Home / ಕವನ / ಕವಿತೆ / ಶ್ರೀ ಬಸವೇಶ್ವರರಿಗೆ

ಶ್ರೀ ಬಸವೇಶ್ವರರಿಗೆ

ತಾಯಿ ತಂದೆಯು ಒ೦ದರಲ್ಲಾದ ಪರಶಿವನ
ಪರಮ ಪ್ರಸಾದವುಂಡು
ಸಾಯಗೊಲ್ಲುತ್ತ ಬಂದಿರಿ ನಂದಿಕೇಶ್ವರರೆ
ಜಗದಿ ಕಹಿಯನ್ನು ಕಂಡು!
ಬಸವೇಶ್ವರರೆ ಜಗದಿ ನೆಲಿಸಿರುವ ಹೊಸತನದ
ಕಟ್ಟೆಸಕ ನಿಟ್ಟಿಸುತ್ತ
ಎಸೆದಿರೀ ವಸುಧೆಯಲಿ ಜಗದ ಜನರೊಳು ಜಗದ
ಹೊಸತನವ ಹುಟ್ಟಿಸುತ್ತ!
ಕೈಲಾಗದೀ ಜಗದ ಜನರು ಆರಡಿಗೊಂಡು
ನಿಮ್ಮ ಹಾರೈಸುವಾಗ್ಗೆ
ಕೈಲಾಸವನ್ನೆ ಇಳೆಗಿಳಿಸಿ ಆರಡಿಯಿಟ್ಟು
ಬಂದಿರಾರೈಸಲಾಗ್ಗೆ!
ಚಿಕ್ಕಂದಿನಿಂದ ಅಂಗಕ್ಕೆ ಮೆಚ್ಚಿದವರ್ಗೆ
ಮೀಸಲಿನ ವಚನವುಣಿಸಿ
ಅಕ್ಕರದಿ ಜಗದಂಗವನ್ನು ಶಿವಲಿಂಗದಲಿ
ಇರಿಸಿ ಜಂಗಮವ ತಣಿಸಿ
‘ತಿಳಿವೆ’ ಎಂದಿಳೆಯ ತಿರುಳಲ್ಲಿರುವ ತಿಳಿವನ್ನು
ತಿಳಿದ ನಿಮಗಂಗವೆಲ್ಲಿ!
‘ಉಳಿವೆ’ ಕೂಡಲದಲ್ಲೆ ಎಂದು ಉಳಿದಿರಿ ನೀವು
ಪರಮಾತ್ಮಲಿಂಗದಲ್ಲಿ!
*****
Tagged:

Leave a Reply

Your email address will not be published. Required fields are marked *

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...