Home / ಲೇಖನ / ಇತರೆ / ಹೀಗಾದರೆ ಮುಂದಿನ ಗತಿ?

ಹೀಗಾದರೆ ಮುಂದಿನ ಗತಿ?

“ಸ್ಮಾರ್‍ಟ್‌ಫೋನ್‌ಗಳನ್ನು ತಮ್ಮ ಹೆಂಡತಿಗಿಂತಲೂ ಅಧಿಕವಾಗಿ ಪ್ರೀತಿಸುವರಿದ್ದಾರೆ.”

“ಸ್ಮಾರ್‍ಟ್‌ಫೋನ್‌ಗಳನ್ನು ತಮ್ಮ ಮಗು ಅಷ್ಟೇ ಏಕೆ ಪತಿರಾಯನಿಗಿಂತಲೂ ಹೆಚ್ಚು ಕಾಳಜಿ ಮಾಡುವ ಪ್ರೀತಿಸುವವರಿದ್ದಾರೆ.”

“ನನ್ನ ಆಪ್ತ ಸ್ನೇಹಿತರಿಗಿಂತಲೂ ಅಧಿಕವೆಂದು ನಾನು ಸ್ಮಾರ್‍ಟ್ ಫೋನನ್ನು ನಂಬಿದ್ದೇನೆ”- ಹೀಗಾದರೆ ಮುಂದಿನ ಗತಿ? ಬರುಬರುತ್ತಾ ಮಾನವೀಯ ಸಂಬಂಧಗಳ ಗತಿ ಏನು? ನಾವೆತ್ತ ಸಾಗಿದ್ದೇವೆ??

ಇತ್ತೀಚೆಗೆ ಜಾಗತಿಕ ಸಾರ್‍ವಜನಿಕ ಅಭಿಪ್ರಾಯ ಸಂಶೋಧನಾ ಸಲಹಾ ಸಮಿತಿ ಅಂತರ್‍ಜಾಲದ ಮೂಲಕ ಈ ಸಮೀಕ್ಷೆ ಕೈಗೊಂಡಿತ್ತು! ಆಗಸ್ಟ್ ೨೦೧೫ರಲ್ಲಿ ಮೊಟೊರೊಲಾ ಕಂಪನಿ ನಡೆಸಿದ ಈ ಸಮೀಕ್ಷೆಯಲ್ಲಿ ಸುಮಾರು ಏಳು ಸಾವಿರ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಮಗ್ರ ಅಧ್ಯಯನವೊಂದನ್ನು ಸಿದ್ಧಗೊಳಿಸಿದೆ.

ಅದರ ಪ್ರಕಾರ ಭಾರತೀಯರು ಅನೇಕರು ಸ್ಮಾರ್‍ಟ್‌ಫೋನಿನಲ್ಲೇ ಮಗ್ನರಾಗುತ್ತಿದ್ದಾರೆನ್ನುವ ವಿಚಾರ ಒಂದೆಡೆಯಾದರೆ ಮತ್ತೊಂದೆಡೆ ಅದು ಕೆಲವರ ಹಾಸಿಗೆಯ ಸಂಗಾತಿಯೆಂದು ಹೇಳಿಕೊಂಡಿದ್ದಾರೆ!

ಹೌದು! ಇದು ತುಸು ಅತಿರೇಕವೆನಿಸಿದರೂ ನಿಜದ ಸಂಗತಿ ಎನ್ನುತ್ತಿದೆ ಇತ್ತೀಚೆಗೆ ಬಿಡುಗಡೆಯಾದ ಸೆವೆನ್ ಕಂಟ್ರಿ ಸಮೀಕ್ಷಾ ವರದಿ.

ಸ್ಮಾರ್‍ಟ್‌ಫೋನ್‌ನೊಂದಿಗೆ ಏಕಾಂತವಾಗಿ ಕಾಲ ಕಳೆಯಲು ಅನೇಕರು ತಮ್ಮ ತಂದೆತಾಯಿ, ಅಕ್ಕತಂಗಿ, ಹೆಂಡತಿ, ಮಕ್ಕಳನ್ನು ತಮ್ಮ ಗುರುಗಳನ್ನು ದೂರ ಮಾಡಿಕೊಳ್ಳಲು ಸಿದ್ಧರಾಗಿರುವರು!

ಶೇಕಡಾ ೬೦%ರಷ್ಟು ಜನರು ಸ್ಮಾರ್‍ಟ್‌ಫೋನ್ ಕೈಯಲ್ಲಿಡಿದು ಪಕ್ಕದಲ್ಲಿಟ್ಟುಕೊಂಡು ಮಲಗುವುದಾಗಿ ಹೇಳಿಕೊಂಡಿದ್ದಾರೆ.

ಸ್ನಾನ, ಊಟ, ತಿಂಡಿ ಮಾಡುವಾಗಲೂ ಫೋನ್ ಇರಬೇಕೆಂದೂ ಆರರಲ್ಲಿ ಒಬ್ಬರು ಸಾರಿಕೊಂಡಿದ್ದಾರೆ, ಎಂಥಾ ಅಪಾಯ ಸಂದರ್‍ಭಗಳಾದ ಡ್ರೈವಿಂಗ್, ಈಜು, ಸೈಕಲ್, ಆಟ ಇತ್ಯಾದಿ ವೇಳೆಯಲ್ಲಿ ನಮ್ಮ ಗಮನ ಫೋನ್ ಕಡೆಗೇ ಹೇಗುವುದೆಂದೂ ಶೇಕಡಾ ೫೪% ರಷ್ಟು ಜನರು ಸಾರಿರುವರು!

ಇನ್ನು ಶೇಕಡಾ ೪೦% ರಷ್ಟು ಜನರು ಕೆಲವು ರಹಸ್ಯಗಳು, ಅಂಕಿ‌ಅಂಶಗಳು, ಫೋಟೋಗಳು, ತಂತ್ರಕುತಂತ್ರ, ವೈಯಕ್ತಿಕ ತಾಣಗಳು ಅಲ್ಲಿವೆ. ಹೀಗಾಗಿ ಜೀವದ ಗೆಳೆಯನಿಗಿಂತಲೂ ಜೀವದ ಸ್ಮಾರ್‍ಟ್‌ಫೋನ್ ಮುಂದಿನ ಮಾಯಜಾಲವೆಂದು ಬಹಿರಂಗ ಪಡಿಸಿರುವರು.

ಭವ್ಯಭಾರತದ ಜನವೆಲ್ಲ ಹೀಗಾದರೆ ಮುಂದಿನ ಗತಿ…?!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...