Home / ಲೇಖನ / ಇತರೆ / ಡಾ. ವಿ. ನಾಗರಾಜುರವರು

ಡಾ. ವಿ. ನಾಗರಾಜುರವರು

ಅಂದು- ಶಾಲೆಗೆ ಡಾ. ವಿ.ನಾಗರಾಜುರವರು ಆಗಮಿಸಿದ್ದರು. ಮಕ್ಕಳಿಗೆ ಆರೋಗ್ಯ ಭಾಗ್ಯದ ಬಗೆಗೆ ವಿವರಿಸಿದರು.

ಅವರು ಹೇಳುವುದ ಕೇಳುತ್ತಾ ಕುಳಿತ ನಮಗೆಲ್ಲ ಐದಾರು ದಶಕಗಳ ಕೆಳಗೆ ನಾವೆಲ್ಲ ಕಡ್ಡಾಯವಾಗಿ ನಿತ್ಯ ಹಾಲು-ಮೊಸರು-ಮಜ್ಜಿಗೆ-ಬೆಣ್ಣೆ-ಗಿಣ್ಣು-ತುಪ್ಪ ಉಂಡು ಬೆಳದ ಆ ಸವಿಸವಿ… ದಿನಗಳು ಕಣ್ಣ ಮುಂದೆ ಮೆರವಣಿಗೆ ಹೊರಟವು. ಪ್ರತಿಯೊಬ್ಬರ ಮನೆಮನೆಗಳಲ್ಲಿ ಹತ್ತಾರು ದನಕರು ಕುರಿಮೇಕೆಗಳ ಹಿಂಡು ಹಿಂಡು…

ಡಾ. ವಿ.ನಾಗರಾಜು ಅವರ ಅನುಭವಾಮೃತವನ್ನು ಅಂದು ಅಲ್ಲಿದ್ದವರಿಗೆಲ್ಲ ಉಣಬಡಿಸತೊಡಗಿದರು. ನೀವು ಏನೆಲ್ಲ ಎಷ್ಟೆಲ್ಲ ಸೇವಿಸಿದರೂ ಕೊನೆಗೆ ಮಜ್ಜಿಗೆಯನ್ನು ಕಡ್ಡಾಯವಾಗಿ ಮೂರು ಹೊತ್ತು ಸೇವಿಸುವುದನ್ನು ಮರೆಯಬಾರದೆಂದು ಒತ್ತಿ ಹೇಳಿದರು. ಕಾರಣ- ಮಜ್ಜಿಗೆಯಲ್ಲಿ ಏನೆಲ್ಲ ಪ್ರೋಟೀನ್, ಪೊಟ್ಯಾಶಿಯಂ, ‘ಬಿ’ ಕಾಂಪ್ಲೆಕ್ಸ್ ಇತ್ಯಾದಿ ವಿಟಮಿನ್‌ಗಳ ಗಣಿಯಾಗಿದೆ. ತೂಕ ಇಳಿಸಲು ಮಜ್ಜಿಗೆ ಔಷಧಿಯ ಹಾಗೆ ಕೆಲಸ ಮಾಡುವುದು. ಬಾಯಿ ವಾಸನೆಯನ್ನು, ತೂಕವನ್ನು, ತಡೆಗಟ್ಟುವುದು, ಅಜೀರ್ಣವನ್ನು ನಿವಾರಿಸುವುದು. ಅಲರ್ಜಿಗೆ ರಾಮಬಾಣ, ಕರುಳು ಬೇನೆ, ಭೇದಿ, ಆಮಶಂಕೆ, ಗ್ಯಾಸ್, ಉರಿ, ಉಬ್ಬರ ವಿಳಿತ ಇತ್ಯಾದಿಗೆ ಮಜ್ಜಿಗೆ ಸೇವನೆ ಹೇಳಿಮಾಡಿಸಿದ ಪಾನೀಯ. ಜೀರ್ಣಕ್ರಿಯೆಗೆ ಸಹಕಾರಿ.

