Home / ಕವನ / ಕವಿತೆ / ಅಮಾವಾಸ್ಯೆಯ ದಿವಸ

ಅಮಾವಾಸ್ಯೆಯ ದಿವಸ

ಹುಣ್ಣಿಮೆಯಿಂದ ಪಾಡ್ಯ
ಪಾಡ್ಯದಿಂದ ಬಿದಿಗೆ
ಅಂಶ-ಅಂಶ ಕರಗಿ
ಅಮಾವಾಸ್ಯೆ
ಇನ್ನಿಲ್ಲವಾಗಿಬಿಟ್ಟ ಚಂದ್ರ
ಬರುವುದಿಲ್ಲ ಇನ್ನು

ಇದೇ ಹದಿನೈದು ದಿನಗಳ ಹಿಂದೆ
ಈ ಆಕಾಶ
ತಾರೆಗಳ ಹೂಹಾರ ತೊಡಿಸಿ
ಚಂದ್ರನ್ನ ಸನ್ಮಾನಿಸಿತ್ತು,
ಪೂರ್ಣಚಂದ್ರನ ತುಂಬು ನಗೆ ತುಂಬಿ ಆಕಾಶ
ಸುರಿದಿತ್ತು, ಭೂಮಿಯ ತುಂಬ
ತುಂಬಿಕೊಂಡಿದ್ದೆವು ನಾವೂ ನೀವೂ

ಇನ್ನು ಇನ್ನಿಲ್ಲ ಚಂದ್ರ
ಆಕಾಶದಲ್ಲಿ ಹೊಳೆಯೋದಿಲ್ಲ
ತಾರೆಗಳ ಮೂಕ ಮೆರವಣಿಗೆಯಲ್ಲಿ
ಚಂದ್ರನ್ನ ಬೇರೆಲ್ಲೋ ಸಾಗಿಸಲಾಯ್ತು,
ಆಕಾಶ ಅಪೂರ್ಣ ಇನ್ನು
ಸೂರ್ಯನೂ ಒಬ್ಬಂಟಿ ಇನ್ನು

ಚಂದ್ರ ಹೋಗಿ ಬಿಟ್ಟ
ಇನ್ನೂ ಬೇಕು
ಎನ್ನುತ್ತಿದ್ದಾಗಲೇ ಹೋಗುವುದು ಒಳ್ಳೆಯದು
ಹೋಗಿಬಿಟ್ಟ

ಆದರೆ ಒಂದೇ ಶಂಕೆ
ಚಂದ್ರನಿಗೆ
ಆಕಾಶವಲ್ಲದೆ ಬೇರ ಎಲ್ಲಿದೆ ಜಾಗ ?
ಇದ್ದರೂ ಆ ಜಾಗ
ಚಂದ್ರನ ಅನಂತ ನಗೆಗೆ
ಖಂಡಿತಾ ಸಾಕಾಗ

ಬರುತ್ತಾನೆ
ಬರದೆ ಎಲ್ಲಿ ಹೋಗುತ್ತಾನೆ ?
ಚಂದ್ರ ಇದ್ದಲ್ಲೇ ತಾರೆಗಳು
ಇದ್ದಲ್ಲೆ ಆಕಾಶ
ಇದ್ದಲ್ಲೆ ನಮ್ಮ
ಕವಿತೆಗಳಿಗಿಷ್ಟು ಅವಕಾಶ

ನಗಲಿದ್ದಾನೆ ಹೊಸ ಶಕ್ತಿಯಿಂದ
ಹೊಗಲಿದ್ದಾನೆ ಹೊಸ ಭಾವನೆಗಳಿಂದ
ಹೊಳೆಯುತ್ತಾನೆ ಪುನಹಾ
ಬೆಳೆಯುತ್ತಾನೆ

ಅಳಬೇಡಿರೋ ಮಕ್ಕಳೆ
ನಿಸ್ತೇಜ ಪ್ರೇಮಿಗಳೆ
ಭಗ್ನ ಹೃದಯಿಗಳಾಗಿ
ಕೆರೆ ಹಾರಿ ಸಾಯಬೇಡಿರೋ ಕವಿಗಳೆ

ನಿಮಗಾಗಿ-ನಿಜವಾಗಿಯೂ
ನಿಮಗಾಗಿಯು

ಬರಲಿದ್ದಾನೆ ಚಂದ್ರ
ಚಂದ್ರ ಬರಲಿದ್ದಾನೆ
*****

 

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...