Home / ಕವನ / ಕವಿತೆ / ಇತಿಹಾಸಾವಲೋಕನ ನಿರ್ವೇದ

ಇತಿಹಾಸಾವಲೋಕನ ನಿರ್ವೇದ

ಪರಶಿವಗು ತಪದಿಚ್ಛೆಯೊಮ್ಮೆಗೆ ಹರಿಗು ಯೋಗದ ನಿದ್ದೆಯು
ಭಾರತಾತ್ಮವೆ, ನಿನಗು ಅಂತರ್ಮುಖತೆಯಾಯಿತೆ ಸಹಜದಿ?
ನೀನು ಸಾಸಿರವರುಷ ಜಡರೊಳೆಯಿದ್ದೆ ಹರಣವ ಹದುಗಿಸಿ
ತವರ ಸೇರಿದ ಮೇಲೆ ಜಾನಕಿ ರಾಮರಾಜ್ಯವಿದೋ ಎನೆ.

ಕೃಷಿಯುಪೇಕ್ಷಿತವಾಗಿ ಹುಲುಸದ ನೆಲಕೆ ಚಿಚ್ಚರದೊಕ್ಕಲು
ಗೊಬ್ಬರವನಿಕ್ಕೊವೊಲು ತಂದನು ಪರಜನವ ಪಶುಪತಿಯೆನೆ
ಶಕರು ಹೂಣರು ತುರುಕರಾಫ್ಘನರಂತೆ ಮುಘಲರು ತಮ್ಮಯ
ತನುಮನವ ಬೆರಸಿದರು ನಿನ್ನಯ ಮಣ್ಣಿನೊಳು ರಸವೂರಲು.

ಬೇಸಾಯ ಬೆಳೆಯಪ್ಪ ಕಾಲಕೆ ಕಳೆಗಳೇಳ್ವವು ಹುಳುಗಳೂ
ಹಾಲು ತೆನೆಗೂಡುತಿರೆ ಪೈರೊಳು ಬೆಳ್ಳಕ್ಕಿ ಸಾಲಿಡುವುವು
ಇಂತೆ ಆಯಿತೊ ಏನೊ ನಮ್ಮೀನಾಡಿನೈಸಿರಿ ಸುಗ್ಗಿಗೆ
ಈ ನೆಲದಿ ಹುಳು ಹುಪಟೆ ಹೆಚ್ಚಿತು, ಬಿಳಿಯ ಜನ ಕಾಲೂರಿತು.

ಮೇದನಿಯ ಬಲದಿಂದಲೊಯ್ಯುವ ಹಿರಣ್ಯಾಕ್ಷರೊ ಎಂಬೊಲು
ಆಸುರವ ಮೆರೆಸುತ್ತ ಸೆಳೆದರು ಭಾರತಾತ್ಮವನಾಂಗ್ಲರು
ವಿಜ್ಞಾನ ಪಾಶಗಳ ಬೀಸುತ ಬಂಧಿಸುತ ಕೊಂಡೊಯ್ದರು
ಸಪ್ತಸಾಗರದಾಚೆ ತಮ್ಮಯ ನಾಡ ಮಂಚಕೆ ಬಿಗಿದರು.

ಎಲೆ, ಹರಿಪ್ರಿಯೆ, ನಿನ್ನ ತನುಜರ ಭಂಗಕಾವನು ಮರುಗನು
ನಿನ್ನ ಋಷಿಕವಿದೇವಗಮನವ ಸೆಳೆದೆಯಾ ನಿಟ್ಟುಸಿರೊಳು?
ಮುಕ್ತರವರನುತಪಿಸಿ ಬಿದ್ದರೆ ಪುನರ್ಜನ್ಮದ ಬವಣೆಗೆ
ನಿನ್ನ ಮಣ್ಣೊಳೆ ತನುವನಾನುತ ನಿನ್ನ ನಿಭವವ ಮರಳಿಸೆ?
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...