Home / ಲೇಖನ / ಇತರೆ / ನಂಬಿಕೆಯೇ ದೇವರು

ನಂಬಿಕೆಯೇ ದೇವರು

೧೯೯೧ ರಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ನಾನು ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕೆಲಸ ಮಾಡುವ ಅವಕಾಶವೊಂದು ಲಭಿಸಿತ್ತು. ಟಿ.ಪಿ. ವೆಂಕಟರಮಣ ಅವರು ನಮ್ಮ ಮೇಲೆ ಬಹುದೊಡ್ಡ ಸಾರಿಗೆ ಅಧಿಕಾರಿಯಾಗಿದ್ದರು. ಅವರೊಬ್ಬ ಪ್ರಾಮಾಣಿಕ, ದಕ್ಷ, ಸರಳ, ಸಜ್ಜನ ಬಹುದೊಡ್ಡ ಕೆಲಸಗಾರರಾಗಿದ್ದರು! ಅವರು ನನ್ನನ್ನು ಇಲ್ಲಿ ಕೆಲಸ ಮಾಡಲು ಒತ್ತಾಯಿಸಿದ್ದರು.

ಆಗ ನಾನು ಸುಬ್ರಮಣ್ಯ ನಗರದಲ್ಲಿ ಪುಟ್ಟದೊಂದು ಬಾಡಿಗೆ ಮನೆಯಲ್ಲಿ ಬಹಳ ತೊಂದರೆಯಲ್ಲಿ ಕೆಲಸದ ಒತ್ತಡದಲ್ಲಿ ವಿಲವಿಲ ಒದ್ದಾಡುತ್ತಿದ್ದೆ. ಆಗ ನನ್ನವಳು ಒಂದು ದಿನ “ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೋಗಿ ಬರೋಣ ನಮ್ಮ ಕಷ್ಟ ನಷ್ಟ ಅವಮಾನ ಎಲ್ಲ ತೊಲಗುವುದೆಂದು ನನ್ನ ಐದಾರು ಭಾರಿ ಹುರಿದುಂಬಿಸಿದ್ದಳು.

ನನಗೂ ಪ್ರವಾಸದ ಹುಚ್ಚು ಬೇರೆ “ಆಯ್ತು” ಎಂದೆ. ಶುಕ್ರವಾರ ರಾತ್ರಿ ಬೆಂಗಳೂರು ಬಿಟ್ಟು ಶನಿವಾರ ಬೆಳ್ಳಂಬೆಳಿಗ್ಗೆ ಮಕನಸುಕಿನಲ್ಲಿ ರೂಮು ಮಾಡಿ, ತಣ್ಣೀರಿನಲ್ಲಿ ಮುಳುಗೆದ್ದು ಸರತಿ ಸಾಲಿನಲ್ಲಿ ಹೋಗಿ ನಿಂತೆವು… ನೂಕುನುಗ್ಗಲು. “ತಿರುಪತಿ ತಿಮ್ಮಪ್ಪನಿಗೆ ದಾರಿ ಯಾವುದಯ್ಯಾ?” ಅನಿಸಿತು! ತಳ್ಳುನೂಕು… ಹುಟ್ಟಿದ್ದೆಲ್ಲ ನೆನೆಸಿಕೊಂಡೆ….

