Home / ಬಾಲ ಚಿಲುಮೆ / ಕಥೆ / ಧೂತರು ವಂಚಿಸಿದ ಕಥೆ

ಧೂತರು ವಂಚಿಸಿದ ಕಥೆ

ಒಂದಾನೊಂದು ಊರಿನಲ್ಲಿ ಒಬ್ಬ ಬ್ರಾಹ್ಮಣನಿದ್ದನು. ಆತನು ಅಗ್ನಿ ಹೋತ್ರನನ್ನು ಇಟ್ಟುಕೊಂಡು ತನ್ನ ಪಾಡಿಗೆ ತಾನಿದ್ದನು. ಒಂದು ಸಲ ಆತನಿಗೆ ಯಜ್ಞ ಮಾಡಬೇಕು ಎನ್ನಿಸಿತು. ಅದಕ್ಕಾಗಿ ಒಂದು ಆಡು ತರಬೇಕು ಎಂದು ಬೇರೊಂದು ಗ್ರಾಮಕ್ಕೆ ಹೋಗಿ ಅಲ್ಲಿ ಒಬ್ಬ ಧನಿಕನನ್ನು ಕೇಳಿ ಒಂದು ಆಡನ್ನು ತಂದನು. ಅದನ್ನು ಆತನು ಹೊತ್ತುಕೊಂಡು ಬರುತ್ತಿರುವಾಗ, ಮೂವರು ದುಷ್ಟರು ಅದನ್ನು ಕಂಡು “ಆಡು ಚೆನ್ನಾಗಿದೆ. ಏನಾದರೂ ಮಾಡಿ ಹಾರಿಸ ಬೇಕು” ಎಂದು ಆಲೋಚಿಸಿಕೊಂಡರು. ಆವರಲ್ಲಿ ಒಬ್ಬನು ಮುಂದೆ ಬಂದು “ಎನಿದು, ಬ್ರಾಹ್ಮಣ, ಹೀಗೆ ಮಾಡುವವರುಂಟೆ? ಈ ನಾಯನ್ನು ನಿಮ್ಮಂಥವರು ಮುಟ್ಟಲೂಬಾರದು. ಹೀಗಿರಲು, ಇದನ್ನು ಹೊತ್ತುಕೊಂಡು ಹೋಗುವುದು ಎಂದರೆ. ಏನನ್ಯಾಯ?” ಎಂದನು. ಆ ಬ್ರಾಹ್ಮಣನು ಅದನ್ನು ಕೇಳಿ “ಏನನ್ಯಾಯ್ಯಾ, ನಿನಗೇನು ಕಣ್ಣು ಕಾಣಿಸುತ್ತದೆಯೋ ಇಲ್ಲವೋ? ಆಡನ್ನು ನಾಯಿಯೆನ್ನುತ್ತೀಯೇ?” ಎಂದು ರೇಗಿದನು. ಅವನು “ಹೋಗಲಿ ಬಿಡಿ, ಸ್ವಾಮಿ ನಿಮ್ಮ ಹಣೆಯ ಬರೆಹ ನಮಗೇನ?” ಎಂದುಕೊಂಡು ಅತ್ತ ಹೋದನು.
ಬ್ರಾಹ್ಮಣನು ಅಷ್ಟುದೂರ ಹೋಗುವುದರೊಳಗಾಗಿ ಇನ್ನೊಬ್ಬ ಬಂದು “ಶಿವ ಶಿವಾ, ಏನನ್ಯಾಯ? ಈ ಸತ್ತ ಮಗುವನ್ನು ಹೀಗೆ ಹೊತ್ತುಕೊಂಡು ಹೋಗುತ್ತಿರುವರಲ್ಲ!” ಎಂದನು. ಬ್ರಾಹ್ಮಣನು “ಛೇ, ಏನು ಮಾತನಾಡುತ್ತೀಯೆ? ಬದುಕಿರುವ ಆಡನ್ನು ಸತ್ತ ಮಗುವೆನ್ನುತ್ತಿದ್ದೀಯೆ?” ಎಂದು ಗದರಿಸಿದನು. ಅದ ಅವನು “ತಪ್ಪಾಯಿತು ಸ್ಟಾಮಿ, ನನಗೆ ಹಾಗೆ ಕಂಡಿತು, ಹಾಗೆಂದೆ. ತಮ್ಮ ಇಷ್ಟ. ತಮಗೆ ತೋರಿದಂತೆ ಮಾಡಿ” ಎಂದು ಕೈ ಮುಗಿದು ಹೋದನು.
