Home / ಕವನ / ಕವಿತೆ / ಕಡಲಿನ ತಡಿಯಲ್ಲಿ

ಕಡಲಿನ ತಡಿಯಲ್ಲಿ

ಪ್ರಕೃತಿಯಾ ಮಡಿಲಿನಲಿ ಕಡಲಿನೀ ತಡಿಯಲ್ಲಿ
ಎಲ್ಲ ಇದೆ! ಮನಕಿಂದು ಶಾಂತಿಯೊಂದಿಲ್ಲ ॥ ಪಲ್ಲವಿ ॥

ತುಂಬು ಚಂದಿರನು ಬಹನೆನುತ ಸಾರಿಸಿದಂತೆ
ಗಗನದಂಗಣವಿಂದು ಅತಿಶುಭ್ರ ನೀಲ!
ಮುಗಿಲುಕಡಲುಗಳೊಳಗೆ ಬಿಂಬ ಪ್ರತಿಬಿಂಬಗಳು
ಆವುದೋ! ಒಡೆಯಲಿಕಭೇದ್ಯವೀ ಜಾಲ!

ಕಾದು ನಸು ಬೆಚ್ಚಗಿಹ ಬಿಳಿಮರಳ ಹಾಸುಗೆಯು!
ತೆರೆಗಳೆದೆ ಮೇಲೆ ನಡೆದೈತರುವ ಪವನ!
ಮೌನಕೇ ಕಚಕುಳಿಯನಿಡುತಿರುವ ಕಡಲ ಮೊರೆ!-
ಅಕಟಕಟ! ವ್ಯರ್ಥವೈ ಪ್ರಕೃತಿಯಾ ಕವನ!

ಜಡತನದ ಮುದ್ದೆಯಂತಿನಿತು ದಿನ ರೆಕ್ಕೆಗಳ
ಮುದುಡಿ ಕುಳಿತಿದ್ದ ಕಿದ್ದೊಲೆ ಚಿಮ್ಮಿ ನೆಗೆದು
ಭೂತದೊಳು ಹಾರಾಡಿ, ಭವಿತವ್ಯದೊಳಗಿಣುಕಿ
ಬಹ ಮನದ ಖಗ ಕುಣಿವುದಿಂದೇನ ಬಗೆದು?

ನಲ್ಮೆಯನೆ ಹಾರೈಸೆ ಮನವೆನಿತು ಬಳಲಿದರು
ನೈರಾಶ್ಯವೇ ಉಕ್ಕಿಬರುತಿಹುದಿದೇನು?-
ಮಧುವಿಗಾಶಿಸಿ ಗೂಡ ಕೆಣಕಲೇಳುತ ನುಗ್ಗಿ
ಮೊಗಕೆರಗಿ ಮುಳ್ಳುಗಳ ನೆಡುವವೊಲು ಜೇನು!

ಫಲಿಸದೊಲವಳಿದ ಕೆಳೆ, ಸೆಳೆದ ತನು, ತಳೆದ ಕೊರೆ-
ಮನದ ಕಳವಳದ ಕತವೇನು ಒಂದೆರಡೆ?
“ಸಾಲದಿದು” ಎಂಬೊಲು ನಿರಾಶೆಯೀ ನಿಟ್ಟುಸಿರು:
ಮುಂದೆ ಕಾದಿರುವುದೂ ರಸವಿರದ ಬರಡೆ!

ಕಂಗೊಳಿಪ ಚೆಲುವಿಹುದು, ತಂಗಾಳಿ ಬೀಸಿಹುದು
ರಂಗೇರುತಿರೆ ದಿಗಂಗನೆಯ ಕದಪೆಲ್ಲ
ತಿಂಗಳೈತಂದು ಮುಗಿಲಂಗಣಕೆ, ಸೊದೆ ಜಗದಿ
ತಂಗಿದರು ಮನಕಿಂದು ಶಾಂತಿಯೊಂದಿಲ್ಲ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...