Home / ಬಾಲ ಚಿಲುಮೆ / ಕಥೆ / ಸೋಮನ ತಂದೆಯ ಕಥೆ

ಸೋಮನ ತಂದೆಯ ಕಥೆ

ಒಂದೂರಿನಲ್ಲಿ ಒಬ್ಬ ಬಡವನು ಇದ್ದನು. ಅವನು ದಿನವೂ ತಿರುಪಕ್ಕೆ ಹೋಗಿ ಹಿಟ್ಟನ್ನು ತರುವನು. ತನ್ನ ಹೊಟ್ಟೆಗಾಗಿ ಉಳಿದುದನ್ನು ಒಂದು ಮಡಿಕೆಯಲ್ಲಿ ಹಾಕಿ, ತನ್ನ ಮಲಗುವ  ಕಡೆ ಅದನ್ನು ಒ೦ದು ಗೂಟಕ್ಕೆ ನೇತು ಹಾಕಿದ್ದನು. ಅದನ್ನು ಆಗಾಗ ನೋಡುತ್ತಿದ್ದರೆ ಅವನಿಗೆ ಏನೋ ಒಂದು ಸಂತೋಷ.
ಒಂದು ರಾತ್ರಿ ಅವನಿಗೆ ಹಿಟ್ಟಿನ ಮಡಿಕೆಯನ್ನು ನೋಡಿ ಹಾಗೆಯೇ ಒಂದು ಯೋಚನೆ ಬಂತು; “ಈ ಮಡಕೆಯೇನೋ ಹಿಟ್ಟನಿಂದ ತುಂಬಿತು. ಏನಾದರೂ ದುರ್ಭಿಕ್ಷ ಬಂದರೆ ಇದಿಷ್ಟು ಹಿಟ್ಟಿಗೇ ಹೊನ್ನು ಸಿಕ್ಕೀತು. ಆ ಹಣನನ್ನು ಕೊಟ್ಟು ಎರಡು ಆಡುಗಳನ್ನು ಕೊಂಡುಕೊಳ್ಳುವುದು. ಅವು ಆರು ತಿಂಗಳಿಗೆ ಮರಿ ಹಾಕುವುದರಿಂದ ಕೆಲವು ವರ್ಷಗಳಲ್ಲಿ ಒಂದು ಹಿಂಡು ಆಗುತ್ತವೆ. ಆ ಹಿಂಡು ಮಾರಿ ಒಂದು ಒಳ್ಳೆಯ ದೊಡ್ಡ ಹಸುವನ್ನು ಕೊಂಡು ಕೊಳ್ಳುವುದು: ಜೊತೆಗೆ ಒಂದು ಎಮ್ಮೆಯನ್ನೂ ಕೊಳ್ಳುವುದು. ಜೊತೆಗೆ ಒಂದು ಹೆಣ್ಣು ಕುದುರೆಯನ್ನು ಕೊಂಡುಕೊಳ್ಳುವುದು. ಇವೆಲ್ಲವೂ ಈದು ಅವೆಲ್ಲವೂ ದೊಡ್ಡವಾದ ಮೇಲೆ ಅವುಗಳನ್ನು ಮಾರಿದರೆ ಬೇಕಾದಷ್ಟು ಚಿನ್ನವು ಸಿಕ್ಕುವುದು. ಆ ಚಿನ್ನದಿಂದ ಒಂದು ತೊಟ್ಟಿಯ ಮನೆಯನ್ನು ಕೊಂಡುಕೊಳ್ಳುವುದು.
