Home / ಲೇಖನ / ವಿಜ್ಞಾನ / ಅಕ್ಕಿಕಾಳಿನಷ್ಟು ಕಾರು ತಯಾರಿಸಿದ ಜಪಾನ್

ಅಕ್ಕಿಕಾಳಿನಷ್ಟು ಕಾರು ತಯಾರಿಸಿದ ಜಪಾನ್

ಜಪಾನ್ ದೇಶವು ಚಿಕ್ಕದಾದರೂ ವೈಜ್ಞಾನಿಕವಾಗಿ ಬಹಳ ಶ್ರೇಷ್ಠ ಮಟ್ಟದಲ್ಲಿದೆ. ಪ್ರತಿದಿನವೂ ಅಲ್ಲಿ ವೈಜ್ಞಾನಿಕವಾಗಿ ಏನಾದರೊಂದು ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಕಾರು ತಯಾರಿಕೆಯಲ್ಲಿ ಬಹಳ ಕಾಲದಿಂದಲೂ ಮೊದಲ ಸ್ಥಾನಗಳಲ್ಲಿ ಇದೆ. ಪುಟಾಣಿ ಗಾತ್ರದ ಯಂತ್ರಗಳ ಸೃಷ್ಟಿಯಲ್ಲಿಯೂ ಈ ದೇಶ ಎತ್ತಿದ ಕೈ. ಈಗ ಎಲ್ಲದಕ್ಕೂ ಮುಂದೆ ಹೋಗಿ ಅಕ್ಕಿಕಾಳಿನ ಗಾತ್ರದಲ್ಲಿ ಒಂದು ಚಲನ ಶೀಲ ಕಾರೊಂದನ್ನು ತಯಾರಿಸಿ ಬಿಟ್ಟಿದೆ. ಇದು ಮನರಂಜನೆ, ಅಥವಾ ಆಟಿಗೆ ವಸ್ತು ಅಲ್ಲವೇ ಅಲ್ಲ. ಕಾರಿನೊಳಗೆ ಇರಬೇಕಾದ ಎಲ್ಲ ಬಿಡಿಭಾಗಗಳು ಯಂತ್ರಗಳು, ಸೀಟುಗಳು, ಎಲ್ಲವೂ ಇವೆ. ಇದರಲ್ಲಿಯ ಬಿಡಿಭಾಗಗಳನ್ನು ದುರ್ಭೀನು ಹಾಕಿಯೇ ನೋಡಬೇಕು.

ಇಂಥಹ ಕಾರುಗಳನ್ನು ಜಪಾನಿನ “ನಿಪೊಂಡೆನ್ಸೊ” ಕಂಪನಿಯು ತಯಾರಿಸುತ್ತಿದ್ದು ಈ ಕಾರುಗಳ ವೇಗ ಒಂದು ಸೆಕೆಂಡಿಗೆ ೫ ಸೆಂಟಿಮೀಟರ್‌ಗಳಷ್ಟು ಚಲಿಸುತ್ತದೆ. ಈ ಕಾರಿನಲ್ಲಿ ೨೪ ಭಾಗಗಳಿದ್ದು ೫ ಭಾಗಗಳಿಂದ ರಚಿತವಾದ ಮೋಟಾರುಗಳನ್ನು ಒಳಗೊಂಡಿದೆ. ೧೦ ವರ್ಷಗಳ ಸಂಶೋಧನೆ ಈ ಕಾರಿನ ತಯಾರಿಕೆಯಲ್ಲಿ ಹಿಡಿದಿದೆ. ಈ ಸಂಶೋಧನೆಗೆ ತಗುಲಿದ ವೆಚ್ಚ ೨೫ ಕೋಟಿ ಡಾಲರ್‌ಗಳು, ಒಂದು ಘನಸೆಂಟಿ ಮೀಟರ್‌ಗ್ರಾತಕ್ಕಿಂತಲೂ ಚಿಕ್ಕಾದಾದರೂ ಈ ಕಾರು ಸಮರ್ಥವಾಗಿ ನಿರ್ವಹಿಸಬಲ್ಲ ಯಂತ್ರಗಳ ಅಭಿವೃದ್ಧಿಯೇ ಮುಖ್ಯಗುರಿ, ಎಂದು ಸಂಶೋಧಕರು ಹೇಳುತ್ತಾರೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...