Home / ಕವನ / ಅನುವಾದ / ವಿದಾಯ

ವಿದಾಯ

(೧೯೧೧ನೆಯ ಏಪ್ರಿಲ್‌ ತಿಂಗಳ `Modern Review’ ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ರಾಕೂರರ “Farewell”ಎಂಬ ಕವಿತೆಯನ್ನು ಅನುವರ್ತಿಸಿ ಬರೆದುದು)

ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು!
ಮಬ್ಬ ಮರೆಯ ಮುಂಜಾನೆಯಲಿ
ಬರಿತೋಳ್ಗಳ ನಿಡುಚಾಚುತಲಿ,
ಎಲ್ಲಿಹೆ ಮಗುವೇ? ಬಾರೆಂದು ೫
ದಳದಳನೆನ್ನ ನೀ ಕರೆವಂದು,
ಅವ್ವಾ ಮುದ್ದಿನ ಮಗುವಿಲ್ಲಿ
ಇಲ್ಲವೆನುವೆ ನಿನ್ನ ಕಿವಿಯಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೧೦
ಅಲೆವೆಲರುಸಿರಿಂ ಹುಯ್ಯುವೆನು,
ನಿನ್ನೆದೆಯಿಂ ನಿಡುಸುಯ್ಯುವೆನು;
ಬಿಮ್ಮನೆ ತೋಳುಗಳಿಂದೆನ್ನ
ಬಿಗಿವಿಡಿಯಡೊಲೋಡುವೆ ನಿನ್ನ,
ನೀರಿನ ಕಿರುದೆರೆಯಾಗುತಲಿ, ೧೫
ಯಾರೆನ್ನರಿಯದೊಲೀಸುತಲಿ,
ಮೀಯುವ ನಿನ್ನನು ಬಲವಂದು
ಮುರಿಮುರಿದಪ್ಪಿ ಕೊಳುವೆನಂದು
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೨೦

ಸೂಸುವ ಸೇಸೆಯ ಸೋನೆಯಲಿ
ಇರುಳಲಿ ನೀನಮ್ಮ ಮನೆಯಲಿ
ಒಂಟಿ ಮಲಗಿ ನಮ್ಮ ಹಸೆಯಲ್ಲಿ
ಮೆಯ್ಮರೆತೆನ್ನನೆ ನೆನೆವಲ್ಲಿ,
ತಟತಟ ತಟಕುವ ತನಿಯೆಲೆಯಿಂ ೨೫
ತೊದಲಾಡುನೆನಿಂಬನಿಯುಲಿಯಿಂ
ಮುಚ್ಚಲು ಮರೆತಿಹ ಕಿಟಿಕಿಗಳಿಂ
ಮಿಂಚುವೆ ಮಿಂಚಿನ ಮಿಟಕುಗಳಿಂ-
ಅಂದಿನ ನನ್ನಟ್ಟಸವನ್ನ
ಬಗೆಯಲಳನೆ ಅವ್ವಾ ನಿನ್ನ? ೩೦

ಮೀರಿದಿರುಳ ಕಗ್ಗತ್ತಲಲಿ
ನೀನೆಚ್ಚರವಿರೆ ಮರುಗುತಲಿ,
ಮಿರುರೆಪ್ಪೆಯ ತಾರಗೆಯಾಗಿ
ಮಲಗವ್ವಾ ಎನುವೆನು ಬಾಗಿ,
ಅಳಲಿ ಬಳಲಿ ಕಡೆಯಲಿ ದಣಿದು ೩೫
ಪವಡಿಸುತಲೆ ನೀನರೆಮಣಿದು,
ಚಂದ್ರನ ಸೊದೆಗದಿರಾಗುನೆನು,
ನಿನ್ನ ಹಸೆಯನಕ ಸಾಗುವೆನು,
ಇಳಿಯುತ ಚುಂಬಿಸಿ ತಂಗುವೆನು
ನಿನ್ನ ಹನಿವ ನನೆಗಂಗಳನು ೪೦

ನಿನ್ನೆವೆಗದವಿನಿಸರಳಿರಲು
ಹೊಂಚುತ ಹಣಕುವೆನೊಳಬರಲು,
ಸಸಿನೆ ನುಸುಳಿ ಕನಸಲಿ ನಿನ್ನ
ಮುದ್ದಿಸುವೆನು ನಿದ್ದಿಸುವನ್ನ
ಬೆಪ್ಪನೆದ್ದು ನೀ ದಿಗಿಲೆಂದು ೪೫
ಹಸೆಯೊಳೆನ್ನ ತಡವರಿಪಂದು,
ಯಾರಿನ್ನೆಗಮರಿಯದಿಹಲ್ಲಿ
ತಟ್ಟನೆ ಮೆಯ್ಗರೆಯುವೆನಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೫೦

ಮಾನವಮಿಯ ಹಬ್ಬದ ದಿನದಿ
ಬಾಲಕರೆಮ್ಮಯ ಪೂಬನದಿ
ಆಡಲು ಬಂದು ನುಡಿವರಂದು
ಈ ಮನೆಯಲಿ ಮಗುವಿಲ್ಲೆಂದು;
ಅಂದಾದರು ಕೊಳಲಿಂಚರದಿ ೫೫
ತೇಲುತ ರವಿಗದಿರಂಬರದಿ,
ಮನೆಗೆಲಸವ ಗೆಯ್ಯುವ ನಿನ್ನ
ಸೆರಗನೆ ಹಿಡಿದಾಂ ಬಿಡೆ ಬೆನ್ನ.
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು. ೬೦

ಹಬ್ಬದುಡುಗೆರೆಗಳನು ತಂದು
ನಮ್ಮಯ ಮನೆಗತ್ತಿಗೆ ಬಂದು,
ಅಕ್ಕಾ ಮಗುವೆಲ್ಲಿಹುದೆಂದು
ಕೇಳುವಳಾಕೆಗೆ ಪೇಳಂದು-
ಎಲ್ಲೆಲ್ಲಿಯು ನನ್ನ ಮಗುವಿಹುದು, ೬೫
ನೋಡೆನ್ನಯ ಕಣ್ಣುಲಿಯದು!
ಎನ್ನಯ ಮೊಲೆಯ ಕುಡಿಯುತಿಹುದು,
ಎನ್ನಂಕದಲಿದೊ ಕುಳಿತಿಹುದು!
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೭೦
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...