Home / ಬಾಲ ಚಿಲುಮೆ / ಕಥೆ / ಸೋಮನ ತಂದೆಯ ಕಥೆ

ಸೋಮನ ತಂದೆಯ ಕಥೆ

ಒಂದೂರಿನಲ್ಲಿ ಒಬ್ಬ ಬಡವನು ಇದ್ದನು. ಅವನು ದಿನವೂ ತಿರುಪಕ್ಕೆ ಹೋಗಿ ಹಿಟ್ಟನ್ನು ತರುವನು. ತನ್ನ ಹೊಟ್ಟೆಗಾಗಿ ಉಳಿದುದನ್ನು ಒಂದು ಮಡಿಕೆಯಲ್ಲಿ ಹಾಕಿ, ತನ್ನ ಮಲಗುವ  ಕಡೆ ಅದನ್ನು ಒ೦ದು ಗೂಟಕ್ಕೆ ನೇತು ಹಾಕಿದ್ದನು. ಅದನ್ನು ಆಗಾಗ ನೋಡುತ್ತಿದ್ದರೆ ಅವನಿಗೆ ಏನೋ ಒಂದು ಸಂತೋಷ.
ಒಂದು ರಾತ್ರಿ ಅವನಿಗೆ ಹಿಟ್ಟಿನ ಮಡಿಕೆಯನ್ನು ನೋಡಿ ಹಾಗೆಯೇ ಒಂದು ಯೋಚನೆ ಬಂತು; “ಈ ಮಡಕೆಯೇನೋ ಹಿಟ್ಟನಿಂದ ತುಂಬಿತು. ಏನಾದರೂ ದುರ್ಭಿಕ್ಷ ಬಂದರೆ ಇದಿಷ್ಟು ಹಿಟ್ಟಿಗೇ ಹೊನ್ನು ಸಿಕ್ಕೀತು. ಆ ಹಣನನ್ನು ಕೊಟ್ಟು ಎರಡು ಆಡುಗಳನ್ನು ಕೊಂಡುಕೊಳ್ಳುವುದು. ಅವು ಆರು ತಿಂಗಳಿಗೆ ಮರಿ ಹಾಕುವುದರಿಂದ ಕೆಲವು ವರ್ಷಗಳಲ್ಲಿ ಒಂದು ಹಿಂಡು ಆಗುತ್ತವೆ. ಆ ಹಿಂಡು ಮಾರಿ ಒಂದು ಒಳ್ಳೆಯ ದೊಡ್ಡ ಹಸುವನ್ನು ಕೊಂಡು ಕೊಳ್ಳುವುದು: ಜೊತೆಗೆ ಒಂದು ಎಮ್ಮೆಯನ್ನೂ ಕೊಳ್ಳುವುದು. ಜೊತೆಗೆ ಒಂದು ಹೆಣ್ಣು ಕುದುರೆಯನ್ನು ಕೊಂಡುಕೊಳ್ಳುವುದು. ಇವೆಲ್ಲವೂ ಈದು ಅವೆಲ್ಲವೂ ದೊಡ್ಡವಾದ ಮೇಲೆ ಅವುಗಳನ್ನು ಮಾರಿದರೆ ಬೇಕಾದಷ್ಟು ಚಿನ್ನವು ಸಿಕ್ಕುವುದು. ಆ ಚಿನ್ನದಿಂದ ಒಂದು ತೊಟ್ಟಿಯ ಮನೆಯನ್ನು ಕೊಂಡುಕೊಳ್ಳುವುದು.
