Home / ಲೇಖನ / ಇತರೆ / ವಚನ ವಿಚಾರ – ಹಸಿವು, ಸುಳ್ಳು, ಅನಿವಾರ್ಯ

ವಚನ ವಿಚಾರ – ಹಸಿವು, ಸುಳ್ಳು, ಅನಿವಾರ್ಯ

ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜಡಿದೊಮ್ಮೆ ನುಡಿಯದಿರಾ
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ
ರಾಮನಾಥ

ಜೇಡರ ದಾಸಿಮಯ್ಯನ ವಚನ. ಕಳಬೇಡ, ಕೊಲಬೇಡ ಎಂದಿತ್ಯಾದಿಯಾಗಿ ಬಸವಣ್ಣ ಹೇಳಿದ್ದಕ್ಕೆ ಪ್ರತಿಯಾದ ಸವಾಲಿನಂತಿದೆ ಈ ಮಾತು. ದೇಹ ಇರುವವರೆಗೆ ಹಸಿವು ಇರುತ್ತದೆ, ಹಸಿವು ಇರುವವರೆಗೆ ಸುಳ್ಳೂ ಇರುತ್ತದೆ. ದೇಹ ಇರುವ ಮನುಷ್ಯ ಹಸಿಯದೆ, ಸುಳ್ಳು ಹೇಳದೆ ಇರಲಾರ. ಸುಮ್ಮನೆ ಒಣ ನೀತಿಯನ್ನು ದೇವರೇ ಹೇಳಿದರೂ ಅದನ್ನು ಒಪ್ಪಲಾರೆ.

ದೇವರೇ, ನೀನು ನನ್ನ ಹಾಗೆ ಒಮ್ಮೆ ದೇಹಧಾರಿಯಾಗಿ ನೋಡು, ಸುಳ್ಳು ಹೇಳದೆ, ಹಸಿವು ಅನುಭವಿಸದೆ ಇರುವುದಕ್ಕೆ ಸಾಧ್ಯವೇ ಎಂದು-ಇದು ಭಕ್ತನ ಸವಾಲು. ಇದು ಸವಾಲೋ, ಸಮರ್ಥನೆಯೋ? ನಾವು ಹೇಳುವ ಸುಳ್ಳುಗಳಿಗೆ ಸಮರ್ಥನೆ ಎಂದು ಈ ವಚನವನ್ನು ನೋಡಬೇಕಾಗಿಲ್ಲ. ಹಸಿವು, ಸುಳ್ಳುಗಳು ಮನುಷ್ಯನಿಗೆ ಅನಿವಾರ್ಯವಾಗುವ ಸ್ಥಿತಿ ಬಂದಿದೆಯಲ್ಲಾ ಅನ್ನುವ ನೋವು ಕಾಣಿಸುತ್ತದೆ. ಹಸಿವನ್ನು, ಸುಳ್ಳನ್ನು ಟೀಕಿಸುವುದಕ್ಕಿಂತ ಅರ್ಥಮಾಡಿಕೊಳ್ಳುವುದು ಮುಖ್ಯ. ಅರ್ಥಮಾಡಿಕೊಂಡರೆ ನಿಜವಾದ ದೇವರಾಗಬಹುದು ಅನ್ನುವ ದೃಷ್ಟಿ ಕಾಣುತ್ತದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...