Home / ಕವನ / ಕವಿತೆ / ಹುಡುಕಾಟ

ಹುಡುಕಾಟ

ಯಾಕೆ ಹುಡುಕಬೇಕು ಹೇಳು ಗೆಳತಿ,
ಶಾಪಗ್ರಸ್ತರಾಗಿ ಕಲ್ಲಾಗಿ ಮಲಗಿದವರ
ಬೆಂಕಿಯಲಿ ಹಾರಿದವರ, ಭೂಮಿಯಲ್ಲಿ ಸೇರಿದವರ,
ಚುಕ್ಕಿಯಾಗಿ ಬಾನಲ್ಲಿ ಲೀನವಾದವರ?
ಯಾಕೆ ಹುಡುಕಬೇಕು ಹೇಳು, ನಮ್ಮಾದರ್ಶಗಳ ಅವರಲಿ
ರಾಮರಾವಣರಿಲ್ಲದ, ಕೃಷ್ಣ ಧರ್ಮರಾಯರಿಲ್ಲದ
ಈ ಕಲಿಯುಗದಲಿ?
ಪತಿಯ ಶಾಪಕ್ಕೊಳಗಾಗಿ
ರಾಮನ ಕಾಲಸ್ಪರ್ಶಕೆ ಕಾದು ಕಲ್ಲಾಗಿ ಮಲಗುವ
ಅಹಲ್ಯೆಯರು ನಾವಲ್ಲ;
ಕೈ ಹಿಡಿದವ ಶಂಕಿಸಿದನೆಂದು
ಕಾಡಿಗೆ ಹೋಗುವ ಬೆಂಕಿಗೆ ಹಾರುವ
ಸೀತೆಯರು ನಾವಲ್ಲ;
ಪತಿಯೇ ಪರದೈವವೆಂದು ತನ್ನತನವ ಮರೆತು
ಅವನ ನೆರಳಾಗಿ ಬಾಳುವ
ಅಳಿದ ಮೇಲೆ ನಕ್ಷತ್ರವಾಗಿ ಬಾನಲ್ಲಿ ಮೆರೆಯುವ
ಋಷಿ ಪತ್ನಿಯರೂ ನಾವಲ್ಲ;
ಕುರುಡು ಪತಿಗೆ ಒಡನಾಡಿಯೆಂದು
ಕೃತಕ ಕುರುಡುತನಕ್ಕೊಳಗಾಗಿ ನೂರು ಮಕ್ಕಳ ಹಡೆದು
ಅವರ ದುರ್ಯೋಧನ ದುಶ್ಯಾಸನರಾಗ ಬಿಡುವ
ಗಾಂಧಾರಿಯರು ನಾವಲ್ಲ;
ಕೈಹಿಡಿದವನಿಂದ ಸಂತಾನವಿಲ್ಲವೆಂದು
ದೇವತೆಗಳ ಮೊರೆಹೋಗಿ ಪುತ್ರೋತ್ಸವ ನಡೆಸುವ
ಕುಂತಿ ಮಾದ್ರಿಯರೂ ನಾವಲ್ಲ;
ಹಂಚಿ ತಿನಬೇಕೆಂಬ ತಾಯಿಮಾತ ದಿಟ ಮಾಡ ಹೊರಟು
ಪಂಚ ಪಾಂಡವರ ಸತಿಯಾಗಿ
ಹೃದಯದೊಳಗಿನ ಪ್ರೇಮಗೀತೆಗೆ ತಿಲಾಂಜಲಿ ಇತ್ತ
ಪಾಂಚಾಲಿಯರೂ ನಾವಲ್ಲ.
ಅವರೆಲ್ಲ ವಾಲ್ಮೀಕಿ ಕುಮಾರವ್ಯಾಸರ
ಲೇಖನಿಯಿಂದ ಹುಟ್ಟಿ ಬಂದವರು, ಕಲ್ಪನೆಯ ಕೂಸುಗಳು
ಅಲ್ಲಲ್ಲಿ ಕಥೆಯಲ್ಲಿ ಸೇರಿ ಹೋದವರು!
ಮತ್ತೇಕೆ ಹುಡುಕಬೇಕು ಹೇಳು ಗೆಳತಿ
ನಮ್ಮಾದರ್ಶಗಳ ಅವರಲ್ಲಿ
ಅವರಾತ್ಮ ಅಂತರಾಳದಲಿ ಅಡಗಿದ್ದ
ಅಂತಃಶಕ್ತಿಯ ಮರೆತು ಕುಳಿತವರಲ್ಲಿ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...