ಇನ್ನಷ್ಟು ದೂರ ಹೋಗುವುದರೊಳಗೆ ಇನ್ನೊಬ್ಬ ಧೂರ್ತನು ಎದುರಿಗೆ ಬಂದನು. ಅವನು ಬ್ರಾಹ್ಮಣನ ಕಡೆಗೆ ನೋಡಿ ಆಶ್ಚರ್ಯಪಡುತ್ತಾ, “ಕೈ ಮುಗಿದುಕೊಂಡು, ಸ್ವಾಮಿ, ಇದು ಸರ್ವಥಾಯುಕ್ತವಲ್ಲ. ಕತ್ತೆಯನ್ನು ಹೊತ್ತುಕೊಂಡು ಹೋಗುವುದು ಎಂದರೇನು? ಮೊದಲು ಇದನ್ನು ಬಿಡಿ. ಇನ್ನಿಬ್ಬರು ನೋಡುವುದಕ್ಕಿ೦ತ ಮುಂಚೆ ಬಿಡಿ” ಎಂದನು. ಬ್ರಾಹ್ಮಣನಿಗೆ “ಇದೇನಿದು” ಒಬ್ಬನಿಗೆ ನಾಯಿಯಾಗಿ ಕಂಡಿತು. ಇನ್ನೊಬ್ಬನಿಗೆ ಸತ್ತ ಮಗುವಾಗಿ ಕಾಣಿಸಿತು. ಮತ್ತೊಬ್ಬನಿಗೆ ಕತ್ತೆಯಾಗಿ ಕಾಣಿಸಿತು. ನನಗೆ ಈಗಲೂ ಆಡಾಗಿ ಕಾಣಿಸುತ್ತಿದೆ. ಇದು ಹೀಗೆ ಒಬ್ಬೊಬ್ಬರಿಗೆ ಒಂದೊಂದಾಗಿ ಕಾಣಿಸಬೇಕಾದರೆ, ನಿಜವಾಗಿಯೂ ಪಿಶಾಚಿಯೇ ಆಗಿರಬೇಕು.” ಎನ್ನಿಸಿತು. ಆ ಕೂಡಲೇ ಅವನು ಅದನ್ನು ಧೊಪ್ಪನೆ ಎತ್ತಿಹಾಕಿ ಓಡಿ ಹೋದನು. ಧೂರ್ತರು ಅದನ್ನು ಹೊತ್ತುಕೊಂಡು ಹೋಗಿ ಪೂರೈಸಿದರು. ನಾವು ಹಾಗೇ ಮಾಡಬೇಕು.
ಸೇವಕನಾಗಿ ವಿನಯದಿಂದ ಓಲೈಸಿದರೆ, ಅತಿಥಿಯಾಗಿ ಹೋಗಿ ಒಳ್ಳೆಯ ಮಾತುಗಳನ್ನಾಡಿದರೆ, ಹೆಂಗಸು ಅತ್ತು ಹೆದರಿಸಿದರೆ, ಮೋಸಗಾರರು ಸವಿಮಾತು ಆಡಿದರೆ, ಮೋಸ ಹೋಗದವರು ಯಾರು? ದುರ್ಬಲರೇ ಆಗಿರಲಿ, ಹೆಚ್ಚಾಗಿದ್ದರೆ ಅವರ ಜೊತೆಯಲ್ಲೂ ವಿರೋಧ ಮಾಡಬಾರದು. ಕೇಳಿಲ್ಲವೆ?
ಸಂಖ್ಯೆಯಲಿ ಹಿರಿದಾದ ಜನರೊಡನೆ ಹಗೆಯಾಗದು ॥ 
ಹಾವು ಹಿರಿದಾದರೂ ಇರುವೆ ತಿಂದು ಹಾಕುವುದು ॥ ೨೨ ॥
*****
Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...