Home / ಕವನ / ಕವಿತೆ / ಮುಂಜಾನೆಯ ಮುನ್ನಿರುಳು

ಮುಂಜಾನೆಯ ಮುನ್ನಿರುಳು

ದೇವನಿಲ್ಲಿಗೆ ಬರುವ ಮುನ್ನವೆ ದೇವದೂತರು ಬರುವರು
ಎನ್ನುವೈತಿಹ್ಯವನು ನಿಜವೆನಿಸೆನಿತುದಾತ್ತಧ್ಯೇಯರು
ಬಾನವರಿಗಿಳೆ ಸುಪಥವಾಗಲು ಮುನ್ನ ಜನ್ಮವ ಪಡೆಯುತ
ನಡೆದರೈ ಪರದರ್ಪದುರ್ಗಮವಾದ ನಮ್ಮೀ ನಾಡೊಳು.

ರಾಮಮೋಹನ ರಾಮಕೃಷ್ಣರು ಯತಿ ವಿವೇಕಾನಂದರು
ಮೆಹತ ಬಂಕಿಮಚಂದ್ರ ಗೋಖಲೆ ದಾಸ ಶ್ರದ್ಧಾನಂದಜಿ
ಅನ್ಸಾರಿ ನವರೋಜಿ ಇಕ್ಬಲ ಮಾಲವೀಯರು ರಾನಡೆ
ಲಾಲಲಜಪತರಾಯ ಮೋತಿಲಾಲ ತಿಲಕ ರವೀಂದ್ರರು-

ಇಂತೆಣಿಸಿ ಮುಗಿಸುವೆನೆ ನಾನೀ ದಿವ್ಯತೇಜೋಮಹಿಮರ
ಭಾರತದೊಳಿಂಗ್ಲೆಂಡು ಚೆಲ್ಲಿದ ನೆರಳತಮದೊಳು ಹೊಳೆದರ
ಭೀತಿಮೋಹವಿಮಾನಮೂರ್ಛಿತರಾಗದುಳಿದರ ಧೀರರ
ಇರುಳ ಗರ್ವದ ಮೌನವಿಗಡಿಸೆ ಉಷಾಸ್ಫೂರ್ಜನ್ನಾದರ?

ನೆಲವ ತಬ್ಬಿರುವಂಧಕಾರವ ದೂರದುಡಗಣ ಹರಿಸದು
ನೆಲವ ತಬ್ಬುವ ಬೆಳಕೆ ಬೇಕಿದನೆಬ್ಬಿಸುತಲಸುವೆಗೆಯಲು
ಬುದ್ಧಿಯುಫ್ಪರಿಗೆಯಲಿ ನೆಲಸಿದ ವೀಥಿವೀಕ್ಷಣ ಚತುರರು
ತಲದಿ ನಡೆಯುವ ಪ್ರಾಣದಾಟಕೆ ಮೋಹಗೊಂಡರು ವಿಫಲರು.

ಅನ್ನಕೋಶದಿ ಬಂದಿ ಹಲವೆಡೆ ಪ್ರಾಣಕೋಶದಿ ಹಲವೆಡೆ
ಮನೋಜ್ಞಾನಾನಂದ ಕೋಶಗಳಲ್ಲಿಯಂತೆಯೆ ಕೆಲವೆಡೆ
ಭಾರತದ ಚೈತನ್ಯವಾಹಿನಿ ಸೇತು ಬಂಧಿತೆಯಾಗುತ
ಪರರ ಸಂಪತ್‌ ಸುರ್ಫಣೆಗಾದಳು ತನ್ನ ತಾನೇ ಮರೆಯುತ.

ಪಂಚಕೋಶಗಳಲ್ಲು ಎಡೆತಡೆಯಿಲ್ಲದಂದದಿ ಹರಿಯುತ
ಈ ಮಹಾನದಿ ವಿಶ್ವಜೀವನಶಿವಧಿಸಂಗಮೆಯಪ್ಪಳೆ?
ಪ್ರಕೃತಿತಾರಕೆಯಾಗದಂದದಿ ಕುಟಿಲ ರೌದ್ರವ ಮೆರೆಸುತ
ರುದ್ರಜಟೆಯೊಳು ಸಿಲುಕದೀ ಹರಿಪದೆಗೆ ಬಿಡುಗಡೆಯೆಂದಿಗೆ?
*****

Tagged:

Leave a Reply

Your email address will not be published. Required fields are marked *

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...