ಒಂದಾನೊಂದು ಊರಿನಲ್ಲಿ ಹರಿದತ್ತನೆಂಬ ಬ್ರಾಹ್ಮಣನಿದ್ದನು. ಆತನು ಬೇಸಾಯ ಮಾಡುವನು. ಆ ಬೇಸಾಯವು ಯಾವಾಗಲೂ ಫಲವೇ ಆಗುತ್ತಿರಲಿಲ್ಲ. ಒ೦ದು ದಿನ ಆ ಬ್ರಾಹ್ಮಣನು ಸಂಜೆಯ ಹೊತ್ತಿನಲ್ಲಿ ತನ್ನ ಹೊಲದಲ್ಲಿ ಒಂದು ಮರದಡಿ ಆಗ ಕೊಂಚ ದೂರವಿದ್ದ ಹುತ್ತದಿಂದ ಹೊರಕ್ಕೆ ಬಂದು ದೊಡ್ಡ ಹೆಡೆಯನ್ನು ಬಿಟ್ಟು ಕೊಂಡು ಆಡುತ್ತಿದ್ದ ಹಾವು ಕಾಣಿಸಿತು. ಆಗ ಅವನು ಯೋಚಿಸಿದನು:- “ಆಹಾ ಇದು ಈ ಕ್ಷೇತ್ರದ ದೇವತೆಯಾಗಿರಬೇಕು. ಇದನ್ನು ನಾನು ಇದುವರೆಗೂ ಪೂಜಿಸಿಲ್ಲ. ಅದರಿಂದಲೇ ಇರಬೇಕು, ನನ್ನ ಬೇಸಾಯವೆಲ್ಲ ನಿಷ್ಪಲವಾಗುತ್ತಿರುವುದು. ಇರಲಿ. ಇನ್ನು ಮೇಲಾದರೂ ಇದನ್ನು ಪೂಜಿಸುವೆನು” ಎಂದು ಕೊಂಡು, ಎಲ್ಲಿಂದಲೋ ಹಾಲು ತಂದು ಅದಕ್ಕೆ ಒಪ್ಪಿಸಿ, “ಕ್ಷೇತ್ರ ಪಾಲಕನೆ, ನೀನು ಇಲ್ಲಿರುವುದು ನನಗೆ ಇದುವರೆಗೂ ತಿಳಿದಿರಲಿಲ್ಲ. ಅದರಿಂದ ಪೂಜೆಯನ್ನು ಮಾಡಿರಲಿಲ್ಲ. ಕ್ಷಮಿಸು? ಎಂದು ನಮಸ್ಕಾರ ಮಾಡಿದನು.
ಆ ಬ್ರಾಹ್ಮಣನು ಮರುದಿವಸ ಬರುವ ವೇಳೆಗೆ ಹಾಲಿನ ಪಾತ್ರೆಯಲ್ಲಿ ಒಂದು ಹೊನ್ನು ಇತ್ತು. ಅಂದಿನಿಂದ ಅವನು ತಾನು ಒಬ್ಬನೇ ಬಂದು ಹಾಲಿಟ್ಟು ಹೋಗುವನು: ಬೆಳಿಗ್ಗೆ ಬಂದು ಹೊನ್ನನ್ನು ತೆಗೆದುಕೊಂಡು ಹೋಗುವನು.
ಹೀಗೆಯೇ ಇರುತ್ತಿರಲು ಒಂದು ದಿನ ಆ ಬ್ರಾಹ್ಮಣನು ಯಾವುದೋ ಊರಿಗೆ ಹೋಗಬೇಕಾಗಿ ಬಂತು. ಅದರಿಂದ ಹಾವಿಗೆ ಹಾಲಿಡುನ ಕೆಲಸವನ್ನು ಮಗನಿಗೆ ಒಪ್ಪಿಸಿ ಹೋದನು. ಮಗನು ಹಾಲಿಟ್ಟು ಹೊನ್ನು ತೆಗೆದುಕೊಳ್ಳುವಾಗ ಅವನಿಗೆ ಒ೦ದು ಯೋಚನೆ ಬಂತು. “ಈ ಹುತ್ತದಲ್ಲಿ ಹೊನ್ನು ಬೇಕಾದ ಹಾಗೆ ಇರಬೇಕು. ಈ ಹುತ್ತವನ್ನು ಅಗೆದು ಹಾವನ್ನು ಕೊಂದು ಎಲ್ಲವನ್ನೂ ತೆಗೆದುಕೊಂಡು ಬಿಡೋಣ” ಎಂದುಕೊಂಡು, ಎರಡನೆಯ ದಿನ ಹಾಲು ಕುಡಿಯುವುದಕ್ಕೆ ಬಂದ ಹಾವನ್ನು ದೊಣ್ಣೆಯಿಂದ ಹೊಡೆದನು. ಅದು ಏನೋ ತಪ್ಪಿ ಹಾವು ಉಳಿದುಕೊಂಡು ರೋಷದಿಂದ ಹಿಂತಿರುಗಿ ಅವನನ್ನು ಕಚ್ಚಿತು. ಆ ಹುಡುಗನು ಆ ಕೂಡಲೇ ಸತ್ತು
ಹೋದನ್ನು ನೆಂಟರು ಇಷ್ಟರು ಬಂದು ಅವನನ್ನು ತೆಗೆದುಕೊಂಡು ಹೋಗಿ ಸಮೀಪದಲ್ಲಿಯೇ ಚಿತಿಯನ್ನು ಮಾಡಿ ಸುಟ್ಟರು.
ತನಗೆ ಶರಣಾಗಿ ಬಂದ ಜಂತುಗಳ |
ಕಾಯದಿದ್ದಂಥ ಕರುಣ ಹೀನನಿಗೆ ||
ಇದ್ದ ಸತ್ಫಲವು ವಿಫಲವಾಗುವುದು |
ಕೇಳಿ ಕಾಣೆಯಾ ಪದ್ಮನನ ಕಥೆಯಾ ॥ ೨೬ ॥
ನೆಂಟರು ಅದು ಹೇಗೆ ಎಂದು ಕೇಳಲು, ಹರಿದತ್ತನು ಹೇಳಿದನು:-
*****
ಪದ್ಮವನದ ಹಂಸಗಳ ಕಥೆ ಓದಿ