ಆಗ ಯಾವನಾದರೂ ಒಬ್ಬನು ಯೋಗ್ಯನು ಬಂದು ರೂಪವತಿಯಾದ ತನ್ನ ಮಗಳನ್ನು ಬಲವಂತ ಮಾಡಿ ನನಗೆ ಕೊಡುವನು. ಅವಳಲ್ಲಿ ಒಂದು ಗಂಡು ಮಗುವಾಗುವುದು. ಆ ಮಗುವಿಗೆ ಸೋಮಶರ್ಮ ಎಂದು ಹೆಸರು ಇಡುವೆನು. ಆ ಮಗವು ಅಂಬೆಗಾಲು ಇಡುವಷ್ಟು ಆಗುವುದು. ಅದು ನಾನು ಒ೦ದು ದಿವಸ ಅಶ್ವ ಶಾಲೆಯ ಬಳಿ ಪುಸ್ತಕವನ್ನು ಹಿಡಿದು ಓದುತ್ತಾ ಕುಳಿತಿದ್ದರೆ ನನ್ನನ್ನು ಕಂಡು ಅಂಬೆಗಾಲಿಕ್ಕಿಕೊಂಡು ನನ್ನ ಕಡೆಗೆ ಬರುವುದು. ಆಗ ನಾನು “ಮಗುವು ಕುದುರೆಯ ಕಾಲಿಗೆ ಸಿಕ್ಕಿದರೆ ಏನು ಗತಿ?” ಎಂದು ಕೋಪಗೊಂಡು, ಮಗುವಿನ ತಾಯನ್ನು ಕೂಗಿ “ಮಗುವನ್ನು ಎತ್ತಿಕೋ” ಎಂದು ಗದುರುವೆನು. ಅವಳು ಏನೋ ಮನೆಗೆಲಸ ಮಾಡುತ್ತಿದ್ದು ನನ್ನ ಮಾತು ಅವಳಿಗೆ ಕೇಳಿಸದೆ ಹೋಗುವುದು. ಆಗ ನಾನು ಎದ್ದು ಹೋಗಿ ಅವಳನ್ನು ಹೀಗೆ ಝಾಡಿಸಿ ಒದೆಯುವೆನು.”
ಹೀಗೆ ಯೋಚನೆ ಮಾಡುತ್ತ ಮಾಡುತ್ತ ಅವನಿಗೆ ಮೈಮರೆತು ಹೋಗಿತ್ತು. ನಿಜವಾಗಿಯೂ ಹೆಂಡತಿಯನ್ನು ಒದೆಯುವವನಂತೆ ಝಾಡಿಸಿ ಒದ್ದೇ ಒದ್ದನು. ಆ ಒದೆತವು ಮಡಿಕೆಗೆ ಬಿತ್ತು ಆ ಮಡಿಕೆಯು ಒಡೆಯಿತು. ಅದರಲ್ಲಿದ್ದ ಹಿಟ್ಟೆಲ್ಲ ಅವನ ಮೇಲೆ ಬಿತ್ತು. ಅದರಿಂದ “ಫಲಿಸಿದ ಕಾರ್ಯದ ಫಲವಂ ಚಿಂತಿಸಿ ಮೊದಲಾಗಿ ಹೇಳಿದೆನು” ಎಂದನು.
ಸುವರ್ಣಸಿದ್ದಿಯು “ನಿಜ ನಿಜ ಇದು ನಿನ್ನ ದೋಷವಲ್ಲ ಸರ್ವರೂ ಲೋಭದಿಂದ ಹಾಗಾಗುವರು- ಕೇಳಲಿಲ್ಲವೆ?
ಫಲವನೆಣಿಸದೆ ಚಪಲ ಮತಿಯಿಂ | 
ಕೆಲಸ ಮಾಡಲು ಕೇಡು ತಪ್ಪದು ॥ 
ಚಂದ್ರ ನರಪನ ನೋಡಿ ಕಲಿಯೈಯ್ಯಾ ॥ ೨೯ ॥ 
ಚಕ್ರಧರನು “ಅದೆಂತು?” ಎಂದು. ಕೇಳಲು ಅವನು ಹೇಳಿದನು:-
*****
ಚಂದ್ರ ಭೂಪತಿಯ ಕಥೆ ಓದಿ
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...