ಅವ್ವ

ಅವ್ವ ನಿನ್ನ ಮಮತೆಯ
ತೊಳ್ ತೆಕ್ಕೆಯಲ್ಲಿ ಹುಟ್ಟಿ
ಬೆಳೆದವರು ಬೆಳೆಯುತ್ತಾ
ಎತ್ತರದುತ್ತರಕ್ಕೆ ಬೆಳೆದರು
ನೀ ಉಣಿಸಿದ ಮೊಲೆ ಹಾಲ ಕುಡಿದು
ಮತ್ತೇರಿದವರು.
ಹಸಿರ ಹೊನ್ನ ಹೊತ್ತಿಗೆಯಲ್ಲಿ
ಪವಡಿಸಿ ತಮ್ಮ ಸ್ವಾರ್ಥಕ್ಕಾಗಿ
ಕನಸ ಕಾಣ ತೊಡಗಿದವರು
ಮರೆತರು ನಿನ್ನ ಇರುವಿಕೆಯ
ನಿನ್ನತನದ ಅರಿವೆ ತೊಟ್ಟು
ನೆತ್ತರ ತಿಲಕ ಹಣೆಯಲ್ಲಿರಿಸಿ
ಧರ್ಮ ದಿಕ್ಷೆ ಕುದುರೆಯ ಏರಿದವರು
ದುರ್ಯೋದನಾ ದುಶ್ಯಾಸನಾದಿಗಳ
ಅಂಗಸಂಗ ಋಣಹೊತ್ತು
ಶಕುನಿಯ ಜಾಲಕ್ಕೆ ಸಿಲುಕಿ
ಕುರುಕ್ಷೇತ್ರವ ಕಾಣಗೈದವರು
ಇಲ್ಲಿ ಶ್ರೀ ಕೃಷ್ಣನಿಲ್ಲದ ಧರ್ಮಯುದ್ಧ
ಕೈಯಲ್ಲಿ ಹಿಡಿದ ವಿಜಯಪತಾಕೆ
ಉದಾರ ಮನಸ್ಸು
ಹಸಿವಿಗೆ ಕಾವ ಹೋಯ್ದ ಅಕ್ಷಯ ಪಾತ್ರೆ
ಅಕ್ಕ ತಂಗೀರಗೆಲ್ಲಿಯ ಶ್ರೀರಕ್ಷೆ
ಮತ್ತೆ ಮತ್ತೆ ದ್ಯೂತದ ಸಂಚು
ದಾಳಕ್ಕೆ ದಾಳ ಪಣಕ್ಕೆ ಇಟ್ಟು
ಹರಕೆಯ ಕುರಿಯ ಬಿಟ್ಟಂತವರಿಗೆ
ನಿನ್ನದೆಲ್ಲಿಯ ಚಿಂತೆ ಅವ್ವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂತದರ್‍ಶನ
Next post ಈರ ಯಾಕೆ ಹೋದ?

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…