Home / ಕವನ / ಕವಿತೆ / ನೂಲೊಲ್ಲ್ಯಾಕ ಚೆನ್ನೀ?

ನೂಲೊಲ್ಲ್ಯಾಕ ಚೆನ್ನೀ?

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ರಾಟಲಿಲ್ಲೋ ಜಾಣಾ!
ರಾಟಲಿಲ್ಲೋ ಜಾಣಾ!

ಕತೆಗಾರ:
ಮನಿಯಾನ ಬಂಡೀ ಮುರಿಸಿ
ಮನಿಯಾನ ಬಂಡೀ ಮುರಿಸಿ
ರಾಟೀ ಮಾಡಿಸಿ ಕೊಟ್ಟಾ
ರಾಟೀ ಮಾಡಿಸಿ ಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಕದರಿಲ್ಲೊ ಜಾಣಾ!
ಕದರಿಲ್ಲೊ ಜಾಣಾ!

ಕತೆಗಾರ:
ಕೈಯಾನ ಗುದ್ದಲಿ ಮುರಿಸಿ
ಕೈಯಾನ ಗುದ್ದೆಲಿ ಮುರಿಸಿ
ಕದರ ಮಡಿಸಿ ಕೊಟ್ಟಾ
ಕದರ ಮಾಡಿಸಿ ಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಚಿಲ್ಲಿಲ್ಲೊ ಜಾಣಾ!
ಚಿಲ್ಲಿಲ್ಲೊ ಜಾಣಾ!

ಕತೆಗಾರ:
ಮನಿಯಾನ ಕೋಣವು ಕಡಿಸಿ
ಮನಿಯಾನ ಕೋಣವು ಕಡಿಸಿ
ಚಿಲ್ಲು ಮಾಡಿಸಿಕೊಟ್ಟಾ
ಚಿಲ್ಲು ಮಾಡಿಸಿಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಹಮ್ಮಿಗಿಲ್ಲಲೊ ಜಾಣಾ!
ಹಮ್ಮಿಗಿಲ್ಲಲೊ ಜಾಣಾ!

ಕತೆಗಾರ:
ನಡುವಿನ ಉಡದಾರ ಕಡಿದು
ನಡುವಿನ ಉಡದಾರ ಕಡಿದು
ಹಮ್ಮಿಗಿ ಮಾಡಿಸಿಕೊಟ್ಟಾ
ಹಮ್ಮಿಗಿ ಮಾಡಿಸಿಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಕಟ್ಟಿ ಇಲ್ಲಲೊ ಜಾಣಾ
ಕಟ್ಟಿ ಇಲ್ಲಲೊ ಜಾಣಾ

ಕತೆಗಾರ:
ಊರಾನ ವಡ್ಡರ ಕರಿಸಿ
ಊರಾನ ವಡ್ಡರ ಕರಿಸಿ
ಕಟ್ಟಿ ಕಟ್ಟಿಸಿಕೊಟ್ಟಾ
ಕಟ್ಟಿ ಕಟ್ಟಸಿಕೊಟ್ಟಾ

ಗಂಡ:
ನೊಲಲ್ಯಾಕ ಚೆನ್ನೀ!
ನೂಲಲ್ಯಾಕ ಚಿನ್ನೀ!

ಹೆಂಡತಿ:
ಗೆಳತ್ಯಾರಿಲ್ಲೊ ಜಾಣಾ!
ಗೆಳತ್ಯಾರಿಲ್ಲೊ ಜಾಣಾ!

ಕತೆಗಾರ:
ಓಣ್ಯಾಗಿನವರ ಕರಿಸಿ
ಓಣ್ಯಾಗಿನವರ ಕರಿಸಿ
ಗೆಳತ್ಯಾರ ಕೂಡಿಸಿಕೊಟ್ಟಾ
ಗೆಳತ್ಯಾರ ಕೂಡಿಸಿಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!

ಹೆಂಡತಿ:
ಗುಗ್ಗರಿಲ್ಲೊ ಜಾಣಾ!
ಗುಗ್ಗರಿಲ್ಲೊ ಜಾಣಾ! ,

ಕತೆಗಾರ:
ಗೋದಿ ಕಡ್ಲಿ ತರಿಸಿ
ಗೋದಿ ಕಡ್ಲಿ ತರಿಸಿ
ಗುಗ್ಗರಿ ಹಾಕಿಸಿಕೊಟ್ಟಾ
ಗುಗ್ಗರಿ ಹಾಕಿಸಿಕೊಟ್ಟಾ

ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ಸೀ!

ಹೆಂಡತಿ:
ನನಗ ಬರೂದಿಲ್ಲೋ ಜಾಣಾ!
ನನಗ ಬರೂದಿಲ್ಲೋ ಜಾಣಾ!
****
ಹಾಸ್ಯದ ಹಾಡುಗಳು

ಮದುವೆಯ ಕಾಲದಲ್ಲಿ ಉಪಯೋಗಿಸುವ ಬೀಗರ ಹಾಡುಗಳು ಕೂಡ ಹಾಸ್ಯದವೇ. ಆದರೆ ಅವುಗಳಲ್ಲಿರುವುದು ಅಪಹಾಸ್ಯ. ಈ ವಿಭಾಗದಲ್ಲಿರುವವು ಅಂತಹವಲ್ಲ. ಇವು ನಕ್ಕು ನಗಿಸುವಂತಹವು. ಎರಡನೆಯ ವಿಭಾಗದೊಳಗಿನ ಹಾಡುಗಳಲ್ಲಿಯೂ ಒಂದು ಬಗೆಯ ಹಾಸ್ಯವಿದ್ದದ್ದು ನಿಜ. ಅದರೆ ಅದೂ ಇಂತಹದಲ್ಲ. ಅದಕ್ಕೆ ಸರಸವೆಂದು ಹೇಳಬಹುದು. ಆ ಪರಿಹಾಸ ಅಪಹಾಸಗಳಿಗಿಂತ ಭಿನ್ನವಾದ ಅಟ್ಟಹಾಸವು ಈ ವಿಭಾಗದಲ್ಲಿ ನಿರೂಪಿತವಾಗಿದೆ.

ನೂಲೊಲ್ಲ್ಯಾಕ ಚೆನ್ನಿ

ಈ ಹಾಡಿನ ಭಾವ ಸರಳವಿದೆ.

ಶಬ್ದಪ್ರಯೋಗಗಳು:- ಚಿಲ್ಲ=ಕದರುಹಾಕುವ ಕಿವಿ (ಚರ್ಮದ್ದು). ಹಮ್ಮಿಗಿ=ಚಕ್ರಕ್ಕೆ ಸುತ್ತುವ ದಾರ. ನಡುವಿನ=ಸೊಂಟದಲ್ಲಿರುವ. ಗುಗ್ಗರಿ=ತಿನ್ನುವುದಕ್ಕೆಂದು ಕುದಿಸಿದ ಕಾಳುಗಳು.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...