ಸುಗ್ಗಿ ಪದಗಳು: ತುಂಡು ಪದಗಳು

(ಹೋಗತಿರಲೋ ಬಲಿಗಾರಣ್ಣಾ)

ಹೋಗತಿರಲೋ ಬಲಿಗಾರಣ್ಣಾ
ಹೋಗತರ ಬೇಲೆ ಮೇಲೆ
ಬಿಲ್ಲಿಗೆ ಮೂರ ಶಿನ್ನ || ೧ ||

ಚಂದ್ರ ನೋಡಿ ಚಾವಡಿ ನೀರ
ಮುದ್ದುರಾಮ ನನ್ನ ಮತ್ತುಗಾರ || ೨ ||

ಅತ್ತೆ ಮಾವ್ನ ಧರ್‍ಮದಿಂದಿ
ಹತ್ತು ಹೊನ್ನೊಂದ್ ಮೂಗತಿಯಾ || ೩ ||

ಬಾವಿಲ್ ಮೊಕ ನೋಡ್ಗಂಡು
ಅಲ್ಲೆ ಬಿದ್ದ ಮೂಗುತಿಯ
ಸತ್ತ ಗುರುವಿನ ಕೋಲೇ || ೪ ||

ಸೊಬಗುಣಿ ರಣದ
ಹತ್ತನ ಬೇಳೆ ಕಂಡ್ರು ಗುಬ್ಬಿಗೆ
ಸರುಣ ಸರುಣ ಸರುಣಂಬೊಸ್ವಾಮಿಗೆ
ಬೋಳಿ ದೇವರಿಗೆ ಸರುಣ ಬಾರೋ || ೫ ||

ಸರುಣ ಸರುಣ ಸರುಣಂಬ ಗುರುವಿಗೆ
ಗುರುವಿನ ಪಾದಕ್ಕೆ ಸರುಣೆಂಬರೋ || ೬ ||

ಮಾರುತಿ ಒಳಬೊಬ್ರು ದೇವರು
ಲೇರುತಿ ಒಳ ಬಾಗ್ಲ ಬೀರರು || ೭ ||

ಜುಟ್ಟೆ ಜುಟ್ಟಾಲ್ ಮೈ ಜೋಡಿನಂದಿ
ನಂದು ನಿಂದು ಹೊಯ್ಲ ಮೈ ಜೋಡಿನಂದಿ || ೮ ||

ಸತ್ಯವುಳ್ಳ ಜಟ್ಗು ದೇವ ಯತ್ತ ನೋಡಿಬಂದೆವು
ಯತ್ತಗೋಡಿ ಬಂದೆವು
ಯತ್ತಣ ದಾಸಫಲ ಸುಗ್ಗಿ ಕೋಲ್ ಬಂದವು || ೯ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲ್ಲಿ – ೧೫
Next post ರುಚಿಯಂಕೆ ತಪ್ಪಿದರೆ ಶೌಚದಂಕೆ ತಪ್ಪದೇ?

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…