Home / ಕವನ / ಕವಿತೆ / ನನ್ನೊಳಗೊಬ್ಬ ಸೈತಾನ

ನನ್ನೊಳಗೊಬ್ಬ ಸೈತಾನ

ನನ್ನೊಳಗೊಬ್ಬ ಸೈತಾನ
ಯಾವಾಗಲೂ ಇರುತಾನ
ನಾನೆಚ್ಚರಿರಲಿ ನಿದ್ರಿಸುತಿರಲಿ
ತನ್ನಿಚ್ಛೆಯಂತೆ ಕುಣಿಸುತಾನ
ಕುಣಿಸುತಾನ ದಣಿಸುತಾನ
ಮನಸೋ‌ಇಚ್ಛೆ ಮಣಿಸುತಲು ಇರುತಾನ

ಎಲ್ಲರನು ಬಯ್ಯುತಾನ
ಬಡಿಯಲು ಕೈಯೆತ್ತುತಾನ
ಕೊಂದು ಕೂಗುತಾನ
ಯಾವಾಗಲೂ ಏನೊ ಒಂದು
ಸಂಚು ನಡೆಸುತಿರುತಾನ
ನಡೆವವರ ಕಾಲೆಳೆದು
ಬೀಳೋದು ನೋಡಿ ನಗುತಾನ

ಸತ್ಯ ಹೇಳಲು ಹೊರಟರೆ
ಇಕ್ಕಳ ಹಾಕಿ ಎಳೀತಾನ
ನ್ಯಾಯ ನುಡಿಯಲು ಹೊರಟರೆ
ಬೀಗ ಬಡಿದುಬಿಡುತಾನ

ಕಣ್ಣಿಗೆ ಪರದೆ ಕಟ್ಟುತಾನ
ಕಿವಿಗೆ ಗಂಗಳ ಮೆತ್ತುತಾನ
ಮನಕೆ ಮಂಕು ಹೊದಿಸುತಾನ
ಎದೆಗೆ ಸೀಸ ಹೊಯ್ಯುತಾನ
ಅಫೀಮು ತಿನ್ಸಿ ಮಲಗಿಸ್ತಾನ
ಕುಡಿಸಿ ನನ್ನ ತಲೀನೆ ಕೆಡಿಸಿಬಿಡ್ತಾನ

ದೇವರೆಂದರೆ ಅದು ಸೋಹಂ ಅಂತಾನ
ದೈವವೆಂದರೆ ಅದೂ ಸ್ವಯಂ ಅಂತಾನ
ಸ್ವರ್ಗ ಇರೋದು ತನ್ನೊಳಗೆ
ಸರ್‍ವಸಾಧನಾ ಮಾರ್‍ಗ ತನ್ನೊಳಗೆ
ಯಾರು ಯಾರಿಗೋ ಶರಣಾಗ್ತಿ
ತನಗೇ ಆಗು ಅಂತಾನ

ಮೊದಲ ಕೊಲೆಯೇ ಕಷ್ಟಂತ
ಅಮೇಲದೇ ಮಜಂತ
ಮೊದಲ ಹಾದರವೆ ಭೀತೀಂತ
ಆಮೇಲದೇ ಪ್ರೀತೀಂತ

ಪಾಪ ಪುಣ್ಯಗಳಿಲ್ಲಂತ
ಇರುವುದೊಂದೇ ಸ್ವಂತಾಂತ
ಸ್ವಂತಕೇನು ಬೇಕೋ ಅದ
ನೀಡೋದೆ ನಿನ್ನ ಸುಖಾಂತ

ಅಂತನೆ ಇರ್‍ತಾನೇನ ಮಾಡಲಿ
ಹೆಂಗೆ ಹೋರಾಡಲಿ ಇವನ
ನನ್ನೊಳಗೇ ಇರುವಾತನ
ನನ್ನ ಕೊಲ್ಲದೆ ನಾನಿವನ
ಹೆಂಗೆ ಕೊಲ್ಲಲಿ ಒಳಗಿನವನ
ಇವನಿರದೆ ನಾನಾದರು
ಹೆಂಗಿರಲಿ ಜೀವಸಹಿತ

ನಾ ಗಾಳಿಪಟವಾದರೆ
ಇವನೇ ದಾರಾಂತ
ಇವ ಜಗ್ಗದಿದ್ದರೆ ನಾ
ಬೀಳೋದು ಖಚಿತಾಂತ
ಎಳೆದಾಗಲೇ ನಾ ಮೇಲಕೆ ಮೇಲಕೆ
ಏರೋದಂತ
ಸ್ವರ್‍ಗವ ಕಂಡಂತನಿಸೋದಂತ
ಓ ದೇವರೆ ನನ್ನ
ಕ್ಷಮಿಸೂ ಅಂತ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...