Home / ಲೇಖನ / ಇತರೆ / ಡಾ. ವಿ. ನಾಗರಾಜುರವರು

ಡಾ. ವಿ. ನಾಗರಾಜುರವರು

ಅಂದು- ಶಾಲೆಗೆ ಡಾ. ವಿ.ನಾಗರಾಜುರವರು ಆಗಮಿಸಿದ್ದರು. ಮಕ್ಕಳಿಗೆ ಆರೋಗ್ಯ ಭಾಗ್ಯದ ಬಗೆಗೆ ವಿವರಿಸಿದರು.

ಅವರು ಹೇಳುವುದ ಕೇಳುತ್ತಾ ಕುಳಿತ ನಮಗೆಲ್ಲ ಐದಾರು ದಶಕಗಳ ಕೆಳಗೆ ನಾವೆಲ್ಲ ಕಡ್ಡಾಯವಾಗಿ ನಿತ್ಯ ಹಾಲು-ಮೊಸರು-ಮಜ್ಜಿಗೆ-ಬೆಣ್ಣೆ-ಗಿಣ್ಣು-ತುಪ್ಪ ಉಂಡು ಬೆಳದ ಆ ಸವಿಸವಿ… ದಿನಗಳು ಕಣ್ಣ ಮುಂದೆ ಮೆರವಣಿಗೆ ಹೊರಟವು. ಪ್ರತಿಯೊಬ್ಬರ ಮನೆಮನೆಗಳಲ್ಲಿ ಹತ್ತಾರು ದನಕರು ಕುರಿಮೇಕೆಗಳ ಹಿಂಡು ಹಿಂಡು…

ಡಾ. ವಿ.ನಾಗರಾಜು ಅವರ ಅನುಭವಾಮೃತವನ್ನು ಅಂದು ಅಲ್ಲಿದ್ದವರಿಗೆಲ್ಲ ಉಣಬಡಿಸತೊಡಗಿದರು. ನೀವು ಏನೆಲ್ಲ ಎಷ್ಟೆಲ್ಲ ಸೇವಿಸಿದರೂ ಕೊನೆಗೆ ಮಜ್ಜಿಗೆಯನ್ನು ಕಡ್ಡಾಯವಾಗಿ ಮೂರು ಹೊತ್ತು ಸೇವಿಸುವುದನ್ನು ಮರೆಯಬಾರದೆಂದು ಒತ್ತಿ ಹೇಳಿದರು. ಕಾರಣ- ಮಜ್ಜಿಗೆಯಲ್ಲಿ ಏನೆಲ್ಲ ಪ್ರೋಟೀನ್, ಪೊಟ್ಯಾಶಿಯಂ, ‘ಬಿ’ ಕಾಂಪ್ಲೆಕ್ಸ್ ಇತ್ಯಾದಿ ವಿಟಮಿನ್‌ಗಳ ಗಣಿಯಾಗಿದೆ. ತೂಕ ಇಳಿಸಲು ಮಜ್ಜಿಗೆ ಔಷಧಿಯ ಹಾಗೆ ಕೆಲಸ ಮಾಡುವುದು. ಬಾಯಿ ವಾಸನೆಯನ್ನು, ತೂಕವನ್ನು, ತಡೆಗಟ್ಟುವುದು, ಅಜೀರ್ಣವನ್ನು ನಿವಾರಿಸುವುದು. ಅಲರ್ಜಿಗೆ ರಾಮಬಾಣ, ಕರುಳು ಬೇನೆ, ಭೇದಿ, ಆಮಶಂಕೆ, ಗ್ಯಾಸ್, ಉರಿ, ಉಬ್ಬರ ವಿಳಿತ ಇತ್ಯಾದಿಗೆ ಮಜ್ಜಿಗೆ ಸೇವನೆ ಹೇಳಿಮಾಡಿಸಿದ ಪಾನೀಯ. ಜೀರ್ಣಕ್ರಿಯೆಗೆ ಸಹಕಾರಿ.

