Home / ಕವನ / ಕವಿತೆ / ಫಾಲ್ಗುಣದ ಹೂಮಳೆಯೊಳಗೆ (ಯುಗಾದಿ)

ಫಾಲ್ಗುಣದ ಹೂಮಳೆಯೊಳಗೆ (ಯುಗಾದಿ)

ಫಾಲ್ಗುಣದ ಮುಂಜಾವು ದಿನಗಳು
ನನ್ನ ಕಿಡಕಿಯಾಚೆ ಸ್ವರ್‍ಗ
ಸ್ಪರ್‍ಧೆಗಿಳಿಯುವಂತೆ ಧರೆಗೆ
ಝೆಕರಾಂಡಾ, ಬೋಗನ್ ವಿಲ್ಲಾ, ಮಲ್ಲಿಗೆ, ಗುಲಾಬಿ, ಸಂಪಿಗೆ

ಹಳದಿ ಕೆಂಪು ನೀಲಿ ಗುಲಾಬಿ ಹೂಗಳ ಸುರಿಮಳೆ
ಹಗಲು ರಾತ್ರಿಗಳಿಗೆ ಬಿಡುವಿಲ್ಲದ ಕೆಲಸ
ನೆಲತುಂಬ ಚಿತ್ತ ಚಿತ್ತಾರದ ಹಾಸುಗೆ
ಉಸಿರಿನೊಳಗೆ ಪರಿಮಳ ಮಕರಂದ ಜೇನು.

ದುಡಿದು ಹಣ್ಣಾದ ಇಳಿಗಾಲದ ಅಜ್ಜಿ
ನೂರೆಂಟು ಚಿಂತೆಗಳಲಿ ಚಿತೆಯಾಗಿ
ನಾಲ್ಕೆಳೆ ಬಿಳಿ ಕೂದಲಿನ ಬೆಳ್ಳುಳ್ಳಿ ತುರುಬ ಕಟ್ಟಿ
ಮಾಸಿದ ಸೀರೆ ಮೈಗೆ ಸುತ್ತಿ
ಹೆಜ್ಜೆಹೆಜ್ಜೆಗೂ ಬಾಗಿ
ಮತ್ತೊಮ್ಮೆ ಎದೆ ಸೆಟಿಸಿ ನಿಂತು
ಒಮ್ಮೆ ಸೋತು ಮತ್ತೊಮ್ಮೆ ನಕ್ಕು
ಮರದ ಕೆಳಗೆ ಕುಳಿತು ಮೌನ
ಮನದೊಳಗಿನ ಗೊಂದಲಗಳ ನಡುವೆ ನಿಶ್ಯಬ್ಧ

ತಾನೇ ಕೈಯಾರೆ ನಿರುಣಿಸಿ ಬೆಳೆಸಿದ
ಹಚ್ಚ ಹಸಿರಿನ ತೋಟದ
ಬಾಳೆ ಮಾವು ತೆಂಗುಗಳು ತೊನೆದಾಡಿ
ಮಾತನಾಡಲೆಳಿಸಿ, ಅರ್ಪಿಸಿಕೊಳ್ಳಲು ಹಾತೊರೆಯುವಿಕೆ
ಮಕ್ಕಳು ಮೊಮ್ಮಕ್ಕಳ ಕಲರವದ
ಹಣ್ಣುಗಳು ಉಡಿತುಂಬಿ
ಬಣ್ಣ ಬಣ್ಣದ ಹೂಮಳೆ
ಅವಳ ಕೊರಳಿಗೆ ಪದಕವಾಗಿ
ತುರುಬಿಗೆ ಮಾಲೆಯಾಗಿ
ನೆರಿಗೆ ಕೆನ್ನೆಗೆ ಪರಾಗಮೆತ್ತಿ
ಸೀರೆಗೆ ಹೂಬಳ್ಳಿಯ ಬಣ್ಣ ತುಂಬಿ,
ಬಿರುದು ಸಮ್ಮಾನಗಳ ಹಂಗಿಲ್ಲದೆ
ನಿಸರ್ಗಕೊಟ್ಟ ಸಂತಸಕೆ
ಹೊಂಬಣ್ಣದ ಸೂರ್ಯನಿಗೆ ನಮಸ್ಕರಿಸಿ
ಮೆಲ್ಲನೆ ಹೂ ಹಾಸಿನ ಮೇಲೆ ಹೆಜ್ಜೆ ಹಾಕಿದಳು
ಹೂವು ಹುಡಿ ಮುತ್ತಿದ ಅಜ್ಜಿ
ಆಗಿದ್ದಳು ಬೆಡಗು ಬಿಂಕ ಬಿನ್ನಾಣದ
ಫಾಲ್ಗುಣಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...