Home / ಕವನ / ಕವಿತೆ / ಇತಿಹಾಸಾವಲೋಕನ ನಿರ್ವೇದ

ಇತಿಹಾಸಾವಲೋಕನ ನಿರ್ವೇದ

ಪರಶಿವಗು ತಪದಿಚ್ಛೆಯೊಮ್ಮೆಗೆ ಹರಿಗು ಯೋಗದ ನಿದ್ದೆಯು
ಭಾರತಾತ್ಮವೆ, ನಿನಗು ಅಂತರ್ಮುಖತೆಯಾಯಿತೆ ಸಹಜದಿ?
ನೀನು ಸಾಸಿರವರುಷ ಜಡರೊಳೆಯಿದ್ದೆ ಹರಣವ ಹದುಗಿಸಿ
ತವರ ಸೇರಿದ ಮೇಲೆ ಜಾನಕಿ ರಾಮರಾಜ್ಯವಿದೋ ಎನೆ.

ಕೃಷಿಯುಪೇಕ್ಷಿತವಾಗಿ ಹುಲುಸದ ನೆಲಕೆ ಚಿಚ್ಚರದೊಕ್ಕಲು
ಗೊಬ್ಬರವನಿಕ್ಕೊವೊಲು ತಂದನು ಪರಜನವ ಪಶುಪತಿಯೆನೆ
ಶಕರು ಹೂಣರು ತುರುಕರಾಫ್ಘನರಂತೆ ಮುಘಲರು ತಮ್ಮಯ
ತನುಮನವ ಬೆರಸಿದರು ನಿನ್ನಯ ಮಣ್ಣಿನೊಳು ರಸವೂರಲು.

ಬೇಸಾಯ ಬೆಳೆಯಪ್ಪ ಕಾಲಕೆ ಕಳೆಗಳೇಳ್ವವು ಹುಳುಗಳೂ
ಹಾಲು ತೆನೆಗೂಡುತಿರೆ ಪೈರೊಳು ಬೆಳ್ಳಕ್ಕಿ ಸಾಲಿಡುವುವು
ಇಂತೆ ಆಯಿತೊ ಏನೊ ನಮ್ಮೀನಾಡಿನೈಸಿರಿ ಸುಗ್ಗಿಗೆ
ಈ ನೆಲದಿ ಹುಳು ಹುಪಟೆ ಹೆಚ್ಚಿತು, ಬಿಳಿಯ ಜನ ಕಾಲೂರಿತು.

ಮೇದನಿಯ ಬಲದಿಂದಲೊಯ್ಯುವ ಹಿರಣ್ಯಾಕ್ಷರೊ ಎಂಬೊಲು
ಆಸುರವ ಮೆರೆಸುತ್ತ ಸೆಳೆದರು ಭಾರತಾತ್ಮವನಾಂಗ್ಲರು
ವಿಜ್ಞಾನ ಪಾಶಗಳ ಬೀಸುತ ಬಂಧಿಸುತ ಕೊಂಡೊಯ್ದರು
ಸಪ್ತಸಾಗರದಾಚೆ ತಮ್ಮಯ ನಾಡ ಮಂಚಕೆ ಬಿಗಿದರು.

ಎಲೆ, ಹರಿಪ್ರಿಯೆ, ನಿನ್ನ ತನುಜರ ಭಂಗಕಾವನು ಮರುಗನು
ನಿನ್ನ ಋಷಿಕವಿದೇವಗಮನವ ಸೆಳೆದೆಯಾ ನಿಟ್ಟುಸಿರೊಳು?
ಮುಕ್ತರವರನುತಪಿಸಿ ಬಿದ್ದರೆ ಪುನರ್ಜನ್ಮದ ಬವಣೆಗೆ
ನಿನ್ನ ಮಣ್ಣೊಳೆ ತನುವನಾನುತ ನಿನ್ನ ನಿಭವವ ಮರಳಿಸೆ?
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...