Home / ಕವನ / ಕವಿತೆ / ಪುಣ್ಯಕೋಟಿಗೆ

ಪುಣ್ಯಕೋಟಿಗೆ

ಮುಂದೆ ಬಂದರೆ ಹಾಯಬೇಡ
ಹಿಂದೆ ಬಂದರೆ ಒದೆಯಬೇಡ
ಎಂದು ಕಂಡ ಕಂಡವರಿಗೆಲ್ಲ ಕೈ ಮುಗಿದು
ಕಂಬನಿಯ ಕೆಚ್ಚಲು ಕರೆಯಬೇಡ
ಹುಟ್ಟಿಸಿದ ದೇವರು ಹುಲ್ಲನ್ನ ಮೇಯಿಸುವ
ನನ್ನ ಭವಿಷ್ಯವ ನೀನೇ ಬರೆಯಬೇಡ

ಹೋಗು ನಿನಗಾಗಿ
ಹಾತೊರೆದ ಹುಲಿಯ ಎದುರೇ ನಿಲ್ಲು
ಒಡ್ಡು ಗುಂಡಿಗೆಯ ರಕ್ತ ಬಿಸಿ
ನನ್ನ ಮಗು ತರಳ ಇನ್ನೂ ಹಸಿ
ಕೊಡು ಅವನಿಗೂ ಸಾವು
ಕೂಡಿ ಬರುವೆವು ನಾವು
ನಿನ್ನ ಜೀವಾರಣ್ಯ ರೋದನದ
ಹಂಬಲ ಕಟ್ಟಿದ ಕೊಟ್ಟಿಗೆಯಲ್ಲಿ
ಉಳಿಯಗೊಡು ನನ್ನ
ಕರುವಿನ ಕಿರಿದೊಗಲು ನೆಕ್ಕಿ ಇಗೋ
ಉಣಿಸುತ್ತೇನೆ ಶ್ವಾಸ-ನಾನೇ ಸತ್ತರೂ
ನನ್ನನ್ನೇ ನಿನಗೇ ಇತ್ತರೂ

ಸಾವು ನಿನ್ನನ್ನು ಕರೆಯುವ ಹೊತ್ತು,
ಈ ರೀತಿ ನನ್ನನ್ನೂ ಹೊತ್ತು
ನಡೆ ಕೂಡಿ ಬದುಕೋಣ ಸಾವಿನಲ್ಲೂ
ಮತ್ತು ಹಾಗೆ ಇಲ್ಲೂ

ಹೆಬ್ಬುಲಿಯ ಬಾಯಲ್ಲಿ
ಬಾಯಾರಿ ನಡೆವಾಗ
ನಿನ್ನ ಕರುವಿನ ಕರುಳು ಕೀಳಬೇಡ
ಹೀಗೆ ಮುಂದೂ ಹಾದು
ಹಿಂದಿಂದಲೂ ಒದೆದು
ನನ್ನ ತಬ್ಬಲಿ ‘ಮಾಡಿ’ ಹೋಗಬೇಡ
*****

 

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...