Home / ಲೇಖನ / ಇತರೆ / ಪುರುಷೋತ್ತಮ’ ಯಶವಂತ ಚಿತ್ತಾಲ

ಪುರುಷೋತ್ತಮ’ ಯಶವಂತ ಚಿತ್ತಾಲ

ಪುರುಷೋತ್ತಮ ಯಶವಂತ ಚಿತ್ತಾಲರು ಇನ್ನಿಲ್ಲ. ಇಂದಿನ ಪ್ರಜಾವಣಿಯ ಮುಖಪುಟದಲ್ಲಿ ಅವರ ನಿರ್ಗಮನದ ಸುದ್ದಿಯನ್ನು ಓದಿ ಮನಸ್ಸು ನೆನಪಿನ ಸುರುಳಿ ಬಿಚ್ಚಿ ೨೦೦೬ನೆ ಇಸವಿಯ ಡಿಸೆಂಬರ್ ಮಾಹೆಯ ಒಂದು ಇಳಿಸಂಜೆಯ ಮೆಲುಕು ಹಾಕಲಾರಂಭಿಸಿತು. ಅಂದು ನಾನು ಇಂದು ಇನ್ನಿಲ್ಲವಾಗಿರುವ ಚಿತ್ತಾಲರನ್ನು ಅವರ ಬಾಂದ್ರಾ ನಿವಾಸದಲ್ಲಿ ಭೇಟಿಯಾಗಿದ್ದೆ. ಅವರ ಪ್ರೀತಿಯ ಸಮುದ್ರ ನೋಟವನ್ನು ಸವಿಯುತ್ತ ಅವರೆದಿರಾಗಿ ಕುರ್ಚಿಯಲ್ಲಿ ಕುಳಿತು ಸಾಹಿತ್ಯ, ತಾಂತ್ರಜ್ಞಾನದ ಬಗ್ಗೆ ಅವರ ವಿಚಾರಗಳನ್ನು ಕೇಳಿದ್ದೆ. ಅಂದು ಅವರು ಹೇಳಿದ ಒಂದು ಮಾತು ನನ್ನನ್ನು ಬಹಳವಾಗಿ ಪ್ರಭಾವಿಸಿತು. ದಕ್ಷಿಣ ಅಮೇರಿಕದ ಲೇಖಕನೊಬ್ಬ ಬರೆಯುವಾಗ/ಟೈಪಿಸುವಾಗ ತಪ್ಪಾದಾಗ ಅದು ಬರಿ ಕೈತಪ್ಪಲ್ಲ, ಮನಸ್ಸಿನ ಚಿಂತನೆಯಲ್ಲಿನ ತಪ್ಪು, ಎಂದು ಪರಿಭಾವಿಸಿ ಆ ಪುಟವನ್ನೇ ಹರಿದುಹಾಕಿ ಪುನಃ ಬರವಣಿಗೆಯನ್ನು ಪ್ರಾರಂಭಿಸುತ್ತಿದ್ದನು, ಆ ಬದ್ಧತೆ ನಮ್ಮ ಎಲ್ಲ ಚಿಂತನೆ, ಕೃತಿಯಲ್ಲಿರಬೇಕು ಎಂದಿದ್ದರು. ಅವರು ಅಂದು ನನ್ನಂತಹ ಕಿರಿಯನೊಂದಿಗೂ ತೋರಿದ ಮುಕ್ತ ಮನಸ್ಕತೆ, ಸೌಜನ್ಯವನ್ನು ನಾನೆಂದಿಗೂ ಮರೆಯಲಾರೆ. ಆತ್ಮದ ಕಲ್ಪನೆಯ ಬಗ್ಗೆ ಸಂಶಯಗಳನ್ನು ಹೊಂದಿರುವ ನಾನು ಚಿತ್ತಾಲರಂತಹ ಚೇತನ ನಾಡಿನೆಲ್ಲರನ್ನು ನೂರ್ಕಾಲ ಉದ್ದೀಪಿಸುತ್ತಿರಲಿ ಎಂದು ಹಾರೈಸ ಬಯಸುತ್ತೇನೆ.

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...