ಮಜ್ಜಿಗೆಯನ್ನು ಯಥೇಚ್ಛವಾಗಿ ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ ಎಂಬುದನ್ನು ಆರೋಗ್ಯ ಪರಿಣಿತರು ಈಗಾಗಲೇ ರುಜುವಾತು ಪಡಿಸಿರುವುದನ್ನು ಅವರು ಒತ್ತಿ‌ಒತ್ತಿ ಹೇಳಿದರು. ಅವರ ಮಾತೇ ಹಾಗೇ ಹಾಲು ಜೇನಿನಾ ಹಾಗೇ ಕಲ್ಲು ಸಕ್ಕರೆಯಾ ಹಾಗೇ.. ಹೌದೌದು ಎನ್ನುವ ಹಾಗೇ ತುಂಬ ಸೊಗಸಾಗಿ ಹೇಳುತ್ತಾ ಹೋದರು…

ಮಜ್ಜಿಗೆಗೆ ಮಸಾಲೆ ಹಾಕುವುದು ಒಗ್ಗರಣೆ ಕೊಡುವುದು ಹಸಿಮೆಣಸಿನಕಾಯಿ ಸೇರಿಸುವುದು ಸಕ್ಕರೆ ಬೆಲ್ಲ ಇತ್ಯಾದಿ ಏನೆಲ್ಲ ಸೇರಿಸಿ ಕುದಿಸಿ ಕುಡಿಯುವುದೂ… ಇದೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಡ್ಡ ಪರಿಣಾಮಕ್ಕೆ ರಹದಾರಿಗಳು…….. ಮಜ್ಜಿಗೆಯಲ್ಲಿ ಕಣ್ಣಿಗೆ ಕಾಣದಂಥ ಬ್ಯಾಕ್ಟಿರಿಯಾಗಳಿರುತ್ತವೆ! ಇವು ಆರೋಗ್ಯಕ್ಕೆ ಬೇಕೇ ಬೇಕು…! ಬೇಕಾದ ಬ್ಯಾಕ್ಟಿರಿಯಾಗಳು…. ಇವು ವಿನಾಶವಾಗದಂತೆ ಎಚ್ಚರಿಕೆ ವಹಿಸುವುದು ಎಲ್ಲರಿಗೆ ತಿಳಿದಿರಲೇಬೇಕು! ಇವನ್ನು ನಾಶ ಮಾಡಿಕೊಂಡು ಅಂದಚೆಂದಕ್ಕೆ ಮಂಜುಗಡ್ಡೆ ಹಾಕಿ ಕುಡಿಯುವುದರಿಂದ ಆರೋಗ್ಯದ ಮೇಲೆ ಅನಗತ್ಯವಾದ ಕೆಟ್ಟ ಪರಿಣಾಮ ಬೀರುವುದೆಂದು ಡಾಕ್ಟರ್ ವಿ. ನಾಗರಾಜು ಅವರು ವಿವರಿಸುತ್ತಾ ನಿಂತರು.

ಕಾಲ ಸರಿದಿದ್ದೇ ಗೊತ್ತಾಗಲಿಲ್ಲ. ಅಲ್ಲಿದ್ದ ಮಕ್ಕಳೇನು… ಶಿಕ್ಷಕರೆಲ್ಲ… ನಾವೆಲ್ಲ ಕೇಳಿ ಬಲು ಸಂಭ್ರಮಿಸಿದೆವು…. ಅವರಿಗೆ ಶಾಲಾವತಿಯಿಂದ ಸನ್ಮಾನಿಸಿದರು.

ಅಲ್ಲಿಗೆ ಅಂದಿಗೆ ‘ಜ್ಞಾನ ವಿಜ್ಞಾನ’ ಮಾಲಿಕೆಯ ಉಪನ್ಯಾಸ ಮುಕ್ತಾಯಗೊಂಡಿತು.

ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಡಾ. ವಿ.ನಾಗರಾಜು ಅವರು ಮಕ್ಕಳತ್ತ ಕೈಬೀಸಿ ಖುಷಿಲಿ ಶಾಲೆಯಿಂದ ನಿರ್ಗಮಿಸಿದರು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...