Home / ಕವನ / ಕವಿತೆ / ಗುಜರಾತಿನ ಗಲಭೆಗೆ ದಶಕ

ಗುಜರಾತಿನ ಗಲಭೆಗೆ ದಶಕ

ಹೋಳಿ ಹಬ್ಬ ಬಂದಿದೆ
ರಕ್ತದೋಕುಳಿಯ ಚೆಲ್ಲುತ
ಕೊಚ್ಚಿ ಹಾಕಿದ ಅಸಂಖ್ಯಾತ ಮನುಜರ
ಗುಂಡಿ ಗುಂಡಿಗಳಲ್ಲಿ ಎಸೆದ ಹೆಣ ರಾಶಿ
ಹರಿದ ರಕ್ತಕ್ಕೆ ನೆಲದ ಒಡಲು ಕೆಂಪಾಗಿದೆ

ಅಂದು ಬಲಿಯಾದ ಬಸುರಿಯರು
ಭೂಮಿಗಿನ್ನೂ ಬಾರದ ಹಸುಳೆಯನ್ನು ಸಿಗಿದು
ತ್ರಿಶೂಲಕ್ಕೆ ಸಿಕ್ಕಿಸಿ ಕುಣಿದ
ದೆವ್ವ ಕುಣಿತಕೆ ದಶಕ ಸಂದಿದೆ.

ಸತಿಯ ಚಿತೆಗೆ ನೂಕಿ ಸುಟ್ಟು
ಮಹಾಸತಿಯ ಗುಡಿ ಕಟ್ಟಿದ್ದಾರೆ
ಕನಸುಗಳ ಸುಟ್ಟ ಘಮಟು ವಾಸನೆ
ಗೊಬ್ಬರ ಸಾಲು ಸಸಿಗೆ ಪಾತಿ ಮಾಡಿ
ಒತ್ತೊತ್ತು ಕನಸು, ಮುಳ್ಳು ಬೇಲಿಗಳ ಕಿತ್ತು.

ಗುಜರಾತಿನ ಗಾಂಧಿಯ ಚರಕ
ನೂಲು ನೇಯುತ್ತಲೇ ಇದೆ ಇಂದಿಗೂ
ಶಾಂತಿ ಮಂತ್ರ ಜಪಿಸುತ್ತಲೇ ಇದೆ
ಪ್ರಗತಿಯ ಮಂತ್ರ ತಂತ್ರಗಳ ಹೇಳುತ್ತ
ನಿಷ್ಪಾಪಿಗಳ ಹತ್ಯೆ ಎಂತಹ ಸಾಧನೆ?

ಸತ್ಯ, ಶಾಂತಿ, ಅಹಿಂಸೆಯ ತತ್ತ್ವ
ಕೆಂಪುರಕ್ತದಲ್ಲಿ ಬಿದ್ದು ಒದ್ದೆಯಾಯ್ತು.
ಅಂಗಳದಲ್ಲಿ ಒಣಹಾಕಿ ಬೀಗಿದೆನು
ಎದುರಾಳಿಯ ಸೊಕ್ಕು ಮುರಿದೆನೆಂದುಕೊಂಡೆನು
ಮನುಜರಿಗೆ ಬೆಂಕಿಯಿಟ್ಟ ಪಾತಕಿಗಳು
ನಡೆದಾಡುತ್ತಿರುವರು ಆ ನಡುಬೀದಿಯಲ್ಲೇ.

ಗುಜರಾತಿನಲ್ಲಿ ಸುಟ್ಟ ಶವಗಳ ಬೂದಿ
ಘಮಟು ವಾಸನೆ ಉಬ್ಬಳಿಕೆ ಬರುತ್ತಿದೆ
ಕ್ರೌರ್ಯದ ಪರಮಾವಧಿಯೊಳಗೆ
ಹೂತು ಹೋಗಿರುವ ಮಾನವೀಯತೆ
ಕೆಂಡವಾರಿದ ಬೂದಿ ಎಲ್ಲಿ ಹಾಕಲಿ?
ಅದು ಕ್ರಾಂತಿ ಬೀಜವಾಗಿ ಮೊಳೆಯಬಹುದೆ?
ಸೈತಾನನ ಸೊಕ್ಕು ಮುರಿಯದಿದ್ದರೆ ನಾನು
ಸತ್ತವರ ಅತ್ಮಗಳ ಎದುರಿಸಲಿ ಹೇಗೆ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...