ಕೊಳಲು

ಹಿಡಿಯಿದನು, ಇದುವೆ ಆ ಕಥೆಯ ತಬ್ಬಲಿಗೊಳಲು.
ಗೆಳೆಯನಿದನಾಯ್ದು ತಂದನು ಬನದ ಬಿದಿರು ಮೆಳೆ-
ಯೆದುರು ಗಣೆಯಾಗಿರಲು, ಅದ ತಿದ್ದಿ ತೀಡಿ ಕೊಳೆ,-
ಒಳಗೆಲ್ಲ ಕಾಣಿಸಿತು ತುಂಬಿ ಬಂದಿಹ ತಿಳಲು.
ಅದನು ಕೊರೆಯುತ ಸವರಿ ಹನಿ ಹೆಜ್ಜೆಗಳನಿಡಲು
ಹರಿದಿತಿದರೊಳಗಿಂದ ಗಾನದಿನದನಿಯ ಹೊಳೆ.
ಕೊಳಲ ನುಡಿಸಲು ಗೆಳೆಯ ಮೆಲುಮೆಲನೆ ಪ್ರೀತಿಮೊಳೆ-
ವಂತೆಲ್ಲರೆದೆಯಾಳದಲಿ, ಹಿಗ್ಗಿ ತಿಡಿ ಹೊಳಲು!

ಒಂದೆರಡು ವರುಷಗಳ ಮೇಲೆ ಕುಗ್ಗಿತು ಕೊರಲು,
ಒಲಿಯದಾ ಚೆಲುವೆಯಲ್ಲೊಸೆದ ಸಖ ಕಣ್ಣಿನಲಿ
ಒಗುಮಿಗುವ ಶೋಕವನು ಮುರಲಿಯಲಿ ಹರಿಸಿದನು.
ಅವನ ದೇಹವದೀಗ ಬೂದಿಯಿರೆ ಮಣ್ಣಿನಲಿ-
ಕಾಣದಿದೆ ಈ ಕೊಳಲು ತನ್ನ ನುಡಿಸಿದ ಬೆರಳು.
ಮಂತ್ರಿಸಿದ ಕೊಳಲಯ್ಯ! ಎಚ್ಚರದಿ ನುಡಿಸಿದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ಪ್ರೇಮ ಯುಗ ಶಿಲ್ಪಿ
Next post ಕಾಡುತಾವ ನೆನಪುಗಳು – ೨೭

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…