Home / ಲೇಖನ / ಇತರೆ / ಹೀಗಾದರೆ ಮುಂದಿನ ಗತಿ?

ಹೀಗಾದರೆ ಮುಂದಿನ ಗತಿ?

“ಸ್ಮಾರ್‍ಟ್‌ಫೋನ್‌ಗಳನ್ನು ತಮ್ಮ ಹೆಂಡತಿಗಿಂತಲೂ ಅಧಿಕವಾಗಿ ಪ್ರೀತಿಸುವರಿದ್ದಾರೆ.”

“ಸ್ಮಾರ್‍ಟ್‌ಫೋನ್‌ಗಳನ್ನು ತಮ್ಮ ಮಗು ಅಷ್ಟೇ ಏಕೆ ಪತಿರಾಯನಿಗಿಂತಲೂ ಹೆಚ್ಚು ಕಾಳಜಿ ಮಾಡುವ ಪ್ರೀತಿಸುವವರಿದ್ದಾರೆ.”

“ನನ್ನ ಆಪ್ತ ಸ್ನೇಹಿತರಿಗಿಂತಲೂ ಅಧಿಕವೆಂದು ನಾನು ಸ್ಮಾರ್‍ಟ್ ಫೋನನ್ನು ನಂಬಿದ್ದೇನೆ”- ಹೀಗಾದರೆ ಮುಂದಿನ ಗತಿ? ಬರುಬರುತ್ತಾ ಮಾನವೀಯ ಸಂಬಂಧಗಳ ಗತಿ ಏನು? ನಾವೆತ್ತ ಸಾಗಿದ್ದೇವೆ??

ಇತ್ತೀಚೆಗೆ ಜಾಗತಿಕ ಸಾರ್‍ವಜನಿಕ ಅಭಿಪ್ರಾಯ ಸಂಶೋಧನಾ ಸಲಹಾ ಸಮಿತಿ ಅಂತರ್‍ಜಾಲದ ಮೂಲಕ ಈ ಸಮೀಕ್ಷೆ ಕೈಗೊಂಡಿತ್ತು! ಆಗಸ್ಟ್ ೨೦೧೫ರಲ್ಲಿ ಮೊಟೊರೊಲಾ ಕಂಪನಿ ನಡೆಸಿದ ಈ ಸಮೀಕ್ಷೆಯಲ್ಲಿ ಸುಮಾರು ಏಳು ಸಾವಿರ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಮಗ್ರ ಅಧ್ಯಯನವೊಂದನ್ನು ಸಿದ್ಧಗೊಳಿಸಿದೆ.

ಅದರ ಪ್ರಕಾರ ಭಾರತೀಯರು ಅನೇಕರು ಸ್ಮಾರ್‍ಟ್‌ಫೋನಿನಲ್ಲೇ ಮಗ್ನರಾಗುತ್ತಿದ್ದಾರೆನ್ನುವ ವಿಚಾರ ಒಂದೆಡೆಯಾದರೆ ಮತ್ತೊಂದೆಡೆ ಅದು ಕೆಲವರ ಹಾಸಿಗೆಯ ಸಂಗಾತಿಯೆಂದು ಹೇಳಿಕೊಂಡಿದ್ದಾರೆ!

ಹೌದು! ಇದು ತುಸು ಅತಿರೇಕವೆನಿಸಿದರೂ ನಿಜದ ಸಂಗತಿ ಎನ್ನುತ್ತಿದೆ ಇತ್ತೀಚೆಗೆ ಬಿಡುಗಡೆಯಾದ ಸೆವೆನ್ ಕಂಟ್ರಿ ಸಮೀಕ್ಷಾ ವರದಿ.

ಸ್ಮಾರ್‍ಟ್‌ಫೋನ್‌ನೊಂದಿಗೆ ಏಕಾಂತವಾಗಿ ಕಾಲ ಕಳೆಯಲು ಅನೇಕರು ತಮ್ಮ ತಂದೆತಾಯಿ, ಅಕ್ಕತಂಗಿ, ಹೆಂಡತಿ, ಮಕ್ಕಳನ್ನು ತಮ್ಮ ಗುರುಗಳನ್ನು ದೂರ ಮಾಡಿಕೊಳ್ಳಲು ಸಿದ್ಧರಾಗಿರುವರು!

ಶೇಕಡಾ ೬೦%ರಷ್ಟು ಜನರು ಸ್ಮಾರ್‍ಟ್‌ಫೋನ್ ಕೈಯಲ್ಲಿಡಿದು ಪಕ್ಕದಲ್ಲಿಟ್ಟುಕೊಂಡು ಮಲಗುವುದಾಗಿ ಹೇಳಿಕೊಂಡಿದ್ದಾರೆ.

ಸ್ನಾನ, ಊಟ, ತಿಂಡಿ ಮಾಡುವಾಗಲೂ ಫೋನ್ ಇರಬೇಕೆಂದೂ ಆರರಲ್ಲಿ ಒಬ್ಬರು ಸಾರಿಕೊಂಡಿದ್ದಾರೆ, ಎಂಥಾ ಅಪಾಯ ಸಂದರ್‍ಭಗಳಾದ ಡ್ರೈವಿಂಗ್, ಈಜು, ಸೈಕಲ್, ಆಟ ಇತ್ಯಾದಿ ವೇಳೆಯಲ್ಲಿ ನಮ್ಮ ಗಮನ ಫೋನ್ ಕಡೆಗೇ ಹೇಗುವುದೆಂದೂ ಶೇಕಡಾ ೫೪% ರಷ್ಟು ಜನರು ಸಾರಿರುವರು!

ಇನ್ನು ಶೇಕಡಾ ೪೦% ರಷ್ಟು ಜನರು ಕೆಲವು ರಹಸ್ಯಗಳು, ಅಂಕಿ‌ಅಂಶಗಳು, ಫೋಟೋಗಳು, ತಂತ್ರಕುತಂತ್ರ, ವೈಯಕ್ತಿಕ ತಾಣಗಳು ಅಲ್ಲಿವೆ. ಹೀಗಾಗಿ ಜೀವದ ಗೆಳೆಯನಿಗಿಂತಲೂ ಜೀವದ ಸ್ಮಾರ್‍ಟ್‌ಫೋನ್ ಮುಂದಿನ ಮಾಯಜಾಲವೆಂದು ಬಹಿರಂಗ ಪಡಿಸಿರುವರು.

ಭವ್ಯಭಾರತದ ಜನವೆಲ್ಲ ಹೀಗಾದರೆ ಮುಂದಿನ ಗತಿ…?!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...