ಮರಳು ಮನೆ

ರಜಾ ದಿನದಂದು
ವೇಳೆ ಕಳೆಯಲೆಂದು
ಪುಟ್ಟ ಪುಟ್ಟಿ ಸೇರಿದರು
ತಮ್ಮ ತೋಟದತ್ತ ನಡೆದರು

ತೋಟದ ದಾರಿ ಮಧ್ಯೆ
ಹರಿಯುತ್ತಿತ್ತು ನದಿ
ನದಿಯ ಮರಳಿನಲ್ಲಿ
ಆಟವಾಡಿದರಲ್ಲಿ

ಪುಟ್ಟ ಹೇಳಿದ ಪುಟ್ಟಿಗೆ
ಮರಳಲಿ ಮನೆ ಕಟ್ಟಲು
ಮರಳಲಿ ಮನೆ ಹೇಗಣ್ಣ?
ಬೇಗ ತಿಳಿಸು ಪುಟ್ಟಣ್ಣ

ಹಸಿಯ ಮರಳಿನ ಮೇಲೆ
ಎಡ ಪಾದವಿಕ್ಕಿ ಕುಳಿತ
ಹಸಿ ಮರಳ ರಾಸಿಯನ್ನು
ಸುರಿದ ಕಾಲ ಮೇಲೆ

ಹಾಕಿಕೊಂಡ ಮರಳನ್ನು
ಕೈಗಳಿಂದ ತಟ್ಟಿದ
ಗಟ್ಟಿಯಾದ ಮರಳ ಗುಡ್ಡೆಯಿಂದ
ಮೆಲ್ಲನೆ ಕಾಲನು ಹೊರ ತೆಗೆದ

ಕಾಲು ತೆಗೆದ ಸ್ಥಳದಲ್ಲಿ
ಮರಳ ಮನೆಯ ಬಾಗಿಲ
ಚೆಂದವಿತ್ತು ನೋಡಲು
ಅದುವೆ ಪುಟ್ಟ ಗುಡಿಸಲು

ಅಣ್ಣ ಮಾಡಿದಂತೆ ಮನೆಯ
ಪುಟ್ಟಿ ಕೂಡ ಮಾಡಿದಳು
ತನ್ನ ಮರಳ ಮನೆಯ ನೋಡಿ
ಕುಣಿದು ಕುಣಿದು ನಲಿದಳು

ಬಿಸಿಲು ಕರಗಿ ಮಬ್ಬು ಮುಸುಕಿತು
ಕಪ್ಪನೆ ಮೋಡ ತೇಲಿ ಬಂದಿತ್ತು
ಅದನು ನೋಡಿದ ಪುಟ್ಟನಿಗೆ
ಬಂದಿತ್ತು ಜೀವ ಬಾಯಿಗೆ

ಕ್ಷಣದಲಿ ಆ ಮೋಡ ಕರಗಿ ನೀರಾಯಿತು
ಲಟ ಪಟ ಹನಿಯ ಸುರಿಸಹತ್ತಿತು
ಅವರ ಮುಂದೆ ಅವರ ಮರಳ ಮನೆ
ಕರಗಿ ಹೋಗಿ ಆಯ್ತು ನೀರ್ಮನೆ

ಮನೆ ಹಾಳಾದುದ ನೋಡಿದ ಪುಟ್ಟಿ
ಅತ್ತಳು ಬಿಕ್ಕಿ ಬಿಕ್ಕಿ
ತಂಗಿಯ ಸಂತೈಸುತ ಅವಳಣ್ಣ
ಅಪ್ಪನ ಬಳಿಬಿಟ್ಟ.

ಜೀವನ ಕೂಡ ಮರಳ ಮನೆ
ಹೀಗೇ ನಶಿಸಿ ಹೋಗುವುದು
ದುಃಖ ಸಂತಸ ಶಾಶ್ವತವಲ್ಲ
ಅರಿತು ನಡೆದರೆ ಸ್ವರ್ಗ ಸಿಗುವುದು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...