Home / ಕಥೆ / ಕಿರು ಕಥೆ / ಧ್ಯಾನಾನುಭವ

ಧ್ಯಾನಾನುಭವ

ಒಮ್ಮೆ ಗುರುಗಳು ತನ್ನ ಪಟ್ಟ ಶಿಷ್ಯನನ್ನು ಕರೆದು ಹೀಗೆ ಹೇಳಿದರು. ಇಂದು ನೀನು ನಿನ್ನ ಉಸಿರನ್ನು ವೀಕ್ಷಿಸುತ್ತಾ ಧ್ಯಾನ ಮಾಡು. ನಿನ್ನ ಧ್ಯಾನದ ಅನುಭವವನ್ನು ನಂತರ ನನಗೆ ಬಂದು ಹೇಳು”-ಎಂದು ಹೇಳಿದರು.

ಶಿಷ್ಯ ಗುರುವಿನ ಅಣತಿಯ ಮೇರೆಗೆ ನಿಬಿಡವಾದ ವನಕ್ಕೆ ಹೋಗಿ ಒಂದು ವೃಕ್ಷದ ಕೆಳಗೆ ಧ್ಯಾನಕ್ಕೆ ಕುಳಿತುಕೊಂಡ. ಕಣ್ಣು ಮುಚ್ಚಿ, ಭುಜ, ಕತ್ತು, ಬೆನ್ನು ಒಂದು ನಿಲಿವಿನಲ್ಲಿಟ್ಟು, ಉಸಿರನ್ನು ವೀಕ್ಷಿಸುತ್ತಾ ಧ್ಯಾನ ಆರಂಭಿಸಿದ.

ಶ್ಯಾಸವನ್ನು ರೇಚಕದಿಂದ ಪೂರಕ, ಪೂರಕದಿಂದ ಕುಂಭಕದಲ್ಲಿ ಶ್ವಾಸವನ್ನು ವೀಕ್ಷಿಸುತ್ತಾ ಕಾಲದ ಅನಂತತೆಯಲ್ಲಿ ಲೀನವಾದ. ಅವನ ಉಸಿರು ಮಂದ ಪವನದೊಂದಿಗೆ ಒಂದಾಯಿತು. ಹಾಡುವ ಕೋಗಿಲೆಯ ನಾದದಲ್ಲಿ ತೇಲಾಡಿತು. ಎಲೆಯ ಮರ್ಮರದಲ್ಲಿ ಒಂದಾಯಿತು. ವೃಕ್ಷದ ಬೇರಲ್ಲಿ ಬೇರೂರಿತು. ಹೂಗಂಧವಾಯಿತು. ಹಣ್ಣಿನ ಪಕ್ವತೆ ಪಡೆಯಿತು. ವನವೆಲ್ಲಾ ಸುತ್ತಾಡಿತು. ಉಸಿರಿಗೆ ದೇಹದ ಅಸ್ತಿತ್ವ, ದೂರವಾಯಿತು. ಮನದ ಹಿಡಿತದಿಂದ ಉಸಿರು ವಿಶ್ವಗಾಮಿಯಾಯಿತು. ಸೀಮೆಗಳ ದಾಟಿತು. ವಿಶ್ವದ ಎಲ್ಲಾ ಚೇತನಕ್ಕೆ ಹೊಂದಿಕೊಂಡಿತು. ಬೆಸೆದುಕೊಂಡಿತು. ಆಗಸದ ನೀಲಿಯಲ್ಲಿ ಬೆರೆತಿತು. ಕಿರಣದಲ್ಲಿ ಮುಳುಗಿತು. ಬೆಳದಿಂಗಳಲ್ಲಿ ಆಡಿತು. ನಕ್ಷತ್ರದೊಡನೆ ನರ್ತಿಸಿತು. ಸಾಗರದ ಅನಂತತೆಯಲ್ಲಿ ತೇಲಾಡಿತು. ನದಿಯೊಡನೆ ಹರಿಯಿತು.

ಜಲಪಾತದಲ್ಲಿ ಲಾಸ್ಯವಾಡಿತು. ಮಳೆಯಲ್ಲಿ ಮಿಂದಿತು. ಮಿಂಚಲ್ಲಿ ಬೆಳಗಿತು. ನಾನು ಎಂಬುದಿಲ್ಲದೆ ಉಸಿರು ತಾನೇತಾನಾಗಿ ಮೆಲ್ಲ ಮೆಲ್ಲನೆ ವಿಶ್ವವ್ಯಾಪಿಯಾಯಿತು. ಪ್ರಾಣ ವಿಶ್ವಪ್ರಾಂಗಣವಾಯಿತು. ‘ನಾ’ನಿಲ್ಲದ ಆವಿಶ್ವ ಐಕ್ಯದಲ್ಲಿ ಉಸಿರದೆಷ್ಟು ಜೀವಂತ. ಉಸಿರು ಅದೆಷ್ಟು ಹಸಿರು ವಸಂತ. ಉಸಿರು ಅದೆಷ್ಟು ಅನಂತ ಭವ್ಯತೆಯ ಭಗವಂತ! ವಿಶ್ವಚೇತನದಲ್ಲಿ ಅನುಭಾವಿ ಶಿಷ್ಯ ಮಾರನೆ ದಿನ ಗುರುವಿನಲ್ಲಿ ಬಂದ.

“ಪ್ರಿಯ ಶಿಷ್ಯ! ನಿನ್ನ ಧ್ಯಾನದ ಅನುಭವವೇನು?”ಎಂದು ಗುರುಗಳು ಕೇಳಿದರು.

“ಧ್ಯಾನದಲ್ಲಿ ನಾನಿರಲಿಲ್ಲ. ನಾನೇನು ಹೇಳಬಲ್ಲೆ? ಉಸಿರು ಮಾತ್ರ ಇದ್ದಾಗ ನಾ ಮೌನ ಚೇತನವಾಗಿದ್ದೆ.” ಎಂದ ಶಿಷ್ಯ.

“ಅಹುದು ಶಿಷ್ಯ! ನಿನ್ನ ಮೌನ ಸ್ಪಂದನ ನಿನ್ನ ಅನುಭವ ಸಾರುತ್ತಿದೆ” ಎಂದರು ಗುರುಗಳು.
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...