Home / ಕವನ / ಕವಿತೆ / ಕರುಣೆ

ಕರುಣೆ

ದೇವ ನಿನ್ನಪಾರ ಕರುಣೆಗಾವ ನೆಲೆಯ ಕಾಣಲಿ!
ಈವ ಶಕ್ತಿ ಈಯುತಿರಲಿ ಭಕ್ತಿಭಾವ ಬೆಳೆಯಲಿ!
ಬೆಳಕು ಗಾಳಿ ನೀರು ನೆಲ ಇತ್ತುದೆಲ್ಲ ಸಾಲದೆ?
ಬೆಳೆವ ಬದುಕಿಗಿದುವೆ ಭಾರವೆಂದರೆಂತು ಹೇವವೆ?
ತಾಯಿ ಈದ ಮಗುವು ನೀನು ಬಂದೆ ಇತ್ತರಲ್ಲವೆ?
ಮಾಯ ಬಿಸುಟಿ ನಿನ್ನ ನೋಡು ಅದೇ ಶಕ್ತಿ ಅಂಶವೆ.
ಬೆಳೆವುದೊಂದೆ ಉಳಿದ ಕೆಲಸ ಇಲ್ಲವದಕೆ ಎಡೆ ತಡೆ;
ಇಳೆಯ ತುಂಬು ವಿಶ್ವ ವ್ಯಾಪಿ ನಿಲ್ಲಜೇಡ ನಡೆ ನಡೆ.


ಜಗದ ಬೆಳಕಿಗುಗಮ ನಿನ್ನ ಹೊಳೆವ ಕಣ್ಣ ಕಾಂತಿಯು
ಗಂಧವೀನ ಗಂಧವತಿಯು ನಿನ್ನ ಮ್ಬೆ ಸುಗಂಧವು
ಉಸುರಿನೆಳೆತ ಎದೆಯ ಕುಣಿತ ಕಡಲಿನೇರು ಇಳಿತವು,
ಇದಕೆ ತಾಳ ಹಾಕುತಿಹವು ಚಿಕ್ಕೆ ಬೆರಗುಗೊಂಡವು.
ನೀನು ಸಾಗೆ ಅಮರನಾಗಿ ಹತ್ತು ದಿಕ್ಕು ತುಂಬುತ
ಗಾನ ಬಂತು ಗಗನದಿಂದ ನಿನ್ನ ಬೆನ್ನ ಹತ್ತುತ
ತುಂಬಿ ತುಳುಕಿತಿಳೆಯ ಕಲಶ ಕಾದಿಹ ಕದಲಾರತಿ
ಪ್ರಕೃತಿ ಪುರುಷಗೆತ್ತಿ ಹಿಡಿದ ಹೊನ್ನ ಮಂಗಲಾರತಿ


ದೇಹವಿದ್ದರೇನು ಜೀವ ನಿನ್ನನೆ ನೀ ಮರೆವೆಯಾ?
ನೀನು ಹೊತ್ತ ಪರಿಗಳನ್ನೆ ನೀನೆ ಅರಿಯದಿರುವೆಯಾ?
ಹುಟ್ಟಿನಲ್ಲೆ ಹುದುಗಿ ಸಾವು ದೇಹರೂಪ ತಾಳಿತು
ಸೃಷ್ಟಿಯಲ್ಲಿ ತಾನು ತೋರಿ ನಿನ್ನನು ಮರೆ ಮಾಡಿತು
ನಿನ್ನ ಜರೆದು ತಾನು ಮರೆದು ಇದಕೆ ಬಾಳು ಎಂದಿತು
ದಣಿದು ಕೊನೆಗೆ ಮಣ್ಣುಗೂಡೆ ದೇಹವಳಿದು ಹೋಯಿತು
ತನ್ನ ಅರಿವು ತನಗೆ ಬರದೆ ಇದ್ದು ಇಲ್ಲದಾಯಿತು
ಅಳಿದ ದೇಹದಿಂದ ಉಳಿದ ನಿನಗೆ ವಿಜಯವಾಯಿತು
*****

Tagged:

Leave a Reply

Your email address will not be published. Required fields are marked *

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...