ಒಂದು ಹಗಲು ಒಂದು ರಾತ್ರಿ ನಿಂತು ನಿಂತೂ… ಕುಂತು ಕುಂತೂ ತಿರುಪತಿ ತಿರುಮಲ ದೇವಸ್ಥಾನದ ಮಂದಿ ನಮಗೆಲ್ಲ ನರಕ ತೋರಿಸಿ ಬಿಟ್ಟರು. ಗುದ್ದಾಟ ತಳ್ಳಾಟ. ಟೀವಿ ತೋರಿಸುವ ಜಾಹಿರಾತು ತೋರಿಸುವ ನೆಪದಲ್ಲಿ ಅವರಿಗೆ ತಂಪು ಪಾನಿಯಗಳು… ಬಿಸ್ಕತ್, ಬ್ರೆಡ್, ಹಣ್ಣುಹಂಪಲು, ಚಾಕಲೇಟ್ಸ್… ಚಿಪ್ಸ್…. ಹೀಗೆ ನಾನಾ ತರತರದ ತಿಂಡಿತೀರ್‍ಥಗಳು ಖರ್‍ಚಾಗಲೆಂದೇ ಜನರನ್ನು ಕುರಿ ಮಂದೆ ಮಲಗಿಸಿದಂತೆ ಇಪ್ಪತ್ತು ನಾಲ್ಕು ತಾಸು, ಮೂವತ್ತಾರು ತಾಸು, ನಲವತ್ತೆಂಟು ಗಂಟೆ ಒಳಗೆ ಕೂಡಿ ಹಾಕಿ ತಿಮ್ಮಪ್ಪನ ಒಂದು ನಿಮಿಷ ನೋಡಲೂ ಬಿಡಲಿಲ್ಲ. ತಳ್ಳಿದರೆ ಮೂರು ಉಳ್ಳಿಕೆ ಬೀಳಬೇಕು ಹಂಗೆ ಬಲವಾಗಿ ನೂಕಿದರು. ಉಸಿರು ಗಟ್ಟಿಸುವ ಸ್ಥಿತಿಗತಿ ನೂಕುನುಗ್ಗಲು! ಇದು ಬೇಕಾ?

“ಥ! ಇಲ್ಲಿಗೆ ಇನ್ನೊಮ್ಮೆ ಬರಬಾರದೆಂದು” ಜೀವ ಬಲು ನೊಂದು ಬೆಂದು ಬಸವಳಿದು ಸೊರಗಿ ಸೋತು ಅಂದು ಆಡಿ ಕೂಗಾಡಿ ಬಿಟ್ಟೆ!

ಸೋಮವಾರ ದಿನ ಕಚೇರಿಯಲ್ಲಿ ಕರ್‍ತವ್ಯದ ಮೇಲಿದ್ದೆ ೧೯೯೨ ರಲ್ಲಿ ನನ್ನಮ್ಮನ ಆಸೆ ಆಣತಿಯಂತೆ ಮತ್ತೆ ತಿರುಪತಿ ತಿಮ್ಮಪ್ಪನ ದರ್‍ಶನಕ್ಕೆ ಅದೇ ಹಿಂಸೆ ಚಿತ್ರಹಿಂಸೆ ನೂಕುನುಗ್ಗಲು ತಳ್ಳಾಟ… “ಥ! ಇನ್ನೊಮ್ಮೆ ಇಲ್ಲಿಗೆ ಬರುವುದು ಬೇಡ!” ಎಂದು ಬೈದಾಡಿ ಕೂಗಾಡಿ ಬಂದಿದ್ದುಂಟು!!

– ಹೀಗೆ ಹತ್ತಾರು ಸಲ ಈಗಾಗಲೇ ಹೋಗಿ ಬಂದಿದ್ದೇನೆ. “ಏನೈತಿ? ಅಂಥಾದೇನೈತಿ?? ಇದೇಕೆ? ಇಲ್ಲಿನ ಗತ್ತುಗಮ್ಮತ್ತು ಏನು..? ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಏನೈತಿ?” ಎಂದು ಪ್ರತಿ ಸಾರಿ ಕೇಳಿಕೊಳ್ಳುತ್ತಿದ್ದೇನೆ.

ಈಗಾಗಲೇ ಮುಡಿ ಬಿಟ್ಟು ತಿರುಪತಿ ತಿಮ್ಮಪ್ಪನ ಬಳಿಗೆ ಹೋಗಲು, ೨೦೧೫ ರ ಡಿಸೆಂಬರ್ ತಿಂಗಳೊಳಗಾಗಿ ಹೋಗಲು, ಮನಸು ಮಾಡಿದ್ದೇನೆ. ಈ ನಿಟ್ಟಿನಲ್ಲಿ ಶತಪ್ರಯತ್ನ ವಿಶ್ವಪ್ರಯತ್ನದಲ್ಲಿದ್ದೇನೆ.

ನಾ ಅಂದುಕೊಂಡಂತೆ ಆಗುವುದು! ನಾ ಹೋಗಿ ಬಂದ ಮೇಲೆ ಅದರ ಸವಿಸವಿ ನೆನಪು ಅನುಭವ ಬರೆಯುವೆ, ಆಗಬಹುದೇ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...