Home / ಕವನ / ಕವಿತೆ / ಪರದೆಯ ಹಿಂದೆ

ಪರದೆಯ ಹಿಂದೆ

ದರ್‍ಗಾದ ಎರಡು ಘನ ಗಂಭೀರ
ಮೀನಾರುಗಳ ಮುಂದೆ ಸಾಲು ಸಾಲು ಮನೆಗಳು
ಬಾಗಿಲಿಗೆ ಕಟ್ಟಿದ ಗೋಣಿ ತಟ್ಟಿನ ಪರದೆಗಳು
ಬಣ್ಣಗಳಿಲ್ಲ ಚಿತ್ತಾರಗಳಿಲ್ಲ, ಭಣಗುಟ್ಟುವ
ಬದುಕನು ಸಾರಿ ಸಾರಿ ಹೇಳುತ್ತಿದ್ದವು.
ಹಬ್ಬ ಹುಣ್ಣಿಮೆ ಬಂದಾಗ ಒಳಬಾಗಿಲಿಗೆ
ಅಮ್ಮಿ ಕಟ್ಟುತ್ತಿದ್ದಳು ಕಸೂತಿ ಹಾಕಿದ ಚಿತ್ತಾರದ
ರಂಗುರಂಗಿನ ಬಾಗಿಲ ಪರದೆಗಳು.
ಅದಕ್ಕೆ ಇಳಿಬಿಟ್ಟ ಬಣ್ಣ ಬಣ್ಣದ ಕುಚ್ಚುಗಳು
ನಾನೂ ಕ್ರೋಶಾದಲಿ ಹೆಣೆಯುವಾಸೆ
ಬಣ್ಣ ಬಣ್ಣದ ದಾರಗಳ ಚಿತ್ತಾಕರ್‍ಷಕ ಪರದೆ
ನನಗೇನು ಗೊತ್ತಿತ್ತು ಮುಂದೊಂದು ದಿನ
ಈ ಪರದೆಯೇ ನನ್ನ ಮುಖಕ್ಕೆ
ಮರೆ ಮಾಡುವ ನಖಾಬ್ ಆಗುತ್ತದೆ ಎಂದು?

ಮೊದಲ ಬಾರಿ ಈ ಹಿಜಾಬು ಧರಿಸಿದಾಗ
ಶಕೆಯಿಂದ ಸಿಡಿಮಿಡಿಗೊಂಡು ತಲೆ ಸುತ್ತು ಬಂದು
ನನಗರಿವಿಲ್ಲದಂತೆಯೇ ಕಿತ್ತು ಬಿಸಾಕಿದ್ದೆ.
ಬುದ್ಧಿ ಹೇಳಿದ ಬಂಧು ಬಾಂಧವರು
ಇದು ನಮ್ಮ ಧರ್‍ಮದ ಪವಿತ್ರ ಉಡುಪು
ಬಿಡುವುದು ಅಲ್ಲಾಹನಿಗೆ ಸುತಾರಾಂ ಇಷ್ಟವಿಲ್ಲ.
ಮತ್ತೆ ಪರದೆಯ ಹಿಂದೆ ದೂಡಿದರು.
ಬುರ್‍ಖಾದ ಜಾಳಿಗೆ ನನ್ನ ಕಣ್ಣನ್ನು ಮುಚ್ಚಿದಾಗ
ಇಡೀ ಲೋಕವೇ ಕಪ್ಪಾಗಿ ಕಂಡಿತ್ತು.
ಸಾಕಿದ ಬೆಕ್ಕು, ನಾಯಿಗಳಿಗೆ ನೆರೆಹೊರೆಯವರಿಗೆ,
ಶಾಲೆಯ ಸೀತೆಗೂ ನಾನು ಅಪರಿಚಿತಳಾಗಿದ್ದೆ.
ಆಗ ಸಹಚರರೆಲ್ಲ ದೂರವಾದಂತೆ ಭಾಸವಾಗಿತ್ತು.
ನನ್ನ ಜಗತ್ತಿನಲಿ ಕತ್ತಲಾವರಿಸಿದಂತಾಗಿತ್ತು.
ಪರದೆ ನನ್ನ ಸುತ್ತಲೂ ಬೇಲಿ ತನ್ನಷ್ಟಕ್ಕೇ ನಿರ್‍ಮಿಸಿತ್ತು.

ರಕ್ಷಣೆಯ ಕ್ರೂರ ಪಹರೆಯ ಗೋಡೆ
ಬೇಸಿಗೆ ಬಿಸಿಲಿಗೆ ಬೆವರಿನ ತೊಪ್ಪೆ,
ಯಮಯಾತನೆಗೆ ಉಸಿರುಗಟ್ಟುವ ಹಿಂಸೆ.
ಪಹರೆ ಗೋಡೆಗಳ ಮಧ್ಯೆ ಚಹರೆ ಮುಸುಕಿನಲಿ
ಪರದೆ ಹೊದ್ದು ಮಾಂಸದ ಮುದ್ದೆಯಾಗಿದ್ದೆ.
ಜೀವಪೋಷಕ ಧಾತುವಿನ ಸತುವು ನಾನು
ಪೋಷಿಸಬಲ್ಲೆ ಲೋಕವನ್ನು ಸಾಯಿಸಲಾರೆ.
ಜೀವನದಿಯಾಗಿ ಹರಿದು ತಪ್ತ ಆತ್ಮಗಳಿಗೆ
ತಂಪನ್ನೆರೆದು ಅಮೃತ ಸಿಂಚನಗೈದಳು
ಶತಮಾನಗಳಿಂದ ಕಾದು ಕೆಂಪಾದ ಧರೆಗೆ
ಮಳೆಯ ಸಿಂಚನವಾಗಿ ತಣ್ಣಗಾಗಿಸಿದವಳು.
ನನಗೆ ಗೊತ್ತಿದೆ ಬದುಕುವುದು ಹೇಗೆಂದು
ನಿರ್‍ಬಂಧಗಳ ಸರಹದ್ದು ಮೀರುವುದು ಹೇಗೆಂದು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...