Home / ಲೇಖನ / ಇತರೆ / ವಿಸ್ಮಯ ಹುಟ್ಟಿಸುವ ಮೂಷಿಕ ಪ್ರಪಂಚ

ವಿಸ್ಮಯ ಹುಟ್ಟಿಸುವ ಮೂಷಿಕ ಪ್ರಪಂಚ

ಆಶ್ಚರ್‍ಯವೆಂದರೆ ಭಾರತ ಒಂದರಲ್ಲಿಯೆ ೨೪೦೦ ರಿಂದ ೫೦೦೦ ಮಿಲಿಯನ್ ದಂಶಗಳಿವೆ ಎಂದು ಅಂದಾಜು ಮೂಡಲಾಗಿದೆ. ಇಲಿ, ಮೊಲ, ಅಳಿಲು, ಮುಂತಾದವುಗಳಿಗೆ ದಂಶಕಗಳೆನ್ನುತ್ತಾರೆ. ಪ್ರತಿವರ್‍ಷ ೧೧ ಮಿಲಿಯನ್ ಟನ್ ಧಾನ್ಯಗಳನ್ನು ಇಲಿಗಳು ತಿಂದು ಬಿಡುತ್ತವೆ. ವರ್‍ಷ ಒಂದಕ್ಕೆ ಒಂದು ಇಲಿ ಒಂದು ಕ್ವಿಂಟಲ್ ಧಾನ್ಯವನ್ನು ಹಾಳುಮಾಡುತ್ತದೆ. ಒಂದು ಜೊತೆ ಇಲಿ ಒಂದು ವರ್ಷದಲ್ಲಿ ೮೦೦ ಆಗಿ ೩ ವರ್ಷಗಳಲ್ಲಿ ೩೫ ಕೋಟಿಯಷ್ಟಾಗುತ್ತವೆ! ಅಮೇರಿಕ ಸಂಯುಕ್ತ ಸಂಸ್ಥಾನವೊಂದರಲ್ಲಿಯೇ ಕಳೆದ ೨೦ ವರ್‍ಷಗಳಲ್ಲಿ ಇಲಿಯ ಬೋನಿನ ವಿವರ ಮಾದರೀಯ ೩೦೦ ಪೇಟೆಂಟ್‌ಗಳನ್ನು ಪಡೆಯಲಾಯಿತೆಂದರೆ ಅಲ್ಲಿಯ ಅಗಣಿತ ಇಲಿಗಳ ಸಂಖ್ಯೆ ಎಷ್ಟೆಂದು ಅಚ್ಚರಿಯಾಗುತ್ತದೆ. ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ದಕ್ಷಿಣಕ್ಕೆ ಡೆನ್ನಾಕ್, ಎಂಬ ಸಣ್ಣ ಪಟ್ಟಣವಿದ್ದು ಇಲ್ಲಿ ಕಾರ್‍ನಿದೇವಿ ದೇವಾಲಯ ೬೦೦ ವರ್ಷಗಳಿಂದಲೂ ಪ್ರಸಿದ್ಧವಾಗಿದೆ. ಬಂದ ಭಕ್ತರು ಇಲ್ಲಿವಾಸವಾಗಿರುವ ಸಾವಿರಾರು ಇಲಿಗಳಿಗೆ ಆಹಾರ ನೈವೇದ್ಯವನ್ನರ್‍ಪಿಸುತ್ತಾರೆ. ಇದೇ ಇಲ್ಲಿಯ ಭಕ್ತಿ. ಬೆಕ್ಕೂ, ಕಾಗೆ, ಹದ್ದುಗಳಿಂದ ಈ ಇಲಿಗಳನ್ನು ರಕ್ಷಿಸಲು ನೌಕರರ ಒಂದು ತಂಡವನ್ನು ನೇಮಿಸಿದ್ದಾರೆ. ಆದ್ಯಾಗ್ಯೂ ಇದುವರೆಗೆ ಪಟ್ಟಣದಲ್ಲಿ ಯಾವುದೇ ತರಹದ ರೋಗಗಳು ಹರಡಿಲ್ಲದಿರುವುದು ಆಶ್ಚರ್‍ಯ!?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...