Home / ಕವನ / ಕವಿತೆ / ಹೊತ್ತು ಮುಳುಗಿದ ನಂತರ….

ಹೊತ್ತು ಮುಳುಗಿದ ನಂತರ….

ಹೊತ್ತು ಮುಳುಗಿತು ಕತ್ತಲಾಯಿತು
ಚಿತ್ತ ಬಾಗಿಲಿಗೋಡಿತು;
ಒಂದೆ ದಿನದಲಿ ಬರುವೆನೆಂದರು
ಮೂರು ದಿನ ಕಳೆದಾಯಿತು.
ಎದೆಯ ಹಂಬಲ ತುಂಬಿ ನಿಂತಿದೆ
ನಿಮಿಷ ನಿಮಿಷವನೆಣಿಸಿದೆ
ಕರುಳು ಕರುಳಿಗು ಶಾಂತಿ ಹೇಳಿದೆ
ಜೀವ ಕಳವಳಗೊಂಡಿದೆ
ಅವರ ಪ್ರೀತಿಯ ಹೂವು ಹೆರಳಲಿ
ಮಧುರ ಸೌರಭ ಸೂಸಿದೆ
ಇಂದು ಬರವಿಗೆ ತಾನು ಕೂಡಾ
ಬಾಡಿ ಹೋಗುವೆನೆಂದಿದೆ.
ಮೊದಲ ಇರುಳಲಿ ಬೆರಳು ಬರಳಲಿ
ಕೊರಳು ಕೊರಳಲಿ ಸೇರಿಸಿ
ಕುರುಳು ಹೊರಳಿಸಿ ತೋಳ ತಳುಕಿಸಿ
ದೇಹ ದೇಹದಿ ಕರಗಿಸಿ
ಜೀವ ಕಣ ಕಣದಲ್ಲಿ ಸ್ವರ್ಗದ
ಸುಖದ ಹೊಳೆಯನು ಹರಿಯಿಸಿ
ಹಾಲು ಹಣ್ಣಿನ ಹೂವು ಜೇನಿನ
ಸಾಮರಸ್ಯದಿ ಬೆರೆಯಿಸಿ
ನನ್ನ ಬಾಳಿನ ಪೂರ್ಣ ಚಂದ್ರಮ
ಬೆಳಗಿ ಬಂದಿಹ ಸಂಭ್ರಮ
ಬೇಡಿ ಬಯಸಿದ ಬಯಕೆ ಕೂಡಿತು
ಹರಿದು ಹೋಯಿತು ವಿಭ್ರಮ.
ಬೆಳಕು ಬೆಳಕಿಗೆ ಮುತ್ತು ನೀಡಿತು
ಜೀವ ಹೊಸ ಹೊಸದಾಯಿತು
ಹೊಳೆವ ಲೀಲಾಲೋಲ ಕಣ್ಣಲಿ
ನನ್ನ ಮುಖವೂ ಅರಳಿತು.
ಮಾತು ಮಾತಿಗೆ ಎನಿತು ಹೊಲಿಕೆ
ಕಡಲ ಒಡಲಿನ ರತ್ನಕೆ
ಸಂಜೆ ಸಮಯದಿ ಇಣಿಕಿ ಮಿಣುಕುವ
ಮುಗಿಲಿನಕ್ಷಿಗೆ-ಚಿಕ್ಕೆಗೆ
ಗಂಗೆ ಗೌರಿಯೊ ತುಂಗ ಭದ್ರೆಯೊ
ಸರ್ವಮಂಗಳೆ ಪೂರ್ಣಿಮಾ;
ಮೂಡಣದ ಉಷೆ ಬಂದು ಕುಣಿವಳೊ
ಕಾವ್ಯ ಕನ್ನಿಕೆ ಕಲ್ಪನಾ.
ಅಂದಿಗೂ ಮೊದಲಾಗಿ ಇಂದಿಗು
ಏಸು ದಿನಗಳ ನೆನೆಯಲಿ
ಕನಸಿನಲಿ ಕಂಡಂತೆ ಆಗಿದೆ
ಬಂದು ರಕ್ಷೆಯ ನೀಡಲಿ
ತಂಗಿ ಇಂದಿರೆ ತಮ್ಮ ಮೋಹನ
ಹೊಸತಿಲದ ಬಳಿ ಬಂದು ನಿಲ್ಲಲೆ
ಮರೆತು ನಿಂದಿರೆ ಮರೆಯಲಿ
ಬರುವ ದಾರಿಯ ಕಾಯಲೆ?
ಇರುಳು ಮರಳಿತು ಮತ್ತೆ ಹೊರಳಿತು
ಆದರೂನೂ ವಿಫಲವೆ!
ಹಗಲು ಬಂದಿತು ಮತ್ತೆ ಸಂದಿತು
ಬಾರದಿರುವರೆ ದೈವವೆ!
ಹತ್ತು ಹೊಡೆಯಿತು ಚಿತ್ತ ಕದಡಿತು
ಯಾವ ಆಶೆಯ ಹಿಡಿಯಲಿ
ಸ್ವರ್ಗವೂ ಹಾಳಾಗಿ ಹೋಗಲಿ
ಬಂದು ಎದುರಿಗೆ ನಿಲ್ಲಲಿ!
*****
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...