ಆಗ ಯಾವನಾದರೂ ಒಬ್ಬನು ಯೋಗ್ಯನು ಬಂದು ರೂಪವತಿಯಾದ ತನ್ನ ಮಗಳನ್ನು ಬಲವಂತ ಮಾಡಿ ನನಗೆ ಕೊಡುವನು. ಅವಳಲ್ಲಿ ಒಂದು ಗಂಡು ಮಗುವಾಗುವುದು. ಆ ಮಗುವಿಗೆ ಸೋಮಶರ್ಮ ಎಂದು ಹೆಸರು ಇಡುವೆನು. ಆ ಮಗವು ಅಂಬೆಗಾಲು ಇಡುವಷ್ಟು ಆಗುವುದು. ಅದು ನಾನು ಒ೦ದು ದಿವಸ ಅಶ್ವ ಶಾಲೆಯ ಬಳಿ ಪುಸ್ತಕವನ್ನು ಹಿಡಿದು ಓದುತ್ತಾ ಕುಳಿತಿದ್ದರೆ ನನ್ನನ್ನು ಕಂಡು ಅಂಬೆಗಾಲಿಕ್ಕಿಕೊಂಡು ನನ್ನ ಕಡೆಗೆ ಬರುವುದು. ಆಗ ನಾನು “ಮಗುವು ಕುದುರೆಯ ಕಾಲಿಗೆ ಸಿಕ್ಕಿದರೆ ಏನು ಗತಿ?” ಎಂದು ಕೋಪಗೊಂಡು, ಮಗುವಿನ ತಾಯನ್ನು ಕೂಗಿ “ಮಗುವನ್ನು ಎತ್ತಿಕೋ” ಎಂದು ಗದುರುವೆನು. ಅವಳು ಏನೋ ಮನೆಗೆಲಸ ಮಾಡುತ್ತಿದ್ದು ನನ್ನ ಮಾತು ಅವಳಿಗೆ ಕೇಳಿಸದೆ ಹೋಗುವುದು. ಆಗ ನಾನು ಎದ್ದು ಹೋಗಿ ಅವಳನ್ನು ಹೀಗೆ ಝಾಡಿಸಿ ಒದೆಯುವೆನು.”
ಹೀಗೆ ಯೋಚನೆ ಮಾಡುತ್ತ ಮಾಡುತ್ತ ಅವನಿಗೆ ಮೈಮರೆತು ಹೋಗಿತ್ತು. ನಿಜವಾಗಿಯೂ ಹೆಂಡತಿಯನ್ನು ಒದೆಯುವವನಂತೆ ಝಾಡಿಸಿ ಒದ್ದೇ ಒದ್ದನು. ಆ ಒದೆತವು ಮಡಿಕೆಗೆ ಬಿತ್ತು ಆ ಮಡಿಕೆಯು ಒಡೆಯಿತು. ಅದರಲ್ಲಿದ್ದ ಹಿಟ್ಟೆಲ್ಲ ಅವನ ಮೇಲೆ ಬಿತ್ತು. ಅದರಿಂದ “ಫಲಿಸಿದ ಕಾರ್ಯದ ಫಲವಂ ಚಿಂತಿಸಿ ಮೊದಲಾಗಿ ಹೇಳಿದೆನು” ಎಂದನು.
ಸುವರ್ಣಸಿದ್ದಿಯು “ನಿಜ ನಿಜ ಇದು ನಿನ್ನ ದೋಷವಲ್ಲ ಸರ್ವರೂ ಲೋಭದಿಂದ ಹಾಗಾಗುವರು- ಕೇಳಲಿಲ್ಲವೆ?
ಫಲವನೆಣಿಸದೆ ಚಪಲ ಮತಿಯಿಂ | 
ಕೆಲಸ ಮಾಡಲು ಕೇಡು ತಪ್ಪದು ॥ 
ಚಂದ್ರ ನರಪನ ನೋಡಿ ಕಲಿಯೈಯ್ಯಾ ॥ ೨೯ ॥ 
ಚಕ್ರಧರನು “ಅದೆಂತು?” ಎಂದು. ಕೇಳಲು ಅವನು ಹೇಳಿದನು:-
*****
ಚಂದ್ರ ಭೂಪತಿಯ ಕಥೆ ಓದಿ
Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...