Home / ಕವನ / ಕವಿತೆ / ವಿತರ್ಕಿ

ವಿತರ್ಕಿ

ಓ ಟರಕ-ಹರಕ
ಮನೆ ಮುರಕ.
ಜಿದ್ದು
ಹದ್ದನೊಪ್ಪದ ಹದ್ದು!
ಇತಿಯ ಮಿತಿ ಮೀರಿದ್ದು.
ಹೆಣದ ಊಟ.
ಕಾಟ ಏರಾಟ, ಮಾಟ
ದಿಗಿಲು-ಭುಗಿಲು
ಸೇರುವದು ವಿಷಕಾರುವದು
ಕಾರಿದುದನೇ ನೆಕ್ಕಿ
ಬಿಕ್ಕಿ ಅಳುವದು
ಕರುಣೆ-ದಯೆ-ಧರ್ಮ-
ಇಲ್ಲವಲಾ ಎಂದು ಮೊರೆಯುವದು!
ಅಜ್ಞಾನಹಂಕಾರ ತೆಕ್ಕಿ-ಮುಕ್ಕಿ
ಬಾಳೆಲ್ಲ ಬಡಿದಾಟ.
ಮರಣ ಮುಕ್ತಿ.
ನಿನ್ನೆ-ಇಂದು-ನಾಳೆ
ಒಂದೆ ಸಿದ್ಧಿ.
ಸ್ಥಲ ಕಾಲ ಪಲ್ಲಟಸಿ
ಹೆಸರ ತಿದ್ದಿ.
ವರ್ತಮಾನವು ಎಂದು ಭೂತ ಭೌತದ ಸುದ್ದಿ
ಶೂನ್ಯಾಂತ-ಸಿದ್ಧಾಂತ-ವೇದಾಂತ
ಕೊರಳ ಗುದ್ದಿ.
ಅದು-ಅಭಾವ.
‘ನಮಗೆಲ್ಲರಿಗು ಒಬ್ಬನೇ ತಂದೆ-‘ ಅವನೇ ದೇವರೆಂದೆ!
ಅಣ್ಣ ತಮ್ಮರ ಬದುಕಿಗಾಗಿ ಕೊಂದೆ.
ನ್ಯಾಯ ಹೂಡಿಯೆ ಮುಂದೆ ಅನ್ಯಾಯ ತಂದೆ
ಅವರದಿವರದು ತಂದು-ನಾನೆ ತಿಂದೆ
ಹಿಂದೆ ಇಲ್ಲದ ಟರಕಗೇನು ಮುಂದೆ?
ಆ ಸಮಾಜು ಈ ಸಮಾಜು
ಕಡಿದಾಡಿ ಬಡಿದಾಡಿ ಹೊಡಿ ಸಲಾಮು.
ಆಗು ಬಾಜೂ
ಗಾಯಕ್ಕಪಾಯಕ್ಕೆ ಇದೆ ಮಲಾಮು.
ತಲೆ ಕೆಡಿಸಿಕೊಳ್ಳದಿರು,
ತಲೆಯ ಹಾಕಿ.
ಅಲ್ಲಿ ಇಲ್ಲ ಬಾಕಿ
ಹುಚ್ಚಲಾ! ಬಿಚ್ಚಲಾ
ಎದೆ ಕವಡುಗಂಟು
ಜೀವ ಜೀವಕ್ಕುಂಟು
ಬಾಳ-ನಂಟು.
*****

Tagged:

Leave a Reply

Your email address will not be published. Required fields are marked *

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...