Home / ಕವನ / ಕವಿತೆ / ಜಯ ಜಯಾ!

ಜಯ ಜಯಾ!

ರಾಗ ನವರಸಕನ್ನಡ ರೂಪಕತಾಳ
(‘ನಿನುವಿನಾ ನಾಮದೇಂದು’ ಎಂಬ ತ್ಯಾಗರಾಜ ಕೃತಿಯಂತೆ)

ಜಯಜಯಾ ನಮ್ಮೊಡೆಯಾ!
ಜಗದೊಡೆಯಾ ಜಯಜಯಾ! ||ಪಲ್ಲ||
ಜಯಜಯ ಭಾರತದಜೊಡೆಯಾ!
ಬಡವರೊಡೆಯ ಜಯಜಯಾ! ||ಅನು||

ಏನು ಚೆಲುವೊ ದೇವ ನಿನ್ನೀ
ಭಾರತಮೂರ್ತಿ!
ತೆರೆಯ ಗೆಜ್ಜೆ, ಹಸುರ ಸೀರೆ,
ನದಿ ಸರ, ಹಿಮ ಮುಡಿಯ ಸ್ಫೂರ್ತಿ! ||೧||

ತನುಮನದೀ ಸರ್ವಂಸಹೆ
ಯಶಾಂತಿ ನೋಡ!
ಪರತಂತ್ರರ ಗೋಳ ಕೇಳ-
ಸರ್ವತ್ರ ಸಿಡಿಲ್ವ ಮೋಡ! ||೨||

ಮೂಡುವನೆಂದೀ ಭಾರತ
ಭಾಗ್ಯ ಭಾಸ್ಕರಂ?
ಮರಳುವುದೆಂದೆಮಗಗಲಿದ
ಸ್ವತಂತ್ರಮತಿಯಶಸ್ಕರಂ? ||೩||

ಪೂರ್ವಾಪರ ಪುಣ್ಯಸಂಗ
ಮಮೀ ಭಾರತಂ
ಕೂಗುವುದಿದೊ ನಿನ್ನನು ನೀ
ನಿನ್ನೆಂದಿಗೆ ಜಾಗರಿತಂ? ||೪||

ನಮಗೀ ಪರತಂತ್ರತೆ ಹೊಲೆ
ಗಲಸಿರಲಿಂತು,
ನಿನ್ನಯ ಸಂತಾನರೆಂತು?
ಕಾದಪೆ ಮನುಜತೆಯನೆಂತು? ||೫||

ನಿನ್ನ ಭಾರತಕೆ ಸ್ವರಾಜ್ಯ
ತಾರದ ಮುನ್ನ,
ನಂಬಲೆಂತು ದೀನಜನಾ
ನನ್ಯಶರಣನೆಂದು ನಿನ್ನ? ||೬||

ಎಂತೀ ಭಾರತಮನಂತೆ
ನಮ್ಮನುರಕ್ತಿ
ಜಗವೆಲ್ಲವನಕ್ಕರಿಪಂ
ತೀಯೆಮಗಸ್ವಾರ್ಥಶಕ್ತಿ! ||೭||

ಧರೆಯೊಳೆಲ್ಲರನರವರ ಸ್ವ
ರಾಜ್ಯವ ನೀಡ-
ಸಮ ಸೌದರ್ಯದೊಳೆ ನೆಲಸಿ
ಮುಗಿಸಾಳೊಡೆಯೆಂಬ ಸೇಡ! ||೮||

ಭಾರತದಲಿ ಸರ್ವಧರ್ಮ
ಮೊಂದಲಿ ಸದನಂ,
ಮಾಣಿಸಲೀಕೆಯ ಸ್ವಸ್ತಿ
ಧ್ವಜಮಧರ್ಮದೊಳಕದನಂ! ||೯||

ನಿನ್ನೊಳಲ್ಲದೆರೆಯಲೆ ನ
ಮ್ಮಯ ಬಿಡುಗಡೆಯಾ?
ನೀನದನೆಮ್ಮಿಂದ ದುಡಿಸ
ದರ್ಹರೆ ನಾವದಕೊಡೆಯಾ ||೧೦||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...