Home / ಕವನ / ಕವಿತೆ / ಕ್ರೀಟದೇವಿ

ಕ್ರೀಟದೇವಿ

ಮುನ್ನೀರ ಚೆಲುವನು ಮುಂಗಾಣಬಯಸಿದಲ್ಲಿ
ಭೂಮಧ್ಯ ಸಮುದ್ರವನು ನೋಡು ಕಿರುಹಗಲಿನಲ್ಲಿ,-
ಶರದೃತುವಿನಾರಂಭದಲ್ಲಿ!

ನೂರೊಂದು ಬುರುಗಿನ ಬಳ್ಳಿಯೊಡನೆ ತಿಳ್ಳಿಯಾಡುತಿದೆ ಗಾಳಿ,
ಕಳ್ಳಹೆಜ್ಜೆಯನಿಕ್ಕಿ ತೆರೆಗಳನು ತರಿದೊಡ್ಡುತಿದೆ
ಸಿಂಗರಿಸಿ ಮ೦ಜಿನಂತಹ ಸೀಕರವನೇಳು ಬಣ್ಣಗಳಿಂದ.
ದಿಕ್ಕಿಲ್ಲದೆ ಬಳ್ಳಿವಳ್ಳಿಯಾಗಿ ತೇಲುತಿದೆ ಬೆಳ್ಳಿಯ ಬುರುಗು!

ನೋಡುತೀ ಬೆಳ್ಳಿಯ ಕೆನೆಯನು-ಫೇನವನು-
ಹುಟ್ಟುಕಡೆಯಲೊಡೆದು ಬರುವ ವಿಮಲೋದಕವನು-
ನೋಡಿದಲ್ಲೆಲ್ಲ ಕೆನೆವಾಲಂತೆ ಥಳಥಳಿಸುವ ಸಮುದ್ರವನು,-
ನೆನೆಯುವೆನು ಹಿರಿಯರೊರೆದೊಂದು ಮಾತ:
ಕ್ಷೀರಸಾಗರವದು ಕನಸಲ್ಲ! ಕಣ್ಣಿನ ಬದುಕು!
ಸೂರ್ಯನಾರಾಯಣನ ಪದತಲದಿ ಪವಡಿಸಿಹ ಕ್ಷೀರಸಾಗರವ ಕಾಣು!

ಈ ಹಾಲ್ಗಡಲ ಹೃದಯ ಕಮಲವು ಬಿರಿಯೆ ಹಿಂದೊಮ್ಮೆ
ಮೆಲ್ಲನದರೊಳಗಿಂದ ಜನಿಸಿದೆ ಮಾಲಕುವಿುಯಂತೆ:
ವರಿಸಿದೆ ದೇವನ, ಹರಿಸಿದೆ ನಿನ್ನಣುಗರನು: ಓ ಕ್ರೀಟದೇವಿ!
ನಿನ್ನರಿಗಳಳಿದರೆಲೆ ಕ್ರಿಮಿಕೀಟಕಗಳಂತೆ!

ಹಬ್ಬಿತು ನಿನ್ನ ಕೀರ್ತಿ ಸಪ್ತಸಮುದ್ರಗಳ ದಾಟಿ;
ಉಳಿದ ನೆಲದಣುಗರು ನಿದ್ದೆ ತಿಳಿದೇಳುವ ಮುನ್ನ
ಕಟ್ಟಿದರು ನಿನ್ನ ಕುವರರು ಕೊತ್ತಳದ ಕೋಟೆಗಳನು,-
ಜನರ ಕಟ್ಟುಪಾಡನು, ಸುಖವನು, ಶಾಂತಿಯನು,-
ಆಳಿದರು ನೂರು ಪಟ್ಟಣಗಳನು, ಬಾಳಿದರು ವೈಭವದಿ,-
ಹೋಮರನು ಒಪ್ಪುವಂತೆ!

ಇ೦ದಿಗೋ! ಆವರಿಸಿಹುದು ಹಿಮವು ನಿನ್ನ ಪರ್ವತಾವಳಿಗಳನ್ನು:
ಮಣ್ಣುಗೂಡಿಹುದಿಂದು ಗಳಿಸಿದ ಘನೈಶ್ವರ್ಯವೆಲ್ಲ:
ನೆಟ್ಟಿಹರು ಬೆಳಕು-ನಿಲ್ಗಂಬವನೊಂದ ನಿನ್ನ ತಲೆಯ ಮೇಲೆ,
ಮರೆಯಾಗದಿರಲೆಂದು ಹಿಂದೆ ನೀನೂರಿದಾ ನೆನಹು.
ಸಾಮ್ರಾಜ್ಯ ಮದದಿ ನಿನ್ನ ಲೆಕ್ಕಿಸದೆ ಮುಂದೆ ಸಾಗಿರುವವರ
ಸೊಕ್ಕಿಳಿಯಬಹುದೆಂದು ಮಂಜುದುಟಿಯ ಮುಗುಳ್ನಗೆಯಿಂದ ಸೂಚಿಸಿ
ಕರಾಳ ಕಾಲದುಶ್ಶಾಸನನ ತೋಳ್‌ ತಕ್ಕೆಗೆ ಸಿಲುಕಿ ಬಣ್ಣಗುಂದಿ
ಬಿಳುಪೇರಿ ನಿಲ್ಲಲಾರದೆ ನಿಂತಿರುವೆ ಮರೆಮಾಚಿ ನಾಚಿ ಓ! ಕ್ರೀಟದೇವಿ!
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...