Home / ಕವನ / ಕವಿತೆ / ಅಘನಾಶಿನಿ

ಅಘನಾಶಿನಿ

ಇಂದು ಅಘನಾಶಿನಿಯ ಬಗೆಗೆ ಮಾತಾಡುವೆ
ನನ್ನೊಲವಿನ ಅಘನಾಶಿನಿ ಆ ಊರು ನದಿ ಮತ್ತು ದಡ
ಇಲ್ಲಿ ನಾನು ಅವತರಿಸಿದೆ ನಿನ್ನ ಪ್ರೀತಿಯ ಅಘನಾಶಿನಿಗೆ
ಅದರ ಅಪಾರ ಜಲರಾಶಿಗೆ ನನಗೆ ಸ್ಪಷ್ಟ ಕೇಳಿಸುವ
ಆ ಜೀವದ ಮೂಲ ಚೈತನ್ಯದ ನಾಡಿ ಮಿಡಿತಕ್ಕೆ
ಇಲ್ಲಿ ಅಂಬಿಗರು ಹಾಕುವ ಹುಟ್ಟು ಆ ಹುಟ್ಟು
ಚಿಮ್ಮಿಸುವ ನೀರಿನ ಕಣಗಳ ಕುಣಿತ ಆಟಕ್ಕೆ
ಮೌನದಲ್ಲಿ ಭೋರ್ಗರೆಯುವ ಇಲ್ಲಿಯ ಅಲೆಗಳ ಕಲ್ಲುಬಡಿತಕ್ಕೆ
ಭರತಕ್ಕೆ ಇಳಿತಕ್ಕೆ
ನನ್ನ ಭಾವನೆಗಳನ್ನು ಕವಿತೆಗಳನ್ನು ಅಕ್ಷರ ಶಬ್ದಗಳನ್ನು
ಒಪ್ಪಿಸುವೆ ಪ್ರಿಯ ಅಘವಾಶಿನಿ

ಈ ನದಿಯನ್ನು ದಾಟಿ ಯಾರಾರೋ ಬರುವರು
ಅವರು ತಂದಿದ್ದರೆ ಸೈಕಲ್ಲನ್ನು
ಅಂಬಿಗರು ದಡಕ್ಕೆ ಹೊತ್ತು ತರುವರು ದೋಣಿ
ಅಲ್ಲಿಂದ ಇಲ್ಲಿಗೂ ಇಲ್ಲಿಂದ ಅಲ್ಲಿಗೂ
ಹೋಗುತ್ತಲಿರುವುದು

ಗಾಳಿ ಮಳೆಗೆ ಹಾಯಿ ಬಿಚ್ಚಿಕೊಳ್ಳುವುದು
ಅದರ ಸಹಸ್ರ ತೂತುಗಳಲ್ಲಿ ನನ್ನವರ ಬಡತನ
ನಿನ್ನ ಒಡಲಾಳದಲ್ಲಿ
ಯಾವಾವ ಜಾತಿಯ ಮೀನುಗಳು ಹುದುಗಿವೆ
ಇವರ ನಿರಕ್ಷರತೆ ದಾರಿದ್ರ್ಯ ಹಸಿವು ಸರಳ
ಹಾಗೂ ಕಠಿಣ
ಸರಾಯಿ ಘಮ್ಮೆಂದು ಮೂಗಿಗೆ ಬಡಿಯುವ ಬದುಕು
ಯಾವ ಕೈಯಲ್ಲಿ ಬರೆದೆ
ಇವರನ್ನು ದಡದಲ್ಲಿ ಕುಳ್ಳಿರಿಸಿ
ನೀನು ಯಾವಾವ ಲೋಕಕ್ಕೆ ನಡೆವೆ ನಿನ್ನ
ಗುಟ್ಟು ಬಗೆಯಲು ಕಾತರಿಸಿರುವೆ
ಉಪ್ಪು ನೀರಿನ ಒಳಗೂ ಸಿಹಿ
ತುಂಬಿ ತುಳುಕುವುದು ತದಡಿಯ ದಡಕ್ಕೊತ್ತಿ ನಿಂತ
ಲಾಂಚುಗಳು ರಾತ್ರಿಯ ಬೆಳಕಲ್ಲಿ
ದೋಣಿಗಳ ಕಂಡು ನಗಲಾರಂಭಿಸಿವೆ ತಾರೆಗಳು
ನೀರಲ್ಲಿ ಮುಖ ನೋಡಿ ರಾತ್ರಿಯ ಆಟಕ್ಕೆ
ಸಜ್ಜಾಗಿವೆ ತೇಲಿ ತೇಲಿ ಬರುತ್ತಿವೆ ನೆನಪುಗಳು
ಅಘನಾಶಿನಿ ಎಂದಾದರೊಂದು ದಿನ
ಈ ಕವಿತೆ ಪೂರ್ತಿ ಮಾಡುವೆ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...