Home / ಕವನ / ಕವಿತೆ / ಹೊಲೆಯನು

ಹೊಲೆಯನು

ಹೊಲೆಯ ಕೇರಿಯೊಳಿಲ್ಲ ಯೆಲ್ಲೆಡೆಯೊಳಿಹನು || ಪಲ್ಲ||

ನಿತ್ಯ ಪರಮಾತ್ಮನನ ಭಜಿಸದವ ಹೊಲೆಯ |
ಸತ್ಯನುಡಿಯನು ಮಾತನಾಡದವ ಹೊಲೆಯ ||
ನಿತ್ಯಮನುಜರ ಮೋಸಗೊಳಿಸುವಾತನೆ ಹೊಲೆಯ |
ಸತ್ಯವಂತರ ಜರಿಪ ತಾ ನಿತ್ಯ ಹೊಲೆಯ || ೧ ||

ಹಡೆದ ತಾಯ್ತಂದೆಗಳ ಸೇವೆ ತಪ್ಪಿಪ ಹೊಲೆಯ |
ಪೊರೆದ ಯಜಮಾನಂಗೆ ತಿರುಗಿ ಬೀಳ್ವನೆ ಹೊಲೆಯ ||
ಮೊರೆಹೊಕ್ಕವನನ್ನು ಹೊರದೂಡುವವ ಹೊಲೆಯ |
ಹರಿಯಸ್ಮರಣೆಯ ಮಾಡವದ ಶುದ್ಧ ಹೊಲೆಯ || ೨ ||

ಗುರುವಿನೋಳ್ನಯ ಭಕ್ತಿ ತೋರದಾತನೆ ಹೊಲೆಯ |
ಪರರ ಮನವನು ಮದದಿನೋಯಿಪನು ಹೊಲೆಯ ||
ಪರಧನವ ಪರಸತಿಯ ಬಯಪ ಮಾನವ ಹೊಲೆಯ |
ಪರರ ಧರ್ಮವಹಳಿಪ ತಾಪರಮ ಹೊಲೆಯ || ೩ ||

ಮದ್ಯ ಮಾಂಸಾದಿಗಳ ಸೇವಿಪಾತನೆ ಹೊಲೆಯ |
ಕದ್ದು ವ್ಯೆಸನವಮಾಡಿ ಶುದ್ಧಯ ಮೆರೆವವ ಹೊಲೆಯ ||
ಇದ್ದುದನು ಸತ್ಕಾರ್‍ಯದಲಿ ಸವಿಸದಾತನೆ ಹೊಲೆಯ |
ಶುದ್ಧ ತನುಮನ ಮಾತನರಿಯದವ ಹೊಲೆಯ || ೪ ||

ತನ್ನಂತೆ ಪರರನು ಬಗೆಯದಾತನೆ ಹೊಲೆಯ |
ತನ್ನನಾಡಿನ ಹಿತಕೆ ಮಡಿಯದವ ಹೊಲೆಯ ||
ತನ್ನ ನಾಡ್ಸಂಸ್ಕೃತಿಯ ಮರೆವಾತನತಿ ಹೊಲೆಯ |
ತನ್ನವರ ದೂರುವವ ತಾ ಶುದ್ಧ ಹೊಲೆಯ || ೫ ||

ತನ್ನ ತಾನರಿಯದಲೆ ಮೆರೆವ ಮೂರ್‍ಖನು ಹೊಲೆಯ |
ತನ್ನವರವೊಲು ಪರರಬಗೆಯದವ ಹೊಲೆಯ ||
ಹೆಣ್ಣು ಹೊನ್ಮಣ್ಣುಗಳ ನೆನೆದುಗೋಳಿಪ ಹೊಲೆಯ |
ಧನ್ಯಪರಮೋಕ್ಷವನು ಬಯಸದವ ಹೊಲೆಯ || ೬ ||

ನಾಡನಾಯ್ಕರ ಮಾತಮೀರಿ ನಡೆವವ ಹೊಲೆಯ |
ನಾಡಿನಾಡಳಿತದೊಳಗ ಬರುವವ ಹೊಲೆಯ ||
ನಾಡಕೀರ್ತಿಗೆ ಕುಂದನೊಡ್ಡುವಾತನೆ ಹೊಲೆಯ |
ನಾಡನಾಡಲಿ ದ್ವೇಷ ಪಸರಿಪನು ಹೊಲೆಯ || ೭ ||

ನಾಡ ತಂದೆಯ ತತ್ವತಾನಡಿಸದವ ಹೊಲೆಯ |
ನಾಡಪಿತ ಮಹಾತ್ಮ ಗಾಂಧಿ ಕೊಂದವ ಹೊಲೆಯ ||
ನಾಡಿನೊಳ ಹಿಂಸೆಸತ್ಯ ಪಸರಿಸಲಾಗ |
ಗಾಡಿಯಿಂ ಮೆರೆದಪುದು ಹೊಲೆತನವನಳಿದೂ || ೮ ||
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...