Home / ಕವನ / ಕವಿತೆ / ಕರುಣೆ

ಕರುಣೆ

ದೇವ ನಿನ್ನಪಾರ ಕರುಣೆಗಾವ ನೆಲೆಯ ಕಾಣಲಿ!
ಈವ ಶಕ್ತಿ ಈಯುತಿರಲಿ ಭಕ್ತಿಭಾವ ಬೆಳೆಯಲಿ!
ಬೆಳಕು ಗಾಳಿ ನೀರು ನೆಲ ಇತ್ತುದೆಲ್ಲ ಸಾಲದೆ?
ಬೆಳೆವ ಬದುಕಿಗಿದುವೆ ಭಾರವೆಂದರೆಂತು ಹೇವವೆ?
ತಾಯಿ ಈದ ಮಗುವು ನೀನು ಬಂದೆ ಇತ್ತರಲ್ಲವೆ?
ಮಾಯ ಬಿಸುಟಿ ನಿನ್ನ ನೋಡು ಅದೇ ಶಕ್ತಿ ಅಂಶವೆ.
ಬೆಳೆವುದೊಂದೆ ಉಳಿದ ಕೆಲಸ ಇಲ್ಲವದಕೆ ಎಡೆ ತಡೆ;
ಇಳೆಯ ತುಂಬು ವಿಶ್ವ ವ್ಯಾಪಿ ನಿಲ್ಲಜೇಡ ನಡೆ ನಡೆ.


ಜಗದ ಬೆಳಕಿಗುಗಮ ನಿನ್ನ ಹೊಳೆವ ಕಣ್ಣ ಕಾಂತಿಯು
ಗಂಧವೀನ ಗಂಧವತಿಯು ನಿನ್ನ ಮ್ಬೆ ಸುಗಂಧವು
ಉಸುರಿನೆಳೆತ ಎದೆಯ ಕುಣಿತ ಕಡಲಿನೇರು ಇಳಿತವು,
ಇದಕೆ ತಾಳ ಹಾಕುತಿಹವು ಚಿಕ್ಕೆ ಬೆರಗುಗೊಂಡವು.
ನೀನು ಸಾಗೆ ಅಮರನಾಗಿ ಹತ್ತು ದಿಕ್ಕು ತುಂಬುತ
ಗಾನ ಬಂತು ಗಗನದಿಂದ ನಿನ್ನ ಬೆನ್ನ ಹತ್ತುತ
ತುಂಬಿ ತುಳುಕಿತಿಳೆಯ ಕಲಶ ಕಾದಿಹ ಕದಲಾರತಿ
ಪ್ರಕೃತಿ ಪುರುಷಗೆತ್ತಿ ಹಿಡಿದ ಹೊನ್ನ ಮಂಗಲಾರತಿ


ದೇಹವಿದ್ದರೇನು ಜೀವ ನಿನ್ನನೆ ನೀ ಮರೆವೆಯಾ?
ನೀನು ಹೊತ್ತ ಪರಿಗಳನ್ನೆ ನೀನೆ ಅರಿಯದಿರುವೆಯಾ?
ಹುಟ್ಟಿನಲ್ಲೆ ಹುದುಗಿ ಸಾವು ದೇಹರೂಪ ತಾಳಿತು
ಸೃಷ್ಟಿಯಲ್ಲಿ ತಾನು ತೋರಿ ನಿನ್ನನು ಮರೆ ಮಾಡಿತು
ನಿನ್ನ ಜರೆದು ತಾನು ಮರೆದು ಇದಕೆ ಬಾಳು ಎಂದಿತು
ದಣಿದು ಕೊನೆಗೆ ಮಣ್ಣುಗೂಡೆ ದೇಹವಳಿದು ಹೋಯಿತು
ತನ್ನ ಅರಿವು ತನಗೆ ಬರದೆ ಇದ್ದು ಇಲ್ಲದಾಯಿತು
ಅಳಿದ ದೇಹದಿಂದ ಉಳಿದ ನಿನಗೆ ವಿಜಯವಾಯಿತು
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...