Home / ಕವನ / ಕವಿತೆ / ನಂಬಲೆಂತು?

ನಂಬಲೆಂತು?

ರಾಗ ಧನ್ಯಾಸಿ- ಆದಿ ತಾಳ

ನಂಬಲೆಂತು ನಾ ನೋಡುವ ಮುನ್ನ
ಯದುಕುಲದಾ ಲೀಲೆಯ ನಿನ್ನ? ||ಪಲ್ಲ||
ನೋಡದೆ ನಂಬಲು ಬಲ್ಲವನಲ್ಲ,
ನೋಡಿಸಿ ನಂಬಿಸೊ ಬಲ್ಲವ ನಲ್ಲ! ||ಅನು||

೧ನನ್ನ ಮನದ ಮೋಹಮೇಕೆ ಹೀರೆ?
೨ಏಕೆದೆಯಾನೆಯ ಮದ ಮುರಿಯೆ?
೩ಏಕೆ ಕನಲ ಕುದುರೆಯ ಕೊಲಲೇರೆ?
೪ಬಿಗಿತದ ಕತ್ತೆಯ ತಿರ್ರನೆ ತರಿಯೆ? ||೧||

೫ಎದೆಯ ಬೆದೆಯ ಹಿಳಿಲನೇಕೆ ಹಿಳಿಯೆ ?
೬ಕಪಟದೇಕೆ ರೆಕ್ಕೆಯ ಕೀಳೆ?
೭ಹಗೆಯ ಹಾವಿನೇತಕೆ ಹೆಡೆ ತುಳಿಯೆ?
೮ಸೆಳೆಯಾಸೆಯ ಸುಳಿಯನೇಕೆ ಸೀಳೆ? ||೨||

ನಿನ್ನಡಿ ಹಂಬಲ ಹಸವ ಮೇಸೆಯ?
ಕೊಳಲಾಗದೆ ಬಿದಿರೆದೆಯೆನ್ನ?
೯ಆಲ ಸಾಲದೇನೆನ್ನೆದೆಯಾಸೆಯ ?
೧೦ಎತ್ತೆ ಏಕೆ ಪಾಪದ ಮಲೆಯನ್ನ? ||೩||

ಡಂಬ ಭಕ್ತಿಯೆನ್ನೆದೆಯಿಂ ಮಾಣದೆ,
೧೧ಮಘವನ್ಮಖ ಮಾಣಿಸಿ ಗುಣವೇಂ?
ನನ್ನ ನಯನದಿ ಸದಾ ನಿನನಾನದೆ,
೧೨ಯಮುನೆಯ ತೇಲಿನ ನೆಳಲಲಿ ತಣಿವೇಂ? ||೪||

೧೩ಹೂವಿನಾಸೆಯೇ? ಪ್ರೇಮದ ಮೊಗಸನೆ
ಸೂಸಿ ಹೂವಿಸೇಕೆದೆಯೆನ್ನ?
೧೪ನನ್ನೆದೆಯೊಗೆಯದೆ ಪಾತಕಿಯಗಸನೆ?
೧೫ಬಾಗಿಹೆ, ನೆಟ್ಟನೆ ನೆಗಹೇಕೆನ್ನ? ||೫||

ನನ್ನೆದೆಯಾನ್ಮೆಯ ೧೬ಮಲ್ಲನ ಮುರಿಯದೆ,
೧೭ಹರಿಯದೆದೆಯ ಹಿಂಸೆಯ ಬಿಲ್ಲ,
ಪಾಪಪುರುಷ ಕಂಸನಿರವನಿರಿಯದೆ,
ಬಲ್ಲೆನೆ ಬಿಲ್ಲಿನ ಹಬ್ಬದ ಗೆಲ್ಲ? ||೬||

ಗೊಲ್ಲ ಗೊಲ್ಲತಿಯರಲ್ಲಿಯೆ ಸಾಕೆನೆ
ಸಲ್ಲಿಸಿದೆಯೊ ೧೮ಮಲ್ಲಣಿಯೆಲ್ಲ?
ಹೊಲ್ಲ ಹೊಲ್ಲದಲಿ ತಲ್ಲಣಿಪೇಕೆನ
ಗೂಲ್ಲೆ ಮೆಲ್ಲಡಿಯ ಪಲ್ಲನದೊಲ್ಲ? ||೭||

ಆದೆಯ ರಾಧೆಯ ಹೃದಯಾರಾಧನ?
ಈಯೆಯೇಕೆ ನಿನ್ನಡಿ ಸಾರೆ?
ಕಂಬನಿಯಿಂಬಿಗನೆಂಬುದೆ ಸಾಧನ-
ಅಂಗಲಾಚಿ ಕರೆವೆನೇಕೆ ಬಾರೆ? ||೮||

ನನ್ನೆದೆ ಯದುಕುಲದಲಿ ಕಂಬನಿಯಾ
ಕೂಲದಿ ಬಾಲಲೀಲೆಯ ನಿನ್ನ
ಮರಳಿ ಮೆರಸದಿರೆ, ಕನಸಿನ ಗನಿಯಾ
ಕಾಲನನಗೆಯಲಳನವೆ ಅಕಟೆನ್ನ? ||೯||
*****
೧ ಪೂತನಿ
೨ ಕುವಲಯಾನಪೀಡನೆಂಬ ಆನೆ
೩ ಕೇತಿ ಎಂಬ ಕುದುರೆ
೪ ಧೇನುಕನೆಂಬ ಕತ್ತೆ
೫ ಅರಿಷ್ಟನೆಂಬ ಗೂಳಿ
೬ ಬಕಾಸುರ
೭ ಕಾಲಿಯನೆಂಬ ನಾಗ
೮ ತೃಣಾವರ್‍ತ
೯ ಭಾಂಡೀರವೆಂಬ ಆಲದ ಮರ
೧೦ ಗೋವರ್ಧನೋದ್ಧಾರ
೧೧ ಇಂದ್ರಯಜ್ಞ ನಿಷೇಧ
೧೨ ಆಕ್ರೂರನಿಗೆ ಯಮುನಾ ನದಿಯಲ್ಲಿತ್ತ ದರ್‍ಶನ
೧೩ ಮಾಲಾಕಾರನಿಂದ ಹೂವನ್ನು ಕೊಂಡುದು
೧೪ ಮಥುರೆಯಲ್ಲಿ ಅಗಸನನ್ನು ಎದುರ್‍ಗೊಂಡುದು
೧೫ ಕುಬ್ಜೆ
೧೬ ಜಾಣೂರ
೧೭ ಧನುರ್‍ಭಂಗ
೧೮ ರಾಸಕ್ರೀಡೆ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...