ಮಜ್ಜಿಗೆಯನ್ನು ಯಥೇಚ್ಛವಾಗಿ ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ ಎಂಬುದನ್ನು ಆರೋಗ್ಯ ಪರಿಣಿತರು ಈಗಾಗಲೇ ರುಜುವಾತು ಪಡಿಸಿರುವುದನ್ನು ಅವರು ಒತ್ತಿ‌ಒತ್ತಿ ಹೇಳಿದರು. ಅವರ ಮಾತೇ ಹಾಗೇ ಹಾಲು ಜೇನಿನಾ ಹಾಗೇ ಕಲ್ಲು ಸಕ್ಕರೆಯಾ ಹಾಗೇ.. ಹೌದೌದು ಎನ್ನುವ ಹಾಗೇ ತುಂಬ ಸೊಗಸಾಗಿ ಹೇಳುತ್ತಾ ಹೋದರು…

ಮಜ್ಜಿಗೆಗೆ ಮಸಾಲೆ ಹಾಕುವುದು ಒಗ್ಗರಣೆ ಕೊಡುವುದು ಹಸಿಮೆಣಸಿನಕಾಯಿ ಸೇರಿಸುವುದು ಸಕ್ಕರೆ ಬೆಲ್ಲ ಇತ್ಯಾದಿ ಏನೆಲ್ಲ ಸೇರಿಸಿ ಕುದಿಸಿ ಕುಡಿಯುವುದೂ… ಇದೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಡ್ಡ ಪರಿಣಾಮಕ್ಕೆ ರಹದಾರಿಗಳು…….. ಮಜ್ಜಿಗೆಯಲ್ಲಿ ಕಣ್ಣಿಗೆ ಕಾಣದಂಥ ಬ್ಯಾಕ್ಟಿರಿಯಾಗಳಿರುತ್ತವೆ! ಇವು ಆರೋಗ್ಯಕ್ಕೆ ಬೇಕೇ ಬೇಕು…! ಬೇಕಾದ ಬ್ಯಾಕ್ಟಿರಿಯಾಗಳು…. ಇವು ವಿನಾಶವಾಗದಂತೆ ಎಚ್ಚರಿಕೆ ವಹಿಸುವುದು ಎಲ್ಲರಿಗೆ ತಿಳಿದಿರಲೇಬೇಕು! ಇವನ್ನು ನಾಶ ಮಾಡಿಕೊಂಡು ಅಂದಚೆಂದಕ್ಕೆ ಮಂಜುಗಡ್ಡೆ ಹಾಕಿ ಕುಡಿಯುವುದರಿಂದ ಆರೋಗ್ಯದ ಮೇಲೆ ಅನಗತ್ಯವಾದ ಕೆಟ್ಟ ಪರಿಣಾಮ ಬೀರುವುದೆಂದು ಡಾಕ್ಟರ್ ವಿ. ನಾಗರಾಜು ಅವರು ವಿವರಿಸುತ್ತಾ ನಿಂತರು.

ಕಾಲ ಸರಿದಿದ್ದೇ ಗೊತ್ತಾಗಲಿಲ್ಲ. ಅಲ್ಲಿದ್ದ ಮಕ್ಕಳೇನು… ಶಿಕ್ಷಕರೆಲ್ಲ… ನಾವೆಲ್ಲ ಕೇಳಿ ಬಲು ಸಂಭ್ರಮಿಸಿದೆವು…. ಅವರಿಗೆ ಶಾಲಾವತಿಯಿಂದ ಸನ್ಮಾನಿಸಿದರು.

ಅಲ್ಲಿಗೆ ಅಂದಿಗೆ ‘ಜ್ಞಾನ ವಿಜ್ಞಾನ’ ಮಾಲಿಕೆಯ ಉಪನ್ಯಾಸ ಮುಕ್ತಾಯಗೊಂಡಿತು.

ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಡಾ. ವಿ.ನಾಗರಾಜು ಅವರು ಮಕ್ಕಳತ್ತ ಕೈಬೀಸಿ ಖುಷಿಲಿ ಶಾಲೆಯಿಂದ ನಿರ್ಗಮಿಸಿದರು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...