೆ ||೫|

ಗಂಟೆ ಜಗಟೆ ತಾಳ ಬೇರಿ ನಿನಗೆ ಯಾತಕೆ
ಕಂಠ ಮಟ್ಟ ತಿಂಬ ವೇಳೆ ನಡುವಿನವರಿಗೆ
ಮಂಡೆ ಬೋಳು ಕಾವಿ ಬಟ್ಟೆ ನಿನಗೆ ಯಾತಕೆ
ಭಂಡ ಪಾಪ ಮುಚ್ಚಿ ಕೊಳಲು ನಡುವಿನವರಿಗೆ ||೬||

ಹೆಣ್ಣು ಸೇವೆ ದೇವದಾಸಿ ನಿನಗೆ ಯಾತಕೆ
ಹಣ್ಣು ಮಾಡಿ ಸವಿಯಲಿಕ್ಕೆ ನಡುವಿನವರಿಗೆ
ಅಡ್ಡ ಉದ್ದ ನಾಮಾವಳಿ ನಿನಗೆ ಯಾತಕೆ
ಗೊಡ್ಡಮ್ಮಯನೇರುವಂಥ ನಡುವಿನವರಿಗೆ ||೭||

ಗಂಧಾಕ್ಷತೆ ದೀಪ ಧೂಪ ನಿನಗೆ ಯಾತಕೆ
ಮಂದಮತಿಯ ಬೆಳೆಸಲಿಕ್ಕೆ ನಡುವಿನವರಿಗೆ
ಹುಂಡಿಯಲ್ಲಿ ಲಕ್ಷ ನೋಟು ನಿನಗೆ ಯಾತಕೆ
ದಂಡ ಕಪ್ಪ ಹಣವ ಪಡೆದ ನಡುವಿನವರಿಗೆ ||೮||

ಹೊಸಾ ಹೊಸಾ ಗುಡಿಗೋಪುರ ನಿನಗೆ ಯಾತಕೆ
ಹೊಸಾ ಸುಲಿಗೆಗಳಿಗೆ ಕಳಸ ನಡುವಿನವರಿಗೆ
ಅದ್ಭುತ ಪವಾಡ ಮೆರೆತ ನಿನಗೆ ಯಾತಕೆ
ಅಬ್ಬರದಲಿ ಮಟ್ಟು ಬೆಳೆಸೆ ನಡುವಿನವರಿಗೆ ||೯|

ಅವತಾರೋದ್ಧಾರ ಕಥನ ನಿನಗೆ ಯಾತಕೆ
ಸವಿಯಾಗಿಯೆ ಕುರಿಬೋಳಿಸೆ ನಡುವಿನವರಿಗೆ
ನಿನ್ನ ಹೆಸರಿನಲ್ಲಿ ಎಲ್ಲ ನಿನಗೆ ಯಾತಕೆ
ನಿನ್ನವರೆಗೆ ಅಲ್ಲ ಬರೀ ನಡುವಿನವರಿಗೆ ||೧೦||

ನನ್ನ ನಿನ್ನ ನಡುವೆ ನಡುವಿನವರು ಯಾತಕೆ
ನನಗೆ ನೀನು ನಿನಗೆ ನಾನು ಬೇರೆ ಯಾತಕೆ ||೧೧||

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...