Home / ಕವನ / ಕವಿತೆ / ಕಲಿಸಿದರು

ಕಲಿಸಿದರು

ರೆಕ್ಕೆ ಬಲಿಯುವ ಮೊದಲೇ ಕತ್ತರಿಸಿ ಉಗುರು ಕೊಯ್ದು
ಕೊಕ್ಕ ಬಂಡೆಗೆ ಕುಕ್ಕಿಸಿ ಮೊಂಡಾಗಿಸಿ ಹೀಗೆ
ಬೆಳೆಸಿ ಬಿಟ್ಟರು-ಬೆಳೆಯ ಬಿಟ್ಟರು
ಕಣ್ಣು ಕಟ್ಟಿ ಕಾರಡವಿಯಲ್ಲಟ್ಟಿ ಬಿಟ್ಟರು

ಹೂಮಾಂಸವನರಳಿಸಿಕೋ ಎಂದು ಹದ್ದುಗಳಿಗಿಟ್ಟರು
ಹುಲ್ಲಂತೆ ಬಾಗೆಂದು ಬೆನ್ನ ಬಿಲ್ಲಾಗಿಸಿದರು
ಮಲ್ಲಿಗೆಯಾಗೆಂದು ಕಲ್ಲ ಕೆಳಗಪ್ಪಚ್ಚಿಗಿಕ್ಕಿದರು
ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯೊಡ್ಡೆಂದು
ಮೀಸೆ ಹೊತ್ತ ಮುಖಕ್ಕೆ ಮಸಿ ಹಚ್ಚಿದರು
ವಿಷವಿಕ್ಕಿದವಗೆ ಷಡ್ರಸವನಿಕ್ಕೆಂದು ಮನೆಹಾಳತನವ ಬೋಧಿಸಿದರು
ಒದೆಸಿಕೊಂಡರೂ ಅಳುನುಂಗಿ ನಗು ಎಂದು
ಅಳುಬುರುಕುತನವ ಕಲಿಸಿದರು

ಉಗುಳಿದರೆ ಒರೆಸಿಕೊಂಡು ಹೊಗಳೆಂದು
ಬೊಗಳುಸನ್ನಿತನವ ಕಲಿಸಿದರು
ಕೋಡಿದ್ದರೂ ತಿವಿಯದೆ ತಲೆಹಾಕುವುದ ಕಲಿಸಿದರು
ಗಂಡ ಬೇರನ್ನು ಕೊಟ್ಟು ಕಸಿ ಮಾಡಿ
ನರಹಿಚುಕಿ ಜೀವಧಾತು ಹರಿಯದೆ ಬರಲಾಗಿಸಿ
ಕೆಂಡ ಕೆರಳದಂತೆ ತಣ್ಣೀರು ಹಾಕಿ
ಷಂಡತನವ ಕಲಿಸಿದರು ನಮ್ಮವರು

ತಲೆ ಪಂಜರಪಕ್ಷಿಗೆ ಗಿಳಿಯೋದಿಸಿ
ಮೂಗುಹಿಡಿಸಿ ಜಪ ಮಾಡ ಕಲಿಸಿದರು
ತೀರ್ಥಕುಡಿಸಿ ಮಬ್ಬೇರಿಸಿ ಗೂಡಿನಲ್ಲಿಹಪರವೆಂದು ಕೂಡಿಹಾಕಿ
ಬಯಲಾಗಸದ ತಿಳಿಹೊಳೆಯ ಗಿರಿನೀರ ತನಿವಣ್ಣ ರಸಗಳಿಗೆಲ್ಲ
ಎರವಾಗಿಸಿ ಬಂದೋಬಸ್ತಾಗಿ ಬಂಧಿಸಿದರೋ ನಾಗರಿಕ ನೆರಳಲ್ಲಿ
ಕತ್ತಿಕೋಲು ಕುಣಿದಾಡುವ ಗೊಂಡಾರಣ್ಯದಲ್ಲಿ
ಮುಳ್ಳುಗಳೆದ್ದೆದ್ದು ಕಣ್ಣು ಚುಚ್ಚುವಲ್ಲಿ
ಕೋರೆ ಹಲ್ಲುಗಳು ಮಸೆಯುವಲ್ಲಿ ಕೆನ್ನಾಲಿಗೆ ಚಾಚಿದಲ್ಲಿ
ಕಲ್ಲು ಗುಂಡು ಸದಾ ಸುರಿಯುವಲ್ಲಿ
ಬೋಳಾಗಿಸಿ ಬಿಳಿಚು ಮಲ್ಲಿಗೆಯಾಗಿಸಿ
ಬಾಳಾ ಬಾಳೆಂದು ಕಲಿಸಿಬಿಟ್ಟರು ನಮ್ಮವರು
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...