Home / ಕಥೆ / ಕಿರು ಕಥೆ / ಧ್ಯಾನಾನುಭವ

ಧ್ಯಾನಾನುಭವ

ಒಮ್ಮೆ ಗುರುಗಳು ತನ್ನ ಪಟ್ಟ ಶಿಷ್ಯನನ್ನು ಕರೆದು ಹೀಗೆ ಹೇಳಿದರು. ಇಂದು ನೀನು ನಿನ್ನ ಉಸಿರನ್ನು ವೀಕ್ಷಿಸುತ್ತಾ ಧ್ಯಾನ ಮಾಡು. ನಿನ್ನ ಧ್ಯಾನದ ಅನುಭವವನ್ನು ನಂತರ ನನಗೆ ಬಂದು ಹೇಳು”-ಎಂದು ಹೇಳಿದರು.

ಶಿಷ್ಯ ಗುರುವಿನ ಅಣತಿಯ ಮೇರೆಗೆ ನಿಬಿಡವಾದ ವನಕ್ಕೆ ಹೋಗಿ ಒಂದು ವೃಕ್ಷದ ಕೆಳಗೆ ಧ್ಯಾನಕ್ಕೆ ಕುಳಿತುಕೊಂಡ. ಕಣ್ಣು ಮುಚ್ಚಿ, ಭುಜ, ಕತ್ತು, ಬೆನ್ನು ಒಂದು ನಿಲಿವಿನಲ್ಲಿಟ್ಟು, ಉಸಿರನ್ನು ವೀಕ್ಷಿಸುತ್ತಾ ಧ್ಯಾನ ಆರಂಭಿಸಿದ.

ಶ್ಯಾಸವನ್ನು ರೇಚಕದಿಂದ ಪೂರಕ, ಪೂರಕದಿಂದ ಕುಂಭಕದಲ್ಲಿ ಶ್ವಾಸವನ್ನು ವೀಕ್ಷಿಸುತ್ತಾ ಕಾಲದ ಅನಂತತೆಯಲ್ಲಿ ಲೀನವಾದ. ಅವನ ಉಸಿರು ಮಂದ ಪವನದೊಂದಿಗೆ ಒಂದಾಯಿತು. ಹಾಡುವ ಕೋಗಿಲೆಯ ನಾದದಲ್ಲಿ ತೇಲಾಡಿತು. ಎಲೆಯ ಮರ್ಮರದಲ್ಲಿ ಒಂದಾಯಿತು. ವೃಕ್ಷದ ಬೇರಲ್ಲಿ ಬೇರೂರಿತು. ಹೂಗಂಧವಾಯಿತು. ಹಣ್ಣಿನ ಪಕ್ವತೆ ಪಡೆಯಿತು. ವನವೆಲ್ಲಾ ಸುತ್ತಾಡಿತು. ಉಸಿರಿಗೆ ದೇಹದ ಅಸ್ತಿತ್ವ, ದೂರವಾಯಿತು. ಮನದ ಹಿಡಿತದಿಂದ ಉಸಿರು ವಿಶ್ವಗಾಮಿಯಾಯಿತು. ಸೀಮೆಗಳ ದಾಟಿತು. ವಿಶ್ವದ ಎಲ್ಲಾ ಚೇತನಕ್ಕೆ ಹೊಂದಿಕೊಂಡಿತು. ಬೆಸೆದುಕೊಂಡಿತು. ಆಗಸದ ನೀಲಿಯಲ್ಲಿ ಬೆರೆತಿತು. ಕಿರಣದಲ್ಲಿ ಮುಳುಗಿತು. ಬೆಳದಿಂಗಳಲ್ಲಿ ಆಡಿತು. ನಕ್ಷತ್ರದೊಡನೆ ನರ್ತಿಸಿತು. ಸಾಗರದ ಅನಂತತೆಯಲ್ಲಿ ತೇಲಾಡಿತು. ನದಿಯೊಡನೆ ಹರಿಯಿತು.

ಜಲಪಾತದಲ್ಲಿ ಲಾಸ್ಯವಾಡಿತು. ಮಳೆಯಲ್ಲಿ ಮಿಂದಿತು. ಮಿಂಚಲ್ಲಿ ಬೆಳಗಿತು. ನಾನು ಎಂಬುದಿಲ್ಲದೆ ಉಸಿರು ತಾನೇತಾನಾಗಿ ಮೆಲ್ಲ ಮೆಲ್ಲನೆ ವಿಶ್ವವ್ಯಾಪಿಯಾಯಿತು. ಪ್ರಾಣ ವಿಶ್ವಪ್ರಾಂಗಣವಾಯಿತು. ‘ನಾ’ನಿಲ್ಲದ ಆವಿಶ್ವ ಐಕ್ಯದಲ್ಲಿ ಉಸಿರದೆಷ್ಟು ಜೀವಂತ. ಉಸಿರು ಅದೆಷ್ಟು ಹಸಿರು ವಸಂತ. ಉಸಿರು ಅದೆಷ್ಟು ಅನಂತ ಭವ್ಯತೆಯ ಭಗವಂತ! ವಿಶ್ವಚೇತನದಲ್ಲಿ ಅನುಭಾವಿ ಶಿಷ್ಯ ಮಾರನೆ ದಿನ ಗುರುವಿನಲ್ಲಿ ಬಂದ.

“ಪ್ರಿಯ ಶಿಷ್ಯ! ನಿನ್ನ ಧ್ಯಾನದ ಅನುಭವವೇನು?”ಎಂದು ಗುರುಗಳು ಕೇಳಿದರು.

“ಧ್ಯಾನದಲ್ಲಿ ನಾನಿರಲಿಲ್ಲ. ನಾನೇನು ಹೇಳಬಲ್ಲೆ? ಉಸಿರು ಮಾತ್ರ ಇದ್ದಾಗ ನಾ ಮೌನ ಚೇತನವಾಗಿದ್ದೆ.” ಎಂದ ಶಿಷ್ಯ.

“ಅಹುದು ಶಿಷ್ಯ! ನಿನ್ನ ಮೌನ ಸ್ಪಂದನ ನಿನ್ನ ಅನುಭವ ಸಾರುತ್ತಿದೆ” ಎಂದರು ಗುರುಗಳು.
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...