Home / ಬಾಲ ಚಿಲುಮೆ / ಕಥೆ / ವೈರವು ಬಂದ ಕಥೆ

ವೈರವು ಬಂದ ಕಥೆ

ಹಿಂದೆ, ಹಂಸ, ಗಿಣಿ, ಕೊಕ್ಕರೆ, ಕೋಗಿಲೆ, ಗೂಗೆ, ನವಿಲು, ಪಾರಿವಾಳ, ಮೊದಲಾದ ಹಕ್ಕಿಗಳೆಲ್ಲವೂ ಒಂದು ಕಡೆ ಸಭೆ ಸೇರಿ ಯೋಚಿಸಿದುವು:- “ನಮಗೆ ಗರುಡನು ಅರಸನಾಗಿರುವನು. ಆತನೋ ವಿಷ್ಣುವಿಗೆ ಪರಮ ಭಕ್ತನು. ನಮ್ಮನ್ನು ಕುರಿತು ಅವನು ಯೋಚಿಸುವುದೂ ಇಲ್ಲ. ಹೀಗೆ ಕೇವಲ ಹೆಸರಿಗೆ ಮಾತ್ರ ಸ್ವಾಮಿಯಾಗಿರುವ ಅರಸನಿಂದ ನಮಗೇನು ಪ್ರಯೋಜನ? ದಿನದಿನವೂ ನಮ್ಮನ್ನು ಮನುಷ್ಯರು ಸಾವಿರಾರಾಗಿ ಕೊಲ್ಲುತ್ತಿದ್ದರೂ ಆತನು ಏನಾದರೂ ಮಾಡಿದ್ದಾನೆಯೇ? ಕೇಳಿಲ್ಲವೆ?
ಓದು ಹೇಳದ ಗುರುವು| ಮಂತ್ರ ಬರದರ್ಚಕನು ॥ 
ರಕ್ಷೆ ನೀಡದ ನೃಪನು| ನಲವು ನುಡಿಯದ ಭಾರ್ಯೆ ॥ 
ಮುರಿದ ನಾವೆಯ ತೆರದೊಳಿವರ ಬಿಡಬೇಕು ॥೯॥ 
ಅದರಿಂದ ನಮ್ಮ ಕಷ್ಟ ಸುಖಗಳನ್ನು ನೋಡುವ ರಾಜನೊಬ್ಬನನ್ನು ಮಾಡಿಕೊಳ್ಳೋಣ” ಎಂದು ಚಿಂತಿಸಿ, ನೋಡುವುದಕ್ಕೆ ಚೆನ್ನಾಗಿದ್ದಾನೆಂದು ಗೂಗೆಯನ್ನು ಅರಸಾಗಿ ಆರಸಿಕೊಂಡರು. ಅರಸುತನದ ಅಭಿಷೇಕಕ್ಕಾಗಿ ಬೇಕುಬೇಕಾದ ಪದಾರ್ಥಗಳೆಲ್ಲವೂ ಸಿದ್ಧವಾದುವು. ಸಿಂಹಾಸನವನ್ನು ಹಾಕಿ, ಅದರ ಮೇಲೆ ಹುಲಿಯ ಚರ್ಮವನ್ನು ಹಾಸಿ, ಮಂತ್ರಗಳನ್ನೂ ಹಾಡುಗಳನ್ನೂ ಹೇಳುತ್ತಿರುವ ವೇಳೆಯಲ್ಲಿ ಒಂದು ಕಾಗೆಯು ಎಲ್ಲಿಂದಲೂ ಬಂತು “ಇದೇನು ಪಕ್ಷಿ ಕುಲವೆಲ್ಲ ಇಲ್ಲಿ ಸೇರಿದೆ. ಏನೋ ದೊಡ್ಡ ಉತ್ಸವ ನಡೆಯುತ್ತಿದೆ? ಎಂದುಕೊಂಡಿತು. ಪಕ್ಷಿಗಳೂ ಆ ಕಾಗೆಯನ್ನು ನೋಡಿ “ಪ್ರಾಣಿಗಳಲ್ಲಿ ನರಿಯು ಹೇಗೋ ಹಕ್ಕಿಗಳಲ್ಲಿ ಈ ಕಾಗೆಯು. ಹಾಗೆ ಬುದ್ಧಿವಂತನು. ಇದನ್ನೂ ಕೇಳಬೇಕಾಗಿತ್ತು”? ಎಂದು ಕೊಂಡುವು. ಆ ವೇಳೆಗೆ ಕಾಗೆಯು “ಇದೇನಿದು?” ಎಂದು ಕೇಳಿತು. ಅವು “ನಮಗೆ ರಾಜನಿಲ್ಲ ಅದರಿಂದ ಒಬ್ಬ ರಾಜನನ್ನು ಆರಿಸುತ್ತಿದ್ದೇವೆ. ಈ ಗೂಗೆಯನ್ನು ಅರಸನನ್ನು ಮಾಡಬೇಕೆಂದು ಇದ್ದೇವೆ. ನೀನೇನು ಹೇಳುವೆ?” ಎಂದುವು.  ಈ ಕಾಗೆಯು ನಕ್ಕು “ನವಿಲು, ಹಂಸ, ಮೊದಲಾದ ಬೇಕುಬೇಕಾದ ಹಕ್ಕಿಗಳೆಲ್ಲ ಇರುವಾಗ ಈ ಹಗಲು ಕುರುಡನಿಗೆ ಅರಸುತನವೆ? ಈ ಸೊಟ್ಟ ಮೂತಿಗೆ ಸಿಂಹಾಸನವೆ? ಚೆನ್ನಾಯಿತು. ನಾನು ಒಪ್ಪುವುದಿಲ್ಲ. ಕೇಳಿಲ್ಲವೆ?
ಅರಸು ಕೀಳನಾದರೆ ಧರ್ಮ ಮರೆತು ಹೋಹುದು ॥ 
ಧರಣಿ ಬೆಳೆಯ ಬೆಳೆಯದು| ನರರ ಗೋಳು ಬೆಳೆವುದು ॥೧೦॥ 
ಅಲ್ಲದೆ ಒಬ್ಬ ರಾಜನಿರುವಾಗ ಇನ್ನೊಬ್ಬ ರಾಜನನ್ನು ಮಾಡುವುದೆಂದರೇನು? ಆಕಾಶಕ್ಕೆ ಒಬ್ಬ ಸೂರ್ಯ ಎನ್ನುವ ಹಾಗೆ ಪ್ರಜೆಗಳಿಗೆ ಒಬ್ಬನೇ ರಾಜ. ಅಲ್ಲದೆ ಗರುಡನು ಸಾಮಾನ್ಯನೇ? ಕೇಳಿಲ್ಲವೆ?
ಮಹಿಮರಾ ಹೆಸರಿನಿಂದಲೆ ಸಿದ್ಧಿಯಹುದು| 
ಚಂದ್ರಮನ ಹೆಸರೆತ್ತಿ ಬದುಕಿದುವು ಮೊಲಗಳು ॥೧೧॥ 
ಆ ಹಕ್ಕಿಗಳು ಅದು ಹೇಗೆ ಎಂದು ಕೇಳಲು ಕಾಗೆಯು ಹೇಳಿತು:-
*****
ಚತುರ್ದಂತನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...