Home / ಕವನ / ಕವಿತೆ / ಕರುಣೆ

ಕರುಣೆ

ದೇವ ನಿನ್ನಪಾರ ಕರುಣೆಗಾವ ನೆಲೆಯ ಕಾಣಲಿ!
ಈವ ಶಕ್ತಿ ಈಯುತಿರಲಿ ಭಕ್ತಿಭಾವ ಬೆಳೆಯಲಿ!
ಬೆಳಕು ಗಾಳಿ ನೀರು ನೆಲ ಇತ್ತುದೆಲ್ಲ ಸಾಲದೆ?
ಬೆಳೆವ ಬದುಕಿಗಿದುವೆ ಭಾರವೆಂದರೆಂತು ಹೇವವೆ?
ತಾಯಿ ಈದ ಮಗುವು ನೀನು ಬಂದೆ ಇತ್ತರಲ್ಲವೆ?
ಮಾಯ ಬಿಸುಟಿ ನಿನ್ನ ನೋಡು ಅದೇ ಶಕ್ತಿ ಅಂಶವೆ.
ಬೆಳೆವುದೊಂದೆ ಉಳಿದ ಕೆಲಸ ಇಲ್ಲವದಕೆ ಎಡೆ ತಡೆ;
ಇಳೆಯ ತುಂಬು ವಿಶ್ವ ವ್ಯಾಪಿ ನಿಲ್ಲಜೇಡ ನಡೆ ನಡೆ.


ಜಗದ ಬೆಳಕಿಗುಗಮ ನಿನ್ನ ಹೊಳೆವ ಕಣ್ಣ ಕಾಂತಿಯು
ಗಂಧವೀನ ಗಂಧವತಿಯು ನಿನ್ನ ಮ್ಬೆ ಸುಗಂಧವು
ಉಸುರಿನೆಳೆತ ಎದೆಯ ಕುಣಿತ ಕಡಲಿನೇರು ಇಳಿತವು,
ಇದಕೆ ತಾಳ ಹಾಕುತಿಹವು ಚಿಕ್ಕೆ ಬೆರಗುಗೊಂಡವು.
ನೀನು ಸಾಗೆ ಅಮರನಾಗಿ ಹತ್ತು ದಿಕ್ಕು ತುಂಬುತ
ಗಾನ ಬಂತು ಗಗನದಿಂದ ನಿನ್ನ ಬೆನ್ನ ಹತ್ತುತ
ತುಂಬಿ ತುಳುಕಿತಿಳೆಯ ಕಲಶ ಕಾದಿಹ ಕದಲಾರತಿ
ಪ್ರಕೃತಿ ಪುರುಷಗೆತ್ತಿ ಹಿಡಿದ ಹೊನ್ನ ಮಂಗಲಾರತಿ


ದೇಹವಿದ್ದರೇನು ಜೀವ ನಿನ್ನನೆ ನೀ ಮರೆವೆಯಾ?
ನೀನು ಹೊತ್ತ ಪರಿಗಳನ್ನೆ ನೀನೆ ಅರಿಯದಿರುವೆಯಾ?
ಹುಟ್ಟಿನಲ್ಲೆ ಹುದುಗಿ ಸಾವು ದೇಹರೂಪ ತಾಳಿತು
ಸೃಷ್ಟಿಯಲ್ಲಿ ತಾನು ತೋರಿ ನಿನ್ನನು ಮರೆ ಮಾಡಿತು
ನಿನ್ನ ಜರೆದು ತಾನು ಮರೆದು ಇದಕೆ ಬಾಳು ಎಂದಿತು
ದಣಿದು ಕೊನೆಗೆ ಮಣ್ಣುಗೂಡೆ ದೇಹವಳಿದು ಹೋಯಿತು
ತನ್ನ ಅರಿವು ತನಗೆ ಬರದೆ ಇದ್ದು ಇಲ್ಲದಾಯಿತು
ಅಳಿದ ದೇಹದಿಂದ ಉಳಿದ ನಿನಗೆ ವಿಜಯವಾಯಿತು
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...