Home / ಕವನ / ಕವಿತೆ / ಭಾರತ ತಪಸ್ವಿನಿ-ಕಸ್ತೂರಿಬಾಯಿ

ಭಾರತ ತಪಸ್ವಿನಿ-ಕಸ್ತೂರಿಬಾಯಿ

ಶ್ರೀ ಮಹಾತ್ಮರ ರಾಣಿ ಕಸ್ತೂರಿಮಾನಿನೀ
ಓ ಜಗತ್ಸಂಹಿನೀಂ – ಭಾರತತಪಸ್ವಿನೀ
ಮಲ್ಲಿಕಾಸ್ಮಿತವದನಿ – ಸುತ್ಯಾಗದರ್ಶಿನೀ
ಲೋಕದಾಸೆಯ ಬಿಟ್ಟು – ಪ್ರೇಮಸೂರೆಯ ಕೊಟ್ಟು
ಸರ್ವಾತ್ಮ ಲೀಲೆಯೊಳು – ಧರ್ಮ ಕವಚವ ತೊಟ್ಟು
ಸತ್ಯದರ್ಶನಮಾದ ತಾಯೇ
ಸೆರೆ ಕೊಳೆಯ ತೊಳೆದ ಧೀಯೇ.

ಅಮರ ತೇಜದಿ ಬೆಳಗಿ – ನಿತ್ಯದಲಿ ಬಯಲಾಗಿ
ಗಾಳಿಯಲಿ ಕೀರ್ತಿಪರಿಮಳ ಬಹುದು ಹಿರಿದಾಗಿ
ಹೃದಯವನೆ ತೀಡುತಿದೆ – ದುರ್ವಿಷಯಕರಿಯಾಗಿ
ನಿರ್ಮಲವ ಮಾಡುತಿದೆ – ಬಿಡುಗಡೆಗೆ ಅಣಿಯಾಗಿ
ಹೇ ಮಾತೆ ಪ್ರಖ್ಯಾತೆ – ನಮಿಸುವೆವು ಶಿರಬಾಗಿ.
ತೆರಸು ಬಾ ಕಣ್ಗಳನು – ದೇವೀ
ನಡೆಸು ಬಾ ಸತ್ಯದಲಿ – ಓವೀ.

ಗತಿದೊರೆದ ಭಾರತೀಯರ ಜನ್ಮ ಭಾಗ್ಯಸಿರಿ
ಮುಳುಗದಿರು ಕಣ್ಮರೆಯ ಮಾಡದಿರು ಸುಖಲಹರಿ
ಭಾರತಿಯ ಸತ್ಪುತ್ರಿ-ಮಕ್ಕಳನು ನೋಡು ಬಾ
ಮುಕ್ತಹಸ್ತವ ನೀಡಿ-ಬಡತನವ ಹರಿಸು ಬಾ
ಸೆರೆಮನೆಯನೊಡೆದು ಬಾ-ತಾಯೆ ಕಸ್ತೂರಿಬಾ
ಕರುಣವನು ಕರೆಯ ಬಾ-ತಾಯೆ
ಪೂಜೆಯನು ಕೊಳ್ಳು ಬಾ-ತಾಯೆ.

ನೀನೆಲ್ಲರೊಳು ಬೆರೆತು ನಿತ್ಯಾತ್ಮವಾಗಿರುವೆ
ನಿನ್ನಂತರಂಗವೇ- ಸ್ವಾತಂತ್ರರಣರಂಗ
ನಿನ್ನ ನುಡಿ ನಿನ್ನ ನಡೆ-ಎಮ್ಮನಿದೊ ಸಾಗಿಸಿವೆ
ಭಾರತಿಯ ಬಿಡುಗಡೆಗೆ-ಸಾಹಸವಗೈಸುತಿವೆ
ಎದ್ದೇಳು ನಿನ್ನವರ- ನೆನೆದು ಬಾ ಶ್ರೀ ವಧುವೆ

ಕರುಣದಲಿ ನಿಂದೊಮ್ಮೆ ನೋಡು
ಮುಗುಳು ನಗೆಯೊಂದನ್ನು ನೀಡು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...