Home / ಕವನ / ಕವಿತೆ / ನನ್ನೊಳಗೊಬ್ಬ ಸೈತಾನ

ನನ್ನೊಳಗೊಬ್ಬ ಸೈತಾನ

ನನ್ನೊಳಗೊಬ್ಬ ಸೈತಾನ
ಯಾವಾಗಲೂ ಇರುತಾನ
ನಾನೆಚ್ಚರಿರಲಿ ನಿದ್ರಿಸುತಿರಲಿ
ತನ್ನಿಚ್ಛೆಯಂತೆ ಕುಣಿಸುತಾನ
ಕುಣಿಸುತಾನ ದಣಿಸುತಾನ
ಮನಸೋ‌ಇಚ್ಛೆ ಮಣಿಸುತಲು ಇರುತಾನ

ಎಲ್ಲರನು ಬಯ್ಯುತಾನ
ಬಡಿಯಲು ಕೈಯೆತ್ತುತಾನ
ಕೊಂದು ಕೂಗುತಾನ
ಯಾವಾಗಲೂ ಏನೊ ಒಂದು
ಸಂಚು ನಡೆಸುತಿರುತಾನ
ನಡೆವವರ ಕಾಲೆಳೆದು
ಬೀಳೋದು ನೋಡಿ ನಗುತಾನ

ಸತ್ಯ ಹೇಳಲು ಹೊರಟರೆ
ಇಕ್ಕಳ ಹಾಕಿ ಎಳೀತಾನ
ನ್ಯಾಯ ನುಡಿಯಲು ಹೊರಟರೆ
ಬೀಗ ಬಡಿದುಬಿಡುತಾನ

ಕಣ್ಣಿಗೆ ಪರದೆ ಕಟ್ಟುತಾನ
ಕಿವಿಗೆ ಗಂಗಳ ಮೆತ್ತುತಾನ
ಮನಕೆ ಮಂಕು ಹೊದಿಸುತಾನ
ಎದೆಗೆ ಸೀಸ ಹೊಯ್ಯುತಾನ
ಅಫೀಮು ತಿನ್ಸಿ ಮಲಗಿಸ್ತಾನ
ಕುಡಿಸಿ ನನ್ನ ತಲೀನೆ ಕೆಡಿಸಿಬಿಡ್ತಾನ

ದೇವರೆಂದರೆ ಅದು ಸೋಹಂ ಅಂತಾನ
ದೈವವೆಂದರೆ ಅದೂ ಸ್ವಯಂ ಅಂತಾನ
ಸ್ವರ್ಗ ಇರೋದು ತನ್ನೊಳಗೆ
ಸರ್‍ವಸಾಧನಾ ಮಾರ್‍ಗ ತನ್ನೊಳಗೆ
ಯಾರು ಯಾರಿಗೋ ಶರಣಾಗ್ತಿ
ತನಗೇ ಆಗು ಅಂತಾನ

ಮೊದಲ ಕೊಲೆಯೇ ಕಷ್ಟಂತ
ಅಮೇಲದೇ ಮಜಂತ
ಮೊದಲ ಹಾದರವೆ ಭೀತೀಂತ
ಆಮೇಲದೇ ಪ್ರೀತೀಂತ

ಪಾಪ ಪುಣ್ಯಗಳಿಲ್ಲಂತ
ಇರುವುದೊಂದೇ ಸ್ವಂತಾಂತ
ಸ್ವಂತಕೇನು ಬೇಕೋ ಅದ
ನೀಡೋದೆ ನಿನ್ನ ಸುಖಾಂತ

ಅಂತನೆ ಇರ್‍ತಾನೇನ ಮಾಡಲಿ
ಹೆಂಗೆ ಹೋರಾಡಲಿ ಇವನ
ನನ್ನೊಳಗೇ ಇರುವಾತನ
ನನ್ನ ಕೊಲ್ಲದೆ ನಾನಿವನ
ಹೆಂಗೆ ಕೊಲ್ಲಲಿ ಒಳಗಿನವನ
ಇವನಿರದೆ ನಾನಾದರು
ಹೆಂಗಿರಲಿ ಜೀವಸಹಿತ

ನಾ ಗಾಳಿಪಟವಾದರೆ
ಇವನೇ ದಾರಾಂತ
ಇವ ಜಗ್ಗದಿದ್ದರೆ ನಾ
ಬೀಳೋದು ಖಚಿತಾಂತ
ಎಳೆದಾಗಲೇ ನಾ ಮೇಲಕೆ ಮೇಲಕೆ
ಏರೋದಂತ
ಸ್ವರ್‍ಗವ ಕಂಡಂತನಿಸೋದಂತ
ಓ ದೇವರೆ ನನ್ನ
ಕ್ಷಮಿಸೂ ಅಂತ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...