Home / ಲೇಖನ / ಇತರೆ / ವಿಸ್ಮಯ ಹುಟ್ಟಿಸುವ ಮೂಷಿಕ ಪ್ರಪಂಚ

ವಿಸ್ಮಯ ಹುಟ್ಟಿಸುವ ಮೂಷಿಕ ಪ್ರಪಂಚ

ಆಶ್ಚರ್‍ಯವೆಂದರೆ ಭಾರತ ಒಂದರಲ್ಲಿಯೆ ೨೪೦೦ ರಿಂದ ೫೦೦೦ ಮಿಲಿಯನ್ ದಂಶಗಳಿವೆ ಎಂದು ಅಂದಾಜು ಮೂಡಲಾಗಿದೆ. ಇಲಿ, ಮೊಲ, ಅಳಿಲು, ಮುಂತಾದವುಗಳಿಗೆ ದಂಶಕಗಳೆನ್ನುತ್ತಾರೆ. ಪ್ರತಿವರ್‍ಷ ೧೧ ಮಿಲಿಯನ್ ಟನ್ ಧಾನ್ಯಗಳನ್ನು ಇಲಿಗಳು ತಿಂದು ಬಿಡುತ್ತವೆ. ವರ್‍ಷ ಒಂದಕ್ಕೆ ಒಂದು ಇಲಿ ಒಂದು ಕ್ವಿಂಟಲ್ ಧಾನ್ಯವನ್ನು ಹಾಳುಮಾಡುತ್ತದೆ. ಒಂದು ಜೊತೆ ಇಲಿ ಒಂದು ವರ್ಷದಲ್ಲಿ ೮೦೦ ಆಗಿ ೩ ವರ್ಷಗಳಲ್ಲಿ ೩೫ ಕೋಟಿಯಷ್ಟಾಗುತ್ತವೆ! ಅಮೇರಿಕ ಸಂಯುಕ್ತ ಸಂಸ್ಥಾನವೊಂದರಲ್ಲಿಯೇ ಕಳೆದ ೨೦ ವರ್‍ಷಗಳಲ್ಲಿ ಇಲಿಯ ಬೋನಿನ ವಿವರ ಮಾದರೀಯ ೩೦೦ ಪೇಟೆಂಟ್‌ಗಳನ್ನು ಪಡೆಯಲಾಯಿತೆಂದರೆ ಅಲ್ಲಿಯ ಅಗಣಿತ ಇಲಿಗಳ ಸಂಖ್ಯೆ ಎಷ್ಟೆಂದು ಅಚ್ಚರಿಯಾಗುತ್ತದೆ. ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ದಕ್ಷಿಣಕ್ಕೆ ಡೆನ್ನಾಕ್, ಎಂಬ ಸಣ್ಣ ಪಟ್ಟಣವಿದ್ದು ಇಲ್ಲಿ ಕಾರ್‍ನಿದೇವಿ ದೇವಾಲಯ ೬೦೦ ವರ್ಷಗಳಿಂದಲೂ ಪ್ರಸಿದ್ಧವಾಗಿದೆ. ಬಂದ ಭಕ್ತರು ಇಲ್ಲಿವಾಸವಾಗಿರುವ ಸಾವಿರಾರು ಇಲಿಗಳಿಗೆ ಆಹಾರ ನೈವೇದ್ಯವನ್ನರ್‍ಪಿಸುತ್ತಾರೆ. ಇದೇ ಇಲ್ಲಿಯ ಭಕ್ತಿ. ಬೆಕ್ಕೂ, ಕಾಗೆ, ಹದ್ದುಗಳಿಂದ ಈ ಇಲಿಗಳನ್ನು ರಕ್ಷಿಸಲು ನೌಕರರ ಒಂದು ತಂಡವನ್ನು ನೇಮಿಸಿದ್ದಾರೆ. ಆದ್ಯಾಗ್ಯೂ ಇದುವರೆಗೆ ಪಟ್ಟಣದಲ್ಲಿ ಯಾವುದೇ ತರಹದ ರೋಗಗಳು ಹರಡಿಲ್ಲದಿರುವುದು ಆಶ್ಚರ್‍ಯ!?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...