Home / ಲೇಖನ / ಇತರೆ / ದ್ವೀಪ ಆಯಿರಿ

ದ್ವೀಪ ಆಯಿರಿ

ಈ ನನ್ನ ಶೀರ್‍ಷಿಕೆ ಓದಿ ನೀವೆಲ್ಲ ದಂಗುಬಡಿದು ಹೋಗಿರಬಹುದು. ಹೌದು! ಪೋರ್‍ಚುಗಲ್‌ನ ರಿಯಲ್ ಮ್ಯಾಡ್ರಿಡ್ ಫುಟ್‌ಬಾಲ್‌ ಕ್ಲಬ್‌ನ ಪ್ರಸಿದ್ಧ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡ್ ತಮ್ಮ ಆಪ್ತ ಸಲಹೆಗಾರನಿಗೆ ಗ್ರೀಸ್ ದೇಶದ ವ್ಯಾಪ್ತಿಯಲ್ಲಿ ಬರುವ ಒಂದು ಪುಟ್ಟ ದ್ವೀಪವನ್ನೇ ಆಯಿರಿ ಮಾಡಿ ಅಲ್ಲಿದ್ದವರೆನ್ನೆಲ್ಲ ಬೆರಗುಗೊಳಿಸಿರುವರು.

ಈ ತನಕ ನಾವೆಲ್ಲ ಕೇಳಿರುವುದು ನೋಡಿರುವುದು, ಓದಿರುವುದು, ಮದುವೆಯಾದ ದಂಪತಿಗಳಿಗೆ ಅವರ ಬಂಧುಗಳು, ಆಪ್ತರು, ಸ್ನೇಹಿತರು, ಬೆಳ್ಳಿ, ಬಂಗಾರ, ವಜ್ರ ವೈಡೂರ್‍ಯಗಳನ್ನು ಹೂವು ಗುಚ್ಛ, ಬಟ್ಟೆಬರೆ ಇತ್ಯಾದಿ ಆಯಿರಿ ನೀಡುವುದು ಸರ್‍ವೇಸಾಮಾನ್ಯ! ಆದರೆ…. ಇದೊಂದು ವಿಶೇಷ ವಿಶಿಷ್ಟವಾದ ಆಯಿರಿ ಆಗಿದ್ದು ಈ ಶತಮಾನದ ಹೊಸದ್ದು!

ದಿನಾಂಕ ೦೨-೦೮-೨೦೧೫ರಂದು ಭಾನುವಾರದ ದಿನದಂದು ಪೋರ್‍ಚುಗಲ್ಲಿನಲ್ಲಿ ರೊನಾಲ್ಡೊ ಅವರ ಆಪ್ತ ಸಲಹೆಗಾರ ಜೋರ್‍ಗೆಮೆಂಡಸ್ ಸಾಂಡ್ರಾ ಅವರನ್ನು ವಿವಾಹವಾದರು!

ಅಂದು- ದ್ವೀಪ ನೀಡಿದ ಬಗ್ಗೆ ಪೋರ್‍ಚುಗಲ್‌ನ ಸುದ್ದಿ ಸಂಸ್ಥೆ ಮೂವ್ಫ಼್ ನೋಟಿಸಿಯಾ ವಿಶೇಷವಾಗಿ ವರದಿ ಮಾಡಿದೆ!

ಗ್ರೀಸ್ ರಾಷ್ಟ್ರವು ಆರ್‍ಥಿಕ ಮುಗ್ಗಟ್ಟನ್ನು ಸರಿದೂಗಿಸಲು ತನ್ನಲ್ಲಿರುವ ದ್ವೀಪಗಳನ್ನು ಈಗಾಗಲೇ ಮಾರಾಟ ಮಾಡುತ್ತಿದ್ದು ಆ ಪೈಕಿ ರೊನಾಲ್ಡೊ ಕೂಡಾ ಒಂದು ದ್ವೀಪವನ್ನು ಖರೀದಿಸಿದ್ದರು.

ಜೊರ್‍ಗೆ ಮೆಂಡಸ್ ಅವರು ರೊನಾಲ್ಡೊ ಮಾತ್ರವಲ್ಲದೆ ಚೆಲ್ಸಿ ಕ್ಲಬ್‌ನ ಮ್ಯಾನೇಜರ್ ಜೋಸ್ ಮೌರಿನೊ ಈ ಕ್ಲಬ್‌ನ ಸ್ಪ್ರೆಕರ್ ರಾಡಮೆಲ್ ಫಾಲ್ಕಾವೊ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್‌ನ ಗೋಲ್‌ಗೀಪರ್ ಡೇವಿಡ್ ಜಿಯಾ ಅವರಿಗೂ ಸಲಹೆಗಾರರಾಗಿ ಕಾರ್‍ಯ ನಿರ್‍ವಹಿಸುವರು.

ಇದು ಕಲಿಗಾಲ ಸ್ವಾಮಿ! ಏನ್ ಬೇಕಾದರೂ ಆಯಿರಿ ಕೊಡಲಿಲ್ಲಿ ಸಾಧ್ಯವಿದೆ. ಇಂಥಾದ್ದು ಎಂದು ಊಹಿಸಲು ಸಾಧ್ಯವಿಲ್ಲ! ಅಂಥಾ ಕಾಲ ಈಗಾಗಲೇ ಬಂದುಬಿಟ್ಟಿದೆ. ನಾವು ನೀವು ಕುತೂಹಲಿಗಳಾಗಿ ಕಾಯೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...