Home / ಕವನ / ಕವಿತೆ / ವಿಜಯ ವಿದ್ಯಾರಣ್ಯರಿಗೆ

ವಿಜಯ ವಿದ್ಯಾರಣ್ಯರಿಗೆ

ನನ್ನಯೀ ನಾಡಿನಲ್ಲೊಪ್ಪನ್ನು ಹಾಕಿದಂತಹ ಒಪ್ಪೆ ಇಂದು ಒಪ್ಪು!
ನನ್ನಿಯಲಿ ನಾಡನ್ನು ನೆನೆಸಿದಂತಹ ನನಸೆ ಬಿಗಿತಾಗಿ ಬಂದು ಅಪ್ಪು!
ತಾಯಿಯೊಡಲಿನ ಕಡಲಿನಲ್ಲಿದ್ದ ಸವಿಸವಿದು
ಸವಿಯು ನೀನಾಗಿ ಬಂದು
ಸಾಯಲಿಕ್ಕಾದ ಜಗದಲ್ಲೆಲ್ಲ ಸವಿ ಸುರವಿ
ಸೀ ಮಾಡಿ ಬಿಟ್ಟೆ ಅ೦ದು!
ಮುಗಿಲಿನಲಿ ಮೊಳಮೊಳಗುವಂಥ ‘ಬಿಚ್ಚ’ ನ್ನೊಡನೆ
ತಂದು ಬಂದೀ ಜಗಕ್ಕೆ
ತಗಲಿಸಿದಿ–ದಾಸ್ಯದಿಂದಗಲಿಸಿದಿ ಮಾಧವನೆ!
ಜಯ ನಿನ್ನಯಾ ಮೊಗಕ್ಕೆ!
ಜೀವಕಳೆಯಳಿದಂಥ ಜನರ ಮೈ-ಮನಸು-ಮಾತುಗಳಲ್ಲಿ
ಪ್ರೀತಿಯಿಂದ
ದೇವನಲ್ಲಿರುವಂಥ ಸೊಗಸನ್ನು ಸೃಜಿಸಿದೆಯೊ
ಸೊಬಗುಳ್ಳ ರೀತಿಯಿಂದ!
ಕಲಿಗಳನ್ನು ಕನ್ನಡದ ರಾಜ್ಯದಲ್ಲಿ ಕಲ್ಪಿಸಿದಿ
ನಿನ್ನಯಾ ರಾಜ್ಯದಲ್ಲಿ!
ಕಲಿಯುಗದ ಹೊಟ್ಟೆಯೊಳು ಕೃತಯುಗವ ಹುಟ್ಟಿಸಿದಿ
ಅಂದು ಸ್ವಾರಾಜ್ಯದಲ್ಲಿ!
*****
Tagged:

Leave a Reply

Your email address will not be published. Required fields are marked *

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...