Home / ಕವನ / ಕವಿತೆ / ಜಯ ಜಯಾ!

ಜಯ ಜಯಾ!

ರಾಗ ನವರಸಕನ್ನಡ ರೂಪಕತಾಳ
(‘ನಿನುವಿನಾ ನಾಮದೇಂದು’ ಎಂಬ ತ್ಯಾಗರಾಜ ಕೃತಿಯಂತೆ)

ಜಯಜಯಾ ನಮ್ಮೊಡೆಯಾ!
ಜಗದೊಡೆಯಾ ಜಯಜಯಾ! ||ಪಲ್ಲ||
ಜಯಜಯ ಭಾರತದಜೊಡೆಯಾ!
ಬಡವರೊಡೆಯ ಜಯಜಯಾ! ||ಅನು||

ಏನು ಚೆಲುವೊ ದೇವ ನಿನ್ನೀ
ಭಾರತಮೂರ್ತಿ!
ತೆರೆಯ ಗೆಜ್ಜೆ, ಹಸುರ ಸೀರೆ,
ನದಿ ಸರ, ಹಿಮ ಮುಡಿಯ ಸ್ಫೂರ್ತಿ! ||೧||

ತನುಮನದೀ ಸರ್ವಂಸಹೆ
ಯಶಾಂತಿ ನೋಡ!
ಪರತಂತ್ರರ ಗೋಳ ಕೇಳ-
ಸರ್ವತ್ರ ಸಿಡಿಲ್ವ ಮೋಡ! ||೨||

ಮೂಡುವನೆಂದೀ ಭಾರತ
ಭಾಗ್ಯ ಭಾಸ್ಕರಂ?
ಮರಳುವುದೆಂದೆಮಗಗಲಿದ
ಸ್ವತಂತ್ರಮತಿಯಶಸ್ಕರಂ? ||೩||

ಪೂರ್ವಾಪರ ಪುಣ್ಯಸಂಗ
ಮಮೀ ಭಾರತಂ
ಕೂಗುವುದಿದೊ ನಿನ್ನನು ನೀ
ನಿನ್ನೆಂದಿಗೆ ಜಾಗರಿತಂ? ||೪||

ನಮಗೀ ಪರತಂತ್ರತೆ ಹೊಲೆ
ಗಲಸಿರಲಿಂತು,
ನಿನ್ನಯ ಸಂತಾನರೆಂತು?
ಕಾದಪೆ ಮನುಜತೆಯನೆಂತು? ||೫||

ನಿನ್ನ ಭಾರತಕೆ ಸ್ವರಾಜ್ಯ
ತಾರದ ಮುನ್ನ,
ನಂಬಲೆಂತು ದೀನಜನಾ
ನನ್ಯಶರಣನೆಂದು ನಿನ್ನ? ||೬||

ಎಂತೀ ಭಾರತಮನಂತೆ
ನಮ್ಮನುರಕ್ತಿ
ಜಗವೆಲ್ಲವನಕ್ಕರಿಪಂ
ತೀಯೆಮಗಸ್ವಾರ್ಥಶಕ್ತಿ! ||೭||

ಧರೆಯೊಳೆಲ್ಲರನರವರ ಸ್ವ
ರಾಜ್ಯವ ನೀಡ-
ಸಮ ಸೌದರ್ಯದೊಳೆ ನೆಲಸಿ
ಮುಗಿಸಾಳೊಡೆಯೆಂಬ ಸೇಡ! ||೮||

ಭಾರತದಲಿ ಸರ್ವಧರ್ಮ
ಮೊಂದಲಿ ಸದನಂ,
ಮಾಣಿಸಲೀಕೆಯ ಸ್ವಸ್ತಿ
ಧ್ವಜಮಧರ್ಮದೊಳಕದನಂ! ||೯||

ನಿನ್ನೊಳಲ್ಲದೆರೆಯಲೆ ನ
ಮ್ಮಯ ಬಿಡುಗಡೆಯಾ?
ನೀನದನೆಮ್ಮಿಂದ ದುಡಿಸ
ದರ್ಹರೆ ನಾವದಕೊಡೆಯಾ ||೧